ಗರ್ಭಿಣಿ ಮಹಿಳೆ (ಸಾಂದರ್ಭಿಕ ಚಿತ್ರ) TNIE
ರಾಜ್ಯ

ಅವಳಿ ಮಕ್ಕಳ ತಾಯಿ ಸಾವು: ರಾಜ್ಯದಲ್ಲಿ ಸುಧಾರಿತ ಹೆರಿಗೆ ಸೌಲಭ್ಯಗಳ ಕಲ್ಪಿಸಿ; ಸರ್ಕಾರಕ್ಕೆ ತಜ್ಞರ ಸಲಹೆ

ವಿಜಯಪುರ ಜಿಲ್ಲೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ತಪ್ಪಾದ ರಕ್ತದ ಗುಂಪಿನಿಂದ ದಾರುಣವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ರಾಜ್ಯದಲ್ಲಿ ಸುಧಾರಿತ ಹೆರಿಗೆ ಸೌಲಭ್ಯಗಳ ನಿರ್ಮಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯೊಬ್ಬರು ತಪ್ಪಾದ ರಕ್ತದ ಗುಂಪಿನಿಂದ ದಾರುಣವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ರಾಜ್ಯದಲ್ಲಿ ಸುಧಾರಿತ ಹೆರಿಗೆ ಸೌಲಭ್ಯಗಳ ಕಲ್ಪಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಹುಶಿಸ್ತೀಯ ತಜ್ಞರು, ವಿಶೇಷ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು ಮತ್ತು ರಕ್ತನಿಧಿಗಳನ್ನು ಒಳಗೊಂಡ ಸಮಗ್ರ ಹೆರಿಗೆ ಸೌಲಭ್ಯದ ಅಗತ್ಯವನ್ನು ಒತ್ತಿ ಹೇಳಿದ್ದು, ಅತಿಯಾದ ರಕ್ತಸ್ರಾವ ಮತ್ತು ಇತರ ನಿರ್ಣಾಯಕ ರೋಗಲಕ್ಷಣಗಳಂತಹ ತೊಡಕುಗಳನ್ನು ತ್ವರಿತವಾಗಿ ನಿರ್ವಹಿಸಲು ಸುಸಜ್ಜಿತವಾದ ಘಟಕಗಳನ್ನು ನಿರ್ಮಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಬಬಲೇಶ್ವರ ಸಮೀಪದ ದಡಮಟ್ಟಿ ಗ್ರಾಮದಲ್ಲಿ ಮಹಿಳೆ ಸಾವು ಘಟನೆ ವರದಿಯಾಗಿದ್ದು, ಶಾರದಾ ದೊಡಮನಿ ಅವರು ಜಿಲ್ಲಾಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಆದರೆ ತಪ್ಪು ಗುಂಪಿನ ರಕ್ತ ವರ್ಗಾವಣೆಯಿಂದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ತುರ್ತು ಮತ್ತು ತೀವ್ರ ನಿಗಾ ಘಟಕದ (ಐಸಿಯು) ಮುಖ್ಯಸ್ಥ ಡಾ ರಮೇಶ್ ಜಿಹೆಚ್ ಅವರು ಈ ಬಗ್ಗೆ ಮಾತನಾಡಿದ್ದು, “ವೈದ್ಯರು ಮತ್ತು ದಾದಿಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ರಕ್ತ ನೀಡುವ ಮುನ್ನ ಅದನ್ನು ಪರೀಕ್ಷಿಸುವ ಪ್ರಮಾಣಿತ ಪ್ರೋಟೋಕಾಲ್‌ಗೆ (ಶಿಷ್ಟಾಚಾರ) ಬದ್ಧರಾಗಿರಬೇಕು. ಇದು ರಕ್ತದ ಗುಂಪು, Rh ಅಂಶ, ದಿನಾಂಕ ಮತ್ತು ತಾಪಮಾನವನ್ನು ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ. ಇದಲ್ಲದೆ ತಾಪಮಾನ ಕಾಪಾಡಿಕೊಳ್ಳುವಿಕೆ, ರಕ್ತದ ತ್ವರಿತ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳುವುದು ಆದ್ಯತೆಯ ಅಗತ್ಯ ಅಂಶಗಳಾಗಿವೆ ಎಂದು ಹೇಳಿದ್ದಾರೆ.

ಅಂತೆಯೇ ಜಿಲ್ಲಾಸ್ಪತ್ರೆ ಲೋಪದೋಷಗಳನ್ನು ಎತ್ತಿ ತೋರಿಸುತ್ತಾ, ಅನೇಕ ಆಸ್ಪತ್ರೆಗಳಲ್ಲಿ ಸುಸಜ್ಜಿತವಾದ ತೀವ್ರ ನಿಗಾ ಘಟಕ (ICU), ವೆಂಟಿಲೇಟರ್‌ಗಳು ಮತ್ತು ಅಗತ್ಯವಾದ ಪೂರಕ ಯಂತ್ರೋಪಕರಣಗಳ ಕೊರತೆಯಿದೆ. ಜೊತೆಗೆ ಅಂತಹ ಘಟಕಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲ ತರಬೇತಿ ಪಡೆದ ಸಿಬ್ಬಂದಿಗಳ ಅಗತ್ಯವೂ ಇವೆ. ಹೆರಿಗೆ ಕೇಂದ್ರಗಳು ರಕ್ತನಿಧಿ ಕೇಂದ್ರವನ್ನು ಅಳವಡಿಸಿಕೊಳ್ಳಬೇಕು. ಅಂತೆಯೇ ಹೆಚ್ಚುವರಿಯಾಗಿ ರಕ್ತನಿಧಿ ಅಧಿಕಾರಿ ಮತ್ತು ರಕ್ತನಿಧಿ ಸಿಬ್ಬಂದಿ ಇಬ್ಬರಿಗೂ ನಿಯಮಿತ ತರಬೇತಿಗಳನ್ನು ಕಡ್ಡಾಯಗೊಳಿಸಬೇಕು ಎಂದು ಡಾ ರಮೇಶ್ ಹೇಳಿದರು.

ಆಸ್ಟರ್ CMI ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ ಎನ್ ಸಪ್ನಾ ಲುಲ್ಲಾ ಅವರು ಈ ಬಗ್ಗೆ ಮಾತನಾಡಿದ್ದು, "ಗರ್ಭಿಣಿ ಅಥವಾ ಹೆರಿಗೆ ಮಹಿಳೆಗೆ ರಕ್ತ ವರ್ಗಾವಣೆಯ ಸಮಯದಲ್ಲಿ ಸ್ತ್ರೀರೋಗತಜ್ಞರು ಅಥವಾ ತಜ್ಞ ವೈದ್ಯರನ್ನು ಹೊಂದಿರುವುದು ಬಹಳ ಮುಖ್ಯ, ಏಕೆಂದರೆ ಕಾರ್ಯವಿಧಾನದ ಸಮಯದಲ್ಲಿ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು. ಹೊಂದಿಕೆಯಾಗದ ರಕ್ತದ ಗುಂಪುಗಳಿಂದಾಗಿ ರಕ್ತ ವರ್ಗಾವಣೆಯ ಪ್ರತಿಕ್ರಿಯೆಗಳ ನಿದರ್ಶನಗಳಲ್ಲಿ (ರಿಯಾಕ್ಷನ್), ತಕ್ಷಣದ ಪ್ರತಿಕ್ರಿಯೆ ಎಂದರೆ ರಕ್ತ ವರ್ಗಾವಣೆಯನ್ನು ನಿಲ್ಲಿಸಬೇಕು. ಇಂಟ್ರಾವೆನಸ್ (IV) ಅನ್ನು ಸುರಕ್ಷಿತಗೊಳಿಸಬೇಕು ಎಂದು ಹೇಳಿದರು.

ಸಿಸೇರಿಯನ್ ಮಾತ್ರವಲ್ಲದೇ ಸಾಮಾನ್ಯ ನೈಸರ್ಗಿಕ ಹೆರಿಗೆ ಸಂದರ್ಭದಲ್ಲೂ ಅಧಿಕ ರಕ್ತಸ್ರಾವವಾಗುತ್ತದೆ ಎಂಬುದನ್ನು ನಾವು ಮನಗಾಣಬೇಕು. ಆದ್ದರಿಂದ, ಹೆರಿಗೆಯ ವಿಧಾನ ಮತ್ತು ತಾಯಿಯ ಸುರಕ್ಷಿತ ಜನನ ಮತ್ತು ಹೆರಿಗೆಯ ನಂತರದ ಆರೋಗ್ಯಕ್ಕೆ ಆದ್ಯತೆ ನೀಡುವ ಕೇಂದ್ರವನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT