ನಟ ದುನಿಯಾ ವಿಜಯ್ ಮತ್ತು ಕೊಲೆ ಆರೋಪಿ ಸುರೇಶ್ 
ರಾಜ್ಯ

Duniya Vijay ಶ್ಯೂರಿಟಿ ನೀಡಿದ್ದ ಆರೋಪಿಯಿಂದ ಜೋಡಿ ಕೊಲೆ!; ಕಾರಣ ಸಿಟ್ಟು, ಅವಮಾನ!

ಈ ಹಿಂದೆ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದ ಸುರೇಶ್ ಮತ್ತೆರಡು ಕೊಲೆ ಮಾಡಿ ಮತ್ತೆ ಜೈಲುಪಾಲಾಗಿದ್ದಾನೆ. ನವೆಂಬರ್ 8ರಂದು ಬೆಂಗಳೂರಿನ ಹೊರವಲಯ ರಾತ್ರಿ ಜೋಡಿ ಕೊಲೆ ನಡೆದಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ನೆರವಿನಿಂದ ಶ್ಯೂರಿಟಿ ಪಡೆದು ಬಿಡುಗಡೆಯಾಗಿದ್ದ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸುರೇಶ್ ಇದೀಗ ಮತ್ತೆ ಜೋಡಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ.

ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, 'ಈ ಹಿಂದೆ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದ ಸುರೇಶ್ ಮತ್ತೆರಡು ಕೊಲೆ ಮಾಡಿ ಮತ್ತೆ ಜೈಲುಪಾಲಾಗಿದ್ದಾನೆ. ನವೆಂಬರ್ 8ರಂದು ಬೆಂಗಳೂರಿನ ಹೊರವಲಯದ ಬಾಗಲೂರಿನಲ್ಲಿ ಜೋಡಿ ಕೊಲೆ ನಡೆದಿದೆ.

ಎಸ್​ಆರ್ಎಸ್ ಟ್ರಾವೆಲ್ಸ್ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಕೊಲೆಯಾಗಿದ್ದು, ಈ ಕೊಲೆಗಳನ್ನು ಸುರೇಶ್ ಮಾಡಿದ್ದಾನೆ ಎಂದು ಹೇಳಲಾಗಿದೆ.

ಕೊಲೆಗೆ ಕಾರಣವೇನು?

ಮೂಲಗಳ ಪ್ರಕಾರ ಜೈಲಿಂದ ಬಿಡುಗಡೆ ಆದ ಬಳಿಕ ಸುರೇಶ್ ಬದಲಾಗಿದ್ದ. ಮಾರ್ಕೆಟ್​ನಲ್ಲಿ ಕೊತ್ತುಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಾ ಇದ್ದ. ಸುರೇಶ್ ತನ್ನ ಸಂಬಂಧಿಯಿಂದ ಬಾಗಲೂರಿನ ಶೆಡ್​ನಲ್ಲಿ ಕೆಲಸ ಪಡೆದುಕೊಂಡಿದ್ದ. ಪ್ರಸ್ತುತ ಕೊಲೆಯಾಗಿರುವ ನಾಗೇಶ್ ಮತ್ತು ಮಂಜುನಾಥ್, ಸುರೇಶ್ ಗೆ ಅಪಮಾನಿಸಿದ್ದರಂತೆ.

ಗುಜರಿ ಮಾರಾಟ ಮಾಡುವ ವಿಚಾರಕ್ಕೆ ನಡೆದ ಕಿರಿಕ್‌ ಬಳಿಕ ತಾರಕ್ಕೇರಿದೆ. ಈ ವೇಳೆ ನಾಗೇಶ್ ಮತ್ತು ಮಂಜುನಾಥ್ ‘ನೀನು ಕಳ್ಳ, ಕೊಲೆಗಾರ’ ಎಂದು ಪದೇ ಪದೇ ಸುರೇಶ್​ ನನ್ನು ಹೀಯಾಳಿಸಿದ್ದರು. ಇದರಿಂದ ಸಿಟ್ಟಾದ ಸುರೇಶ್ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ. ಆ ಮೂಲಕ ಸುರೇಶ್ ಮತ್ತೆ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ.

ಈ ಹಿಂದೆ ನಟ ದುನಿಯಾ ವಿಜಯ್ ಅವರು ಜಾಮೀನು ಹಣ ನೀಡಿ ಸುರೇಶ್ ಅನ್ನು ಜೈಲಿನಿಂದ ಹೊರಗೆ ತಂದಿದ್ದರು. ಆದರೆ, ಸುರೇಶ್ ಮತ್ತೆ ಅಪರಾಧ ಮಾಡಿ ಜೈಲು ಸೇರಿದ್ದಾನೆ.

ಯಾರು ಈ ಸುರೇಶ್?

ಸುರೇಶ್ ಕೊಲೆ ಹಾಗೂ ರೇಪ್ ಕೇಸ್​ನಲ್ಲಿ 10 ವರ್ಷ ಶಿಕ್ಷೆ ಅನುಭವಿಸಿದ್ದ. ಈತನಿಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಒಂದಷ್ಟು ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ದುನಿಯಾ ವಿಜಯ್ ಶ್ಯೂರಿಟಿ ಹಣ ಕೊಟ್ಟಿದ್ದರು. ಈ ವೇಳೆ ಸುರೇಶ್​ಗೂ ಕೂಡ ದುನಿಯಾ ವಿಜಿ ಮೂರು ಲಕ್ಷ ರೂಪಾಯಿ ಶ್ಯೂರಿಟಿ ಹಣ ನೀಡಿದ್ದರು.

ಈ ಮೂಲಕ ಸುರೇಶ್​ನ ಹೊರ ತಂದಿದ್ದರು. ಆದರೆ, ಈಗ ದುನಿಯಾ ವಿಜಯ್ ಅವರ ಸದಾಶಯವನ್ನು ಸುರೇಶ್ ವ್ಯರ್ಥ ಮಾಡಿದ್ದಾನೆ. ಅಲ್ಲದೆ ಇನ್ಮುಂದೆ ದುನಿಯಾ ವಿಜಯ್‌ ಅವರು ಯಾರನ್ನಾದರೂ ಜೈಲಿನಿಂದ ಬಿಡಿಸಬೇಕು ಎಂದರೆ ಪದೇ ಪದೇ ವಿಚಾರ ಮಾಡುವಂತೆ ಮಾಡಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

SCROLL FOR NEXT