ಹಂಪಿಯ ವಿಜಯ ವಿಠಲ ದೇವಾಲಯ 
ರಾಜ್ಯ

ಹೊಸಪೇಟೆ: ವಿಜಯ ವಿಠಲ ಗೋಪುರದ ಬಿರುಕು ಅಧ್ಯಯನಕ್ಕೆ ASI ನಿಂದ 3ಡಿ ಸಮೀಕ್ಷೆ

ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಸ್ಮಾರಕದ ಸಂರಕ್ಷಣೆಗಾಗಿ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ, ಅಧಿಕಾರಿಗಳು ಸ್ಮಾರಕದ ಸಂಪೂರ್ಣ ಡಿಜಿಟಲ್ ಮಾಹಿತಿಯನ್ನು ಪಡೆಯಲಿದ್ದಾರೆ.

ಹೊಸಪೇಟೆ: ಹಂಪಿಯಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ಯು ವಿಜಯ ವಿಠಲ ದೇವಾಲಯದ 3D ಸಮೀಕ್ಷೆಯನ್ನು ಪ್ರಾರಂಭಿಸಿದೆ.

ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಸ್ಮಾರಕದ ಸಂರಕ್ಷಣೆಗಾಗಿ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ, ಅಧಿಕಾರಿಗಳು ಸ್ಮಾರಕದ ಸಂಪೂರ್ಣ ಡಿಜಿಟಲ್ ಮಾಹಿತಿಯನ್ನು ಪಡೆಯಲಿದ್ದಾರೆ. ಸಮೀಕ್ಷೆ ನಡೆಸುವಾಗ ಪ್ರವಾಸಿಗರು ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಸ್ಮಾರಕಕ್ಕೆ ಯಾವುದೇ ಹಾನಿಯಾಗಿದೆಯೇ ಎಂದು ತಿಳಿಯಲು ಡ್ರೋನ್‌ಗಳು ಮತ್ತು ಇತರ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಸ್ಮಾರಕದ ಆರೋಗ್ಯವನ್ನು ನಿರ್ಣಯಿಸಲು ಇಂತಹ ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿರುವುದು ಇದೇ ಮೊದಲು. 13 ಮತ್ತು 16 ನೇ ಶತಮಾನದ ನಡುವೆ ವಿಜಯನಗರ ಸಾಮ್ರಾಜ್ಯವು ನಿರ್ಮಿಸಿದ ದೇವಾಲಯವನ್ನು ಸಂರಕ್ಷಿಸಲು ಈ ಕೆಲಸ ಮುಖ್ಯವಾಗಿದೆ. ಕಳೆದ ವರ್ಷ 3D ಸಮೀಕ್ಷೆಯ ಪ್ರಯೋಗವನ್ನು ನಡೆಸಲಾಯಿತು.

3D ಮಾದರಿಯನ್ನು ರಚಿಸಲು ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (DGPS) ಮತ್ತು ಲೈಟ್ ಡಿಟೆಕ್ಷನ್ ಮತ್ತು ರೇಂಜಿಂಗ್ (ಲಿಡಾರ್) ಸಮೀಕ್ಷೆಯನ್ನು ವಿಜಯ ವಿಠಲ ದೇವಾಲಯ ಗೋಪುರದಲ್ಲಿ ಮಾಡಲಾಗುತ್ತಿದೆ ಎಂದು ಹಿರಿಯ ASI ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಒಂದು ಸೆಂಟಿಮೀಟರ್ ವರೆಗೆ ನಿಖರವಾಗಿರುತ್ತದೆ. ಇದು ಮಾನವ ಶ್ರಮವನ್ನು ಕಡಿಮೆ ಮಾಡುವುದಲ್ಲದೆ, ರಚನೆಯ ವಿವರವಾದ ಚಿತ್ರಣವನ್ನು ನೀಡುತ್ತದೆ. ದುರಸ್ತಿ ಕಾರ್ಯವನ್ನು ಯೋಜಿಸಲು ಈ ಸಮೀಕ್ಷೆಯು ಗೋಪುರದ ನಿಖರವಾದ ಸ್ಥಿತಿಯ ಬಗ್ಗೆ ಮಾಹಿತಿ ಸಹ ಒದಗಿಸುತ್ತದೆ. ನಾವು ಬೆಂಗಳೂರಿನ ಏಜೆನ್ಸಿಯ ಸಹಾಯದಿಂದ ಇದನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಹಂಪಿಯಲ್ಲಿರುವ ASI ಈ ತಂತ್ರಜ್ಞಾನವನ್ನು ಬಳಸುತ್ತಿರುವುದು ಇದೇ ಮೊದಲು. ಹಂಪಿಯ ವಿಜಯ ವಿಠಲ ದೇವಸ್ಥಾನದ ಮುಂಭಾಗದ ಗೋಪುರದಲ್ಲಿ ಕಾಣಿಸಿರುವ ಬಿರುಕಿನ ಅಧ್ಯಯನಕ್ಕೆ ಡ್ರೋನ್‌ ಕ್ಯಾಮೆರಾ ಮೂಲಕ ಮೂರು ಆಯಾಮದ ಸಮೀಕ್ಷೆ ಕಾರ್ಯ ನಡೆಯಿತು. ಅದಕ್ಕಾಗಿ ಗೋಪುರದ ಸುತ್ತಮುತ್ತ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT