ಪಾದಚಾರಿಗಳ ಸುರಕ್ಷತೆಗಾಗಿ ಯಶವಂತಪುರದಿಂದ ಸ್ಯಾಂಡಲ್ ಸೋಪ್ ಮೆಟ್ರೋ ನಿಲ್ದಾಣಗಳವರೆಗೆ ತನ್ನ ನಿಲ್ದಾಣಗಳ ಕೆಳಗಿನ ರಸ್ತೆಯಲ್ಲಿ BMRCL ನಿಂದ ಬ್ಯಾರಿಕೇಡಿಂಗ್ ನಿರ್ಮಾಣ 
ರಾಜ್ಯ

ಪಾದಚಾರಿಗಳ ಅಪಘಾತ ತಪ್ಪಿಸಲು ಕ್ರಮ: ತುಮಕೂರು ಮುಖ್ಯರಸ್ತೆಯಲ್ಲಿ BMRCL ನಿಂದ ಸುರಕ್ಷತಾ ತಡೆಗೋಡೆ ನಿರ್ಮಾಣ

ಯಶವಂತಪುರದಿಂದ ನಾಗಸಂದ್ರದವರೆಗಿನ ಬಿಎಂಆರ್‌ಸಿಎಲ್‌ನ ಹಸಿರು ಮಾರ್ಗವು ತುಮಕೂರು ರಸ್ತೆಯುದ್ದಕ್ಕೂ ಹಾದು ಹೋಗುತ್ತಿದ್ದು, ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಸಾರ್ವಜನಿಕರು ಅಪಾಯಕ್ಕೆ ಸಿಲುಕಿದ್ದಾರೆ.

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ತುಮಕೂರು ರಸ್ತೆಯಲ್ಲಿ ಯಶವಂತಪುರದಿಂದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಕಡೆಗೆ ಸಾಗುವ ಮೆಟ್ರೊ ಪ್ರಯಾಣಿಕರು ಮತ್ತು ರಸ್ತೆ ದಾಟುವ ಇತರ ಪಾದಚಾರಿಗಳಿಗೆ ಅಪಘಾತಗಳಾಗದಂತೆ ಅನಾಹುತ ತಪ್ಪಿಸಲು ಬ್ಯಾರಿಕೇಡ್ ಹಾಕಿದೆ. ಸಂಚಾರ ಪೊಲೀಸರು ಬಿಎಂಆರ್‌ಸಿಎಲ್‌ಗೆ 1.5 ಕಿಮೀ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಯಶವಂತಪುರದಿಂದ ನಾಗಸಂದ್ರದವರೆಗಿನ ಬಿಎಂಆರ್‌ಸಿಎಲ್‌ನ ಹಸಿರು ಮಾರ್ಗವು ತುಮಕೂರು ರಸ್ತೆಯುದ್ದಕ್ಕೂ ಹಾದು ಹೋಗುತ್ತಿದ್ದು, ಈ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಸಾರ್ವಜನಿಕರು ಅಪಾಯಕ್ಕೆ ಸಿಲುಕಿದ್ದಾರೆ. ಯಶವಂತಪುರದಲ್ಲಿ ಸ್ಥಾಪಿಸಲಾದ ಸ್ಟೀಲ್ ಬ್ಯಾರಿಕೇಡ್ 500 ಮೀಟರ್ ಉದ್ದ ಮತ್ತು 7 ಮೀಟರ್ ಎತ್ತರಕ್ಕೆ ಸಾಗುತ್ತದೆ.

ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ಈ ಬಗ್ಗೆ TNIE ಜೊತೆ ಮಾತನಾಡಿ, ಸಂಚಾರ ಪೊಲೀಸರ ಶಿಫಾರಸಿನ ಮೇರೆಗೆ ಈ ರಸ್ತೆಯ ಮಧ್ಯಭಾಗದಲ್ಲಿ BMRCL ಈ ವರ್ಷದ ಆರಂಭದಲ್ಲಿ ಬ್ಯಾರಿಕೇಡಿಂಗ್ ಹಾಕಿತು ಎಂದರು. ಯಶವಂತಪುರ ಟ್ರಾಫಿಕ್ ಇನ್‌ಸ್ಪೆಕ್ಟರ್ ಬಿ ಚಿದಾನಂದ, ಕಳೆದ ಎರಡು ವರ್ಷಗಳಲ್ಲಿ, ನಾವು ಈ ರಸ್ತೆಯಲ್ಲಿ ಕೆಲವು ಸಾವು-ನೋವುಗಳು ಉಂಟಾಗಿವೆ. 2024 ರ ಐದು ತಿಂಗಳಲ್ಲಿ ನಾವು ಯಾವುದೇ ಪಾದಚಾರಿ ಅಪಘಾತಗಳನ್ನು ನೋಡಿಲ್ಲ ಎಂದರು.

2023 ರಲ್ಲಿ, ಪಾದಚಾರಿಗಳು ದಾಟುವಾಗ ವೇಗವಾಗಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಮೂರು ಸಾವುಗಳು ಮತ್ತು ನಾಲ್ಕು ಗಾಯಗಳು ಸಂಭವಿಸಿವೆ ಎಂದು ಸಂಚಾರ ಮೂಲಗಳು ತಿಳಿಸಿವೆ. ಬ್ಯಾರಿಕೇಡ್ ದಾಟಲು ಸಾಧ್ಯವಾಗದ ಕಾರಣ ಈ ವರ್ಷ ಯಾವುದೇ ಅಪಘಾತಗಳು ಸಂಭವಿಸಿಲ್ಲ. ಕಳೆದ ತಿಂಗಳು ಈ ರಸ್ತೆಯಲ್ಲಿ ಮಹಿಳೆಯೊಬ್ಬರು ಬ್ಯಾರಿಕೇಡ್ ಇಲ್ಲದ ಭಾಗವನ್ನು ದಾಟುವಾಗ ಕಾರು ಡಿಕ್ಕಿ ಹೊಡೆದು ಅಪಘಾತದಲ್ಲಿ ಮೃತಪಟ್ಟರು. ಸುರಕ್ಷತಾ ತಡೆಗೋಡೆ ವಿಸ್ತರಿಸುವ ಅಗತ್ಯವಿದೆ ಎಂದು ಮನಗಂಡಿದ್ದೇವೆ ಎಂದರು.

ಮಾರನಪಾಳ್ಯದಿಂದ ಸಿಎನ್‌ಟಿಐ ಜಂಕ್ಷನ್‌ವರೆಗೆ ಬ್ಯಾರಿಕೇಡಿಂಗ್‌ ವಿಸ್ತರಿಸುವಂತೆ ಸಂಚಾರ ಪೊಲೀಸರು ಕಳೆದ ವಾರ ಬಿಎಂಆರ್‌ಸಿಎಲ್‌ನ ಬೈಯಪ್ಪನಹಳ್ಳಿ ಕಚೇರಿಯಲ್ಲಿ ಜನರಲ್‌ ಮ್ಯಾನೇಜರ್‌ಗೆ ಲಿಖಿತ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಮನವಿ ಮೇರೆಗೆ ಎರಡು ತಿಂಗಳ ಹಿಂದೆ ಏಳು ಅಡಿ ಎತ್ತರದಲ್ಲಿ ಸ್ಟೀಲ್ ಬ್ಯಾರಿಕೇಡ್ ಅಳವಡಿಸಿದ್ದೇವೆ ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬ್ಯಾರಿಕೇಡ್ ವಿಸ್ತರಿಸುವ ಬಗ್ಗೆ ಬಿಎಂಆರ್‌ಸಿಎಲ್ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT