ಸಂಗ್ರಹ ಚಿತ್ರ online desk
ರಾಜ್ಯ

ಬೆಂಗಳೂರು: ಪಿಜಿಗೆ ನುಗ್ಗಿ BESCOM ಅಸಿಸ್ಟೆಂಟ್ ಎಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ, ದರೋಡೆ

ಬಾಗಿಲು ಬಡಿಯುವ ಸದ್ದು ಕೇಳಿದ ಮಹಿಳೆ, ಪಿಜಿಯಲ್ಲಿರುವವರೇ ಯಾರೋ ಎಂದು ಭಾವಿಸಿ ಬಾಗಿಲು ತೆರೆದ್ದಾರೆ. ಕೂಡಲೇ ಅವರನ್ನು ಒಳಗೆ ತಳ್ಳಿರುವ ದುಷ್ಕರ್ಮಿಗಳು, ಚಾಕು ತೋರಿಸಿ ಬೆದರಿಸಿ ಬಾಗಿಲು ಮುಚ್ಚಿದ್ದಾರೆ.

ಬೆಂಗಳೂರು: ಜುಡಿಷಿಯಲ್ ಲೇಔಟ್‌ನ ಮಹಿಳಾ ಪೇಯಿಂಗ್ ಗೆಸ್ಟ್ ವಸತಿ ಗೃಹಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಬೆಸ್ಕಾಂ ಸಹಾಯಕ ಎಂಜಿನಿಯರ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ದರೋಡೆ ನಡೆಸಿರುವ ಘಟನೆಯೊಂದು ಸೋಮವಾರ ನಡೆದಿದೆ.

ಶಿವಾಸ್ ಲೇಡೀಸ್ ಪಿಜಿಯ ಮೂರನೇ ಮಹಡಿಯಲ್ಲಿರುವ ಕೊಠಡಿಯಲ್ಲಿ ಬೆಸ್ಕಾಂ ಸಹಾಯಕ ಎಂಜಿನಿಯರ್ ಇದ್ದು, ಮಧ್ಯಾಹ್ನ 3 ರಿಂದ 3.30 ರ ನಡುವೆ ಈ ಘಟನೆ ನಡೆದಿದೆ.

ಬಾಗಿಲು ಬಡಿಯುವ ಸದ್ದು ಕೇಳಿದ ಮಹಿಳೆ, ಪಿಜಿಯಲ್ಲಿರುವವರೇ ಯಾರೋ ಎಂದು ಭಾವಿಸಿ ಬಾಗಿಲು ತೆರೆದ್ದಾರೆ. ಕೂಡಲೇ ಅವರನ್ನು ಒಳಗೆ ತಳ್ಳಿರುವ ದುಷ್ಕರ್ಮಿಗಳು, ಚಾಕು ತೋರಿಸಿ ಬೆದರಿಸಿ ಬಾಗಿಲು ಮುಚ್ಚಿದ್ದಾರೆ.

ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ, ಅವರ ಬಳಿಯಿದ್ದ ಚಿನ್ನದ ಬಳೆಗಳನ್ನು ತೆಗೆದುಕೊಡುವಂತೆ ಹೇಳಿದ್ದಾರೆ. ತೆಗೆಯಲು ಸಾಧ್ಯವಾಗದಿದ್ದಾಕ ಹಣ ನೀಡುವಂತೆ ಹೇಳಿದ್ದಾನೆ. ಬಳಿಕ ಹಾಸಿಗೆಯ ಮೇಲಿದ್ದ ವ್ಯಾನಿಟಿ ಬ್ಯಾಗ್‌ನಿಂದ ಹಣ ತೆಗೆದುಕೊಳ್ಳಲು ಯತ್ನಿಸಿದಾಗ, ಮಹಿಳೆ ಬಾತ್ರೂಮ್ ಒಳಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ.

ನಂತರ ಸಹಾಯಕ್ಕಾಗಿ ಕೂಡಲು ಪ್ರಾರಂಭಿಸಿದಾಗ, ಆರೋಪಿ ಹಾಸಿಗೆಯ ಮೇಲಿದ್ದ ಆಕೆಯ ಎರಡು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಬೆಸ್ಕಾಂ ಸಹಾಯಕ ಎಂಜಿನಿಯರ್ ಆಗಿರುವ ಮಹಿಳೆ, ಹದಿನೈದು ದಿನಗಳ ಹಿಂದಷ್ಟೇ ಪಿಜಿ ಸೇರಿದ್ದರು ಎಂದು ತಿಳಿದುಬಂದಿದೆ.

ಪಿಜಿ ಪಕ್ಕದಲ್ಲಿ ಎರಡೂ ಫೋನ್ ಗಳು ಪತ್ತೆಯಾಗಿವೆ. ಆರೋಪಿ ಫೋನ್ ಗಳನ್ನು ಎಸೆದು ಪರಾರಿಯಾಗಿದ್ದಾನೆ. ಆರೋಪಿಗಳು ಮಹಿಳೆಯ ಚಲನವಲನಗಳನ್ನು ಗಮನಿಸಿರಬೇಕು. ದುಷ್ಕರ್ಮಿಗಳ ಪತ್ತೆಗೆ ಪಿಜಿ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ (ಈಶಾನ್ಯ) ವಿಜೆ ಸಜೀತ್ ಅವರು ಹೇಳಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT