ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಟೆಕ್ಕಿಗೆ ಮೊಬೈಲ್ ಗಿಫ್ಟ್ ನೀಡಿ 2.8 ಕೋಟಿ ರೂ ದೋಚಿದ ಸೈಬರ್ ವಂಚಕರು!

ಬ್ಯಾಂಕ್ ನವರು ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಗಳು ಮನೆ ಬಾಗಿಲಿಗೆ ಗಿಫ್ಟ್ ಕಳುಹಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಇದನ್ನು ನಂಬಬೇಡಿ, ಹುಷಾರಾಗಿರಿ.

ಬೆಂಗಳೂರು: 'ಡಿಜಿಟಲ್ ಬಂಧನ' ಭೀತಿಯ ನಂತರ ಸೈಬರ್ ವಂಚಕರು ಹಣ ದೋಚಲು ಹೊಸ ತಂತ್ರ ಹುಡುಕಿಕೊಂಡಿದ್ದಾರೆ. ಉಚಿತ ಮೊಬೈಲ್ ಅಥವಾ ಟ್ಯಾಬ್ಲೆಟ್ ಗಿಫ್ಟ್ ಆಮಿಷವೊಡ್ಡುವ ಮೂಲಕ ಕೋಟ್ಯಂತರ ರೂ. ವಂಚನೆ ಮಾಡಲಾಗುತ್ತಿದೆ.

ಬ್ಯಾಂಕ್ ನವರು ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿಗಳು ಮನೆ ಬಾಗಿಲಿಗೆ ಗಿಫ್ಟ್ ಕಳುಹಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ಇದನ್ನು ನಂಬಬೇಡಿ, ಹುಷಾರಾಗಿರಿ. ಇದು ಸೈಬರ್ ವಂಚಕರು ಮಾಡುವ ವಂಚನೆಯ ಜಾಲವಾಗಿದೆ.

ಈ ಮೊಬೈಲ್ ಗೆ ಒಂದು ಬಾರಿ ಸಿಮ್ ಕಾರ್ಡ್ ಹಾಕಿದ ನಂತರ ಎಲ್ಲಾ ಬ್ಯಾಂಕ್ ವಿವರ ವಂಚಕರ ಪಾಲಾಗುತ್ತದೆ. ವೈಟ್ ಫೀಲ್ಡ್ ನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಇಂತಹದೊಂದು ಪ್ರಕರಣ ದಾಖಲಾಗಿದ್ದು, ಟೆಕ್ಕಿಯೊಬ್ಬರು ರೂ. 2.8 ಕೋಟಿ ಕಳೆದುಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ ಶಿವಕುಮಾರ್ ಗುಣಾರೆ, ಇತ್ತೀಚೆಗೆ ನಗರದಲ್ಲಿ ಈ ಹೊಸ ರೀತಿಯ ಸೈಬರ್ ವಂಚನೆ ವರದಿಯಾಗಿದ್ದು, ಖಾಸಗಿ ಬ್ಯಾಂಕ್ ಪ್ರತಿನಿಧಿಯಂತೆ ವಂಚಕರೊಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮೊಬೈಲ್ ಫೋನ್ ಉಡುಗೊರೆಯಾಗಿ ಕಳುಹಿಸಿದ್ದಾರೆ. ಬ್ಯಾಂಕ್ ನಿಂದ ಕ್ರೇಡಿಟ್ ಕಾರ್ಡ್ ಮಂಜೂರಾಗಿದ್ದು, ಉತ್ತಮ ಕ್ರೇಡಿಟ್ ಸ್ಕೋರ್ ಗಾಗಿ ಉಚಿತವಾಗಿ ಮೊಬೈಲ್ ಫೋನ್ ಗಿಫ್ಟ್ ಪಡೆಯಲು ಅರ್ಹರಾಗಿದ್ದೀರಾ ಎಂದು ನಂಬಿಸಲಾಗಿದೆ. ಇದಕ್ಕೂ ಮುನ್ನಾ ಕ್ರೆಡಿಟ್ ಕಾರ್ಡ್ ನೊಂದಿಗೆ ಟೆಕ್ಕಿಯನ್ನು ವಂಚಕ ಸಂಪರ್ಕಿಸಿದ್ದು, ಕಾರ್ಡ್ ತೆಗೆದುಕೊಳ್ಳುವಂತೆ ಮನವೊಲಿಸಿದ್ದಾನೆ ಎಂದು ಹೇಳಿದರು.

ಟೆಕ್ಕಿಯ ವಿಳಾಸಕ್ಕೆ ಹೊಸ ಮೊಬೈಲ್ ಫೋನ್ ಕಳುಹಿಸಿದ ನಂತರ ಸಂತ್ರಸ್ತ ತನ್ನ ಫೋನ್ ಗೆ ಸಿಮ್ ಕಾರ್ಡ್ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಕ್ಲೋನಿಂಗ್ ಸಾಫ್ಟ್ ವೇರ್ ಅಳವಡಿಸಲಾಗಿರುತ್ತದೆ. ಇದರಿಂದ ಬ್ಯಾಂಕ್ ನಿಂದ ಯಾವುದೇ ಸಂದೇಶ ಅಥವಾ ಮೇಲ್ ಬಾರದಂತೆ ಮೊಬೈಲ್ ಫೋನ್ ನಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ವಾರದ ನಂತರ ತನ್ನ ಎಫ್ ಡಿ ಖಾತೆಯಿಂದ ಹಣ ಕಡಿತವಾಗಿರುವುದನ್ನು ಟೆಕ್ಕಿ ಗಮನಿಸಿದ್ದಾರೆ. ಫೋನ್ ಕ್ಲೋನ್ ಆಗಿರುವುದರಿಂದ, ಬ್ಯಾಂಕ್ ಕಳುಹಿಸಿದ OTP ವಂಚಕನ ಖಾತೆಗೆ ಹೋಗಿದೆ. ಬಳಿಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ, ವಂಚಕರು ಹಣವನ್ನು ಕಬಳಿಸಿರುವುದು ತಿಳಿದುಬಂದಿದೆ. ನಂತರ ಅವರು CEN ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

BJP ತೊರೆಯಲು ಕಾರಣ ಬಹಿರಂಗಪಡಿಸಿದ Annamalai; ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದೇನೆಂದರೆ

SIR ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು: ಸಿಎಂ ಶಿವಕುಮಾರ್ ಗೆ ಪ್ರಕಾಶ್ ರಾಜ್ ಮನವಿ

BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್‌, ಭಾರಿ ಟ್ರೋಲ್, ಸಂಗೀತಾ ಸಮರ್ಥನೆ, ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’!

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಸಂಸದ ಇಮ್ರಾನ್ ಮಸೂದ್