ಕರ್ನಾಟಕ ಹೈಕೋರ್ಟ್ 
ರಾಜ್ಯ

ಕಾನೂನು ಹೋರಾಟದಲ್ಲಿ ಉತ್ತರ ಕನ್ನಡ ಮಹಿಳೆಗೆ ಜಯ: ಉದ್ಯೋಗ ಅರ್ಜಿ ಮರುಪರಿಶೀಲಿಸಲು ಬ್ಯಾಂಕ್‌ಗೆ ಹೈಕೋರ್ಟ್ ಸೂಚನೆ

ವೀಣಾ ಅವರು ವೆಂಕಟೇಶ್ ಶೇಟ್ ಅವರ ಪುತ್ರಿ, ಅವರು ಬ್ಯಾಂಕಿನ ಕಾನಸೂರು ಶಾಖೆಯಲ್ಲಿ ಅಟೆಂಡೆಂಟ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 32 ವರ್ಷಗಳ ಸೇವೆಯನ್ನು ಪೂರೈಸಿದ ನಂತರ, ಅವರು 2007 ರಲ್ಲಿ ನಿಧನರಾದರು.

ಬೆಂಗಳೂರು: ಉತ್ತರ ಕನ್ನಡದ 43 ವರ್ಷದ ಮಹಿಳೆಯೊಬ್ಬರು ತಮ್ಮ ಪ್ರಕರಣದ ವಾದ ಮಂಡಿಸಿ, ಕೆನರಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಿರುದ್ಧದ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ಆಕೆಗೆ ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ಪರಿಗಣಿಸುವಂತೆ ಬ್ಯಾಂಕಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತು.

ಮೇ 7, 2022 ರಂದು ಬ್ಯಾಂಕ್ "ಅವರು ವಿವಾಹಿತ ಮಗಳು" ಎಂಬ ಆಧಾರದ ಮೇಲೆ ನೇಮಕಾತಿ ಹಕ್ಕನ್ನು ತಿರಸ್ಕರಿಸಿ ನೀಡಿದ ಆದೇಶ ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕಾನಸೂರಿನ ವೀಣಾ ಅವರು 2022 ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸುವ ಮೂಲಕ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಈ ಆದೇಶವನ್ನು ಹೊರಡಿಸಿದರು.

ವೀಣಾ ಅವರು ವೆಂಕಟೇಶ್ ಶೇಟ್ ಅವರ ಪುತ್ರಿ, ಅವರು ಬ್ಯಾಂಕಿನ ಕಾನಸೂರು ಶಾಖೆಯಲ್ಲಿ ಅಟೆಂಡೆಂಟ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 32 ವರ್ಷಗಳ ಸೇವೆಯನ್ನು ಪೂರೈಸಿದ ನಂತರ, ಅವರು 2007 ರಲ್ಲಿ ನಿಧನರಾದರು. ಶೇಟ್ ಅವರ ಮರಣದ ನಂತರ, ಅರ್ಜಿದಾರರ ತಾಯಿ ತಮ್ಮ ಮಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೋರಿ ಅರ್ಜಿ ಸಲ್ಲಿಸಿದರು. 2007 ಮತ್ತು 2010 ರ ನಡುವೆ ಅವರು ಐದು ಪ್ರಾತಿನಿಧ್ಯದ ಅರ್ಜಿ ಸಲ್ಲಿಸಿದ್ದರೂ, ಬ್ಯಾಂಕ್ ಯಾವುದೇ ಉತ್ತರವನ್ನು ನೀಡಲಿಲ್ಲ.

ಅರ್ಜಿದಾರರು ಬ್ಯಾಂಕನ್ನು ಸಂಪರ್ಕಿಸಿ, ಅವರನ್ನು ಒಪ್ಪಂದದ ಆಧಾರದ ಮೇಲೆ ಅಟೆಂಡರ್ ಆಗಿ ನೇಮಿಸುವಂತೆ ಕೋರಿದರು ಮತ್ತು ಬ್ಯಾಂಕ್ ಹಾಗೆ ಮಾಡಿತು, ಫೆಬ್ರವರಿ 2021 ರವರೆಗೆ ಮಾತ್ರ ಕಾಲಕಾಲಕ್ಕೆ ಒಪ್ಪಂದವನ್ನು ನವೀಕರಿಸಿತು.

ನಂತರ ಅರ್ಜಿದಾರರು ಯೋಜನೆಯ ಪ್ರಕಾರ ಅರ್ಹತೆ ಹೊಂದಿದ್ದರಿಂದ, ಅಟೆಂಡರ್ ಹುದ್ದೆಗೆ ಅನುಪಕಂಪದ ಆಧಾರದ ಮೇಲೆ ನೇಮಕಾತಿಯನ್ನು ಕೋರಿ ಮತ್ತೊಂದು ಮನವಿಯನ್ನು ಸಲ್ಲಿಸಿದರು. ಆದರೆ ಬ್ಯಾಂಕ್ ಇದನ್ನು ಪರಿಗಣಿಸಲಿಲ್ಲ, ಹೀಗಾಗಿ ಅವರು ನ್ಯಾಯಾಲಯವನ್ನು ಸಂಪರ್ಕಿಸಿದರು. ವೀಣಾ ಅವರು ವಿವಾಹಿತರಾಗಿದ್ದಾರೆ, ಅನುಕಂಪದ ಆಧಾರದ ಮೇಲೆ ನೌಕರಿ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್ ಏಪ್ರಿಲ್ 2022 ರಲ್ಲಿ ಅದನ್ನು ತಿರಸ್ಕರಿಸಿತು. ಆದ್ದರಿಂದ, ಅವರು ಮತ್ತೆ ಹೈಕೋರ್ಟ್ ಸಂಪರ್ಕಿಸಿದರು.

ಆಕೆ ವಿವಾಹಿತರಾಗಿದ್ದಾರೆ ಎಂಬ ಆಧಾರದ ಮೇಲೆ ಉದ್ಯೋಗ ನಿರಾಕರಿಸುವುದು ಕಾನೂನುಬಾಹಿರ ಎಂದು ಪರಿಗಣಿಸಿದ ನ್ಯಾಯಾಲಯವು, ವೀಣಾ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಿದರೆ ತನ್ನ ತಾಯಿಯನ್ನು ನೋಡಿಕೊಳ್ಳುವುದಾಗಿ ಬ್ಯಾಂಕಿನ ಮುಂದೆ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತು.

"ಅರ್ಜಿದಾರರಿಗೆ ಅಂತಹ ನೇಮಕಾತಿಯನ್ನು ನಿರಾಕರಿಸಲು ಕಾನೂನಿನಲ್ಲಿ ಯಾವುದೇ ಅಡ್ಡಿಯಿಲ್ಲ, ಏಕೆಂದರೆ ಕುಟುಂಬವು ಇಂದಿಗೂ ಬಡವರಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ.

ವಿವಾಹಿತ ಹೆಣ್ಣುಮಕ್ಕಳನ್ನು ಅನುಕಂಪದ ಆಧಾರದ ಮೇಲೆ ಉದ್ಯೋಗಗಳಿಂದ ಹೊರಗಿಡುವುದು ಅಸಂವಿಧಾನಿಕ ಎಂದು ಹೈಕೋರ್ಟ್ ನೀಡಿದ ಆದೇಶದ ನಂತರ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿದ ನಿಯಮಗಳನ್ನು ಅದು ಎತ್ತಿ ತೋರಿಸಿದೆ. ಇದನ್ನು ಸುಪ್ರೀಂ ಕೋರ್ಟ್ ಸಹ ದೃಢಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್ಕೆ: ಕೇರಳ ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ, ಪುನರ್ ಪರಿಶೀಲನೆಗೆ ಒತ್ತಾಯ

'ರಾಜಕೀಯ ದ್ವೇಷ, ಪೊಲೀಸರ ವೈಫಲ್ಯ' ಬಳ್ಳಾರಿ ಹಿಂಸಾಚಾರ ಘಟನೆಗೆ ಕಾರಣ: ಕಾಂಗ್ರೆಸ್ ಸಮಿತಿ

ಈ ಬಾರಿ ಫೆ.1ರ ಭಾನುವಾರ ಕೇಂದ್ರ ಬಜೆಟ್, ಜ. 29ಕ್ಕೆ ಆರ್ಥಿಕ ಸಮೀಕ್ಷೆ ಮಂಡನೆ!

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಲುಟ್ನಿಕ್ ಹೇಳಿಕೆ ತಳ್ಳಿಹಾಕಿದ MEA, ಹೇಳಿದ್ದೇನು?

SCROLL FOR NEXT