ನಟ ದರ್ಶನ್ online desk
ರಾಜ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಮತ್ತೊಂದು ಬೇಡಿಕೆ ಈಡೇರಿಸಿದ ಬಳ್ಳಾರಿ ಜೈಲಧಿಕಾರಿಗಳು

ಜೈಲಿನ ನಿಯಮಾವಳಿಯ ಪ್ರಕಾರ ಖೈದಿಗಳಿಗೆ ಅವರ ಮನವಿಯ ಆಧಾರದ ಮೇಲೆ ಟಿವಿ ಅಳವಡಿಸುವ ವ್ಯವಸ್ಥೆ ಇದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಇದೀಗ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರ ಮತ್ತೊಂದು ಬೇಡಿಕೆಯನ್ನು ಪೊಲೀಸರು ಈಡೇರಿಸಿದ್ದಾರೆ.

ದರ್ಶನ್ ಅವರು ಜೈಲಿನೊಳಗಿನ ಇಂಡಿಯನ್ ಟಾಯ್ಲೆಟ್ ನಲ್ಲಿ ನನಗೆ ಕೂರಲಾಗುವುದಿಲ್ಲವಾದ್ದರಿಂದ ಸರ್ಜಿಕಲ್ ಚೇರ್ ಒದಗಿಸುವಂತೆ ಮನವಿ ಮಾಡಿದ್ದರು. ಜೊತೆಗೆ ಫೋನ್ ಕಾಲ್ ಮಾಡಲು ಅನುಮತಿ ನೀಡಬೇಕು ಎಂದು ಸಹ ಅವರು ಜೈಲಧಿಕಾರಿಗೆ ಮನವಿ ಮಾಡಿದ್ದರು. ಈ ಎರಡೂ ಮನವಿಗಳನ್ನು ಪುರಸ್ಕರಿಸಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಕಳೆದ ವಾರವಷ್ಟೇ ದರ್ಶನ್ ಅವರು ತನ್ನ ವಿರುದ್ಧ ಸಲ್ಲಿಸಲಾಗಿರುವ ಚಾರ್ಚ್ ಶೀಟ್ ನಲ್ಲಿ ಏನಿದೆ ಎಂಬುದನ್ನು ಅರಿಯಲು ಮತ್ತು ಹೊರ ಜಗತ್ತಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯುವ ಸಲುವಾಗಿ ತನಗೆ ಟಿವಿ ಒದಗಿಸಿಕೊಡುವಂತೆ ಜೈಲಧಿಕಾರಿಗಳು ಮನವಿ ಮಾಡಿದ್ದರು. ಅದರಂತೆ ಇದೀಗ 32 ಇಂಚಿನ ಟಿವಿಯಲ್ಲಿ ದರ್ಶನ್ ಅವರನ್ನು ಬಂಧಿಯಾಗಿರಿಸಿರುವ ಸೆಲ್ ನಲ್ಲಿ ಅಳವಡಿಸಲಾಗಿದೆ. ಜೈಲಿನ ನಿಯಮಾವಳಿಯ ಪ್ರಕಾರ ಖೈದಿಗಳಿಗೆ ಅವರ ಮನವಿಯ ಆಧಾರದ ಮೇಲೆ ಟಿವಿ ಅಳವಡಿಸುವ ವ್ಯವಸ್ಥೆ ಇದೆ. ಆದರೆ ಟಿವಿ ರಿಪೇರಿಯಾಗಬೇಕಿದ್ದರಿಂದ ಅಳವಡಿಸಲು ವಿಳಂಬವಾಗಿದೆ ಎಂದು ಜೈಲಧಿಕಾರಿ ತಿಳಿಸಿದ್ದಾರೆ.

ಈ ಎಲ್ಲಾ ವ್ಯವಸ್ಥೆಗಳಿಗಾಗಿ ದರ್ಶನ್ ಅವರು ಜೈಲಧಿಕಾರಿಯ ಖಾಸಗಿ ಖಾತೆಗೆ 35000 ರೂಪಾಯಿಗಳನ್ನು ಜಮಾ ಮಾಡಿದ್ದಾರೆ. ಜೊತೆಗೆ ಜೈಲು ಕ್ಯಾಂಟೀನಿಂದ ತರಿಸಿಕೊಂಡಿರುವ ಟೀ, ಕಾಫಿಗಾಗಿ ಈವರೆಗೆ 735 ರೂಪಾಯಿ ವ್ಯಯಿಸಿದ್ದಾರೆ ಎಂದೂ ಮೂಲಗಳಿಂದ ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT