ಸಾಂದರ್ಭಿಕ ಚಿತ್ರ 
ರಾಜ್ಯ

ಬ್ಯಾಂಕ್ ಸಿಬ್ಬಂದಿ, ಹೂಡಿಕೆ ಸಂಸ್ಥೆ ಅಧಿಕಾರಿಗಳು ಶಾಮೀಲು, ಮೃತ ಮಹಿಳೆ ಹೆಸರಿನಲ್ಲಿ ಖಾತೆ ತೆರೆದು 13 ಕೋಟಿ ರೂ. ವಂಚನೆ!

ತಮಿಳುನಾಡಿನ ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಖಾಸಗಿ ಹೂಡಿಕೆ ಸಂಸ್ಥೆಗಳ ಅಧಿಕಾರಿಗಳು ಪರಸ್ಪರ ಶಾಮೀಲಾಗಿ ಅದೇ ಬ್ಯಾಂಕ್ ಶಾಖೆಯಲ್ಲಿ ಮೃತ ಮಹಿಳೆಯ ಹೆಸರಿನಲ್ಲಿ ಖಾತೆ ತೆರೆದು ಆಕೆಯ ಖಾತೆಯಿಂದ 13 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ತಮಿಳುನಾಡಿನ ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಖಾಸಗಿ ಹೂಡಿಕೆ ಸಂಸ್ಥೆಗಳ ಅಧಿಕಾರಿಗಳು ಪರಸ್ಪರ ಶಾಮೀಲಾಗಿ ಅದೇ ಬ್ಯಾಂಕ್ ಶಾಖೆಯಲ್ಲಿ ಮೃತ ಮಹಿಳೆಯ ಹೆಸರಿನಲ್ಲಿ ಖಾತೆ ತೆರೆದು ಆಕೆಯ ಖಾತೆಯಿಂದ 13 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.

ನಗರದ ಸಿದ್ದಾಪುರ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧಿಕಾರಿಗಳು ಮತ್ತು ಖಾಸಗಿ ಹೂಡಿಕೆ ಸಂಸ್ಥೆಗಳ ಉದ್ಯೋಗಿಗಳು ಶಕುಂತಲಾ ವೆಂಕಟಪ್ಪ ಕೃಷ್ಣಪ್ಪ ಅವರ ಖಾತೆಯಿಂದ 13.15 ಕೋಟಿ ರೂ.ಗಳನ್ನು ಬಸವನಗುಡಿಯ ಕೆ.ಆರ್.ರಸ್ತೆಯ ಎಸ್‌ಬಿಐ ಶಾಖೆಯಿಂದ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಮನಾಲಿಯಲ್ಲಿನ ಆಕೆಯ ಹೆಸರಿನಲ್ಲಿರುವ ಮತ್ತೊಂದು ಖಾತೆಗೆ ವರ್ಗಾಯಿಸಿದ್ದಾರೆ.

ಶಕುಂತಲಾ ಅವರು ಆಗಸ್ಟ್ 1, 2019 ರಂದು ನಿಧನರಾದರು, ಆದರೆ ತಮಿಳುನಾಡಿನಲ್ಲಿ ಮಾರ್ಚ್ 25, 2022 ರಂದು ಖಾತೆ ತೆರೆಯಲಾಗಿದ್ದು, ಅವರು ಖುದ್ದಾಗಿ ಶಾಖೆಗೆ ಭೇಟಿ ನೀಡಿ ಖಾತೆಯನ್ನು ತೆರೆದಿದ್ದಾರೆ ಎಂದು ತೋರಿಸುತ್ತದೆ. ಖಾತೆಯಲ್ಲಿ ಆಕೆಯ ಸಾವಿನ ಬಗ್ಗೆ ಉಲ್ಲೇಖವಿದ್ದರೂ, ಅಪರಾಧಿಗಳು ದಾಖಲೆಗಳು ಮತ್ತು ಆಕೆಯ ಸಹಿಯನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೊತ್ತವನ್ನು ಮನಾಲಿ ಶಾಖೆಗೆ ವರ್ಗಾಯಿಸಿದ ನಂತರ, ಅದನ್ನು ಸುಮಾರು 25 ಫಲಾನುಭವಿಗಳ ಖಾತೆಗಳಿಗೆ ವಿಭಜಿಸಲಾಗಿದೆ ಎಂದು ಹೇಳಲಾಗಿದೆ.

ಆದಿತ್ಯ ಬಿರ್ಲಾ ಸನ್‌ಲೈಫ್ ಮ್ಯೂಚುವಲ್ ಫಂಡ್‌ನ ಕಾರ್ಯಾಚರಣೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಆರೋಪಿಗಳಲ್ಲಿ ಒಬ್ಬರಾದ ಸುಸನ್ ಸರಿತಾ ಡಿಸೋಜಾ ಅಲಿಯಾಸ್ ಸುಮನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಾರ್ಚ್ 19 ರಂದು ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಮುರಳೀಧರ ಪೈ ಬಿ ತಿರಸ್ಕರಿಸಿದರು. ಮೃತರ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ಅಪ್ ಡೇಟ್ ಮಾಡುವಲ್ಲಿ ಆರೋಪಿ ನಂ.12 ಸಂದೀಪ್ ಜೊತೆ ಸುಸಾನ್ ಕೈಜೋಡಿಸಿ ಆಕೆಯ ಸಹಿ ಮತ್ತು ದಾಖಲೆಗಳನ್ನು ನಕಲಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿದೆ.

ಮೃತರು ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸಂದೀಪ್‌ಗೆ ಸುಸಾನ್ ಮಾಹಿತಿ ನೀಡಿದರು. ಇದಕ್ಕಾಗಿ ಆಕೆ ಆರೋಪಿ ನಂ 1 ರಿಂದ ಗೂಗಲ್ ಪೇ ಮೂಲಕ 1 ಲಕ್ಷ ರೂ. ಪಡೆದಿದ್ದರು. ಮೃತ ಮಹಿಳೆ ಬಿ.ಎಸ್. ವೆಂಕಟಕೃಷ್ಣಪ್ಪ ಮತ್ತು ಶಕುಂತಲಾ ವಿ ಕೃಷ್ಣಪ್ಪ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದರು ಎಂದು ಎಸ್‌ಬಿಐ, ಇಂಟಿಗ್ರೇಟೆಡ್ ಎಂಟರ್‌ಪ್ರೈಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ಅಧಿಕಾರಿಗಳು ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿದ್ದಾಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರುದಾರರಾದ ಮಾಜಿ ಹೈಕೋರ್ಟ್ ನ್ಯಾಯಾಧೀಶ ವೈದ್ಯನಾಥ ಅವರ ಪತ್ನಿ ಮಾಲತಿ ವೈದ್ಯನಾಥ ಅವರು ತಿಳಿಸಿದ್ದಾರೆ. ಮಾಲತಿ ಶಕುಂತಲೆಯ ಸಂಕಲ್ಪವನ್ನು ನೆರವೇರಿಸುತ್ತಿದ್ದರು.

ಶಕುಂತಲಾ ಅವರು ಆಗಸ್ಟ್ 21, 2019 ರಂದು ನಿಧನರಾದರು ಮತ್ತು ಅದಕ್ಕೂ ಮುನ್ನಾ ಉಯಿಲು ಮಾಡಿದ್ದರು. ಮೊದಲ ಕಾರ್ಯನಿರ್ವಾಹಕರು ಇಲ್ಲದ ಕಾರಣ ಮೂರನೇ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮಾಲತಿ ಅವರು ಇತ್ತೀಚೆಗೆ ಬ್ಯಾಂಕ್‌ಗೆ ಭೇಟಿ ನೀಡಿದ್ದು ಆಘಾತಕಾರಿಯಾಗಿ, ಟ್ರಸ್ಟಿಗಳು ಅಥವಾ ಉಯಿಲು ಕಾರ್ಯನಿರ್ವಾಹಕರ ಗಮನಕ್ಕೆ ಬರದೆ ಕೋಟ್ಯಂತರ ರೂ. ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ನಂತರ ಮಾಲತಿ ಅವರು ಏಪ್ರಿಲ್ 28, 2023 ರಂದು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

SCROLL FOR NEXT