ಕಾಲ್ತುಳಿತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿರುವುದು  
ರಾಜ್ಯ

ವಿಜಯೋತ್ಸವ ಮೆರವಣಿಗೆ ಗೊಂದಲ, ಉಚಿತ ಪಾಸ್, ಜನದಟ್ಟಣೆ ಬೆಂಗಳೂರು ಕಾಲ್ತುಳಿತಕ್ಕೆ ಕಾರಣವಾಯಿತೇ; ಪೊಲೀಸರು ಏನಂತಾರೆ?

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ 2ರಿಂದ 3 ಲಕ್ಷ ಜನ ಸೇರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿ 11 ಮಂದಿ ಯುವಕ-ಯುವತಿಯರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಂಗಳೂರು: ಐಪಿಎಲ್-2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಗೆದ್ದಿದ್ದೇ ಬೆಂಗಳೂರು ಸೇರಿದಂತೆ ಕರ್ನಾಟಕ ಅಷ್ಟೇ ಏಕೆ ದೇಶ, ವಿದೇಶಗಳಲ್ಲಿ ಆರ್ ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದರು. ಅದಾಗಿ ನಿನ್ನೆ ಬುಧವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ವೇಳೆ ನಡೆದ ದುರಂತ ಎಲ್ಲವನ್ನೂ ನುಂಗಿಹಾಕಿತು.

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸುಮಾರು 2 ಲಕ್ಷ ಜನ ಸೇರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿ 11 ಮಂದಿ ಯುವಕ-ಯುವತಿಯರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಕಾಲ್ತುಳಿತಕ್ಕೆ ಏನು ಕಾರಣ ಎಂದು ದುರಂತ ನಡೆದ ಬಳಿಕ ವಿಮರ್ಶೆ ಮಾಡಲು ಹೊರಟಾಗ ವಿಜಯೋತ್ಸವ ಮೆರವಣಿಗೆ, ಕ್ರೀಡಾಂಗಣದೊಳಗೆ ಹೋಗಲು ಉಚಿತ ಪಾಸ್‌ಗಳು, ಜನದಟ್ಟಣೆ ಮತ್ತು ಕ್ರೀಡಾಂಗಣದಲ್ಲಿ ಸೀಮಿತ ಆಸನಗಳ ಬಗ್ಗೆ ಗೊಂದಲವು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತದೆ.

ಪಾಸ್ ಗಳ ಗೊಂದಲ

ಕ್ರೀಡಾಂಗಣಕ್ಕೆ ಪ್ರವೇಶ ಟಿಕೆಟ್ ಸಿಗದ ಹಲವಾರು ಅಭಿಮಾನಿಗಳು ಟಿಕೆಟ್ ಹೊಂದಿದ್ದವರೊಂದಿಗೆ ಆವರಣಕ್ಕೆ ನುಗ್ಗಲು ಪ್ರಯತ್ನಿಸಿದಾಗ ಆರಂಭಿಕ ಅವ್ಯವಸ್ಥೆ ನಂತರ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೀಗೆ ಗೊಂದಲ ಉಂಟಾದಾಗ, ಕೆಲವರು ನೆಲಕ್ಕೆ ಬಿದ್ದರು, ಕೆಲವರು ಕ್ರೀಡಾಂಗಣಕ್ಕೆ ಪ್ರವೇಶಿಸಲು ಬೃಹತ್ ಗೇಟ್‌ಗಳನ್ನು ಹತ್ತಲು ಪ್ರಯತ್ನಿಸುವಾಗ ಗಾಯಗೊಂಡರು.

ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 11 ಮಂದಿ ಮೃತಪಟ್ಟು 33 ಜನರು ಗಾಯಗೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೃತರಲ್ಲಿ ಹೆಚ್ಚಿನವರು ಪುರುಷರು ಮತ್ತು ಮಹಿಳೆಯರು ಸೇರಿದಂತೆ ಯುವಕರು, ಅವರಲ್ಲಿ ಹಲವರು ವಿದ್ಯಾರ್ಥಿಗಳಾಗಿದ್ದಾರೆ.

35 ಸಾವಿರ ಜನಕ್ಕೆ ಕುಳಿತುಕೊಳ್ಳಲು ವ್ಯವಸ್ಥೆ ಸೇರಿದ್ದು ಸುಮಾರು 2 ಲಕ್ಷ ಜನ!

ಚಿನ್ನಸ್ವಾಮಿ ಕ್ರೀಡಾಂಗಣವು 35,000 ಜನರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಹೊಂದಿದೆ, ಆದರೆ 2-3 ಲಕ್ಷ ಜನರು ಸೇರಿದ್ದರು, ಇದುವೇ ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪಂದ್ಯ ನಿನ್ನೆ ಮಂಗಳವಾರ ಸಂಜೆ ಮುಗಿದು ಆರ್ ಸಿಬಿ ಗೆದ್ದಾಗ ಇಂದು ಈ ಕಾರ್ಯಕ್ರಮವನ್ನು ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸಿತ್ತು, ಹಾಗೆಂದು ಲಕ್ಷಗಟ್ಟಲೆ ಜನರು ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದ ಸಾಮರ್ಥ್ಯಕ್ಕೆ ಸಮಾನ ಸಂಖ್ಯೆಯ ಜನರು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಜನರು ಸೇರುತ್ತಾರೆ ಎಂದು ನಿರೀಕ್ಷಿಸಿದ್ದೆವು ಎನ್ನುತ್ತಾರೆ ಸಿಎಂ ಸಿದ್ದರಾಮಯ್ಯ.

ಅವ್ಯವಸ್ಥೆ ಮತ್ತು ಕಾಲ್ತುಳಿತಕ್ಕೆ ನಿಖರವಾಗಿ ಕಾರಣವೇನು ಎಂಬುದನ್ನು ವಿವರಿಸುತ್ತಾ, ಮುಖ್ಯಮಂತ್ರಿ, "ಸಣ್ಣ ದ್ವಾರಗಳಿವೆ. ಜನರು ಗೇಟ್‌ಗಳ ಮೂಲಕ ಪ್ರವೇಶಿಸಿದರು. ಗೇಟ್‌ಗಳನ್ನು ಸಹ ಮುರಿದಿದ್ದಾರೆ, ಆದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇಷ್ಟೊಂದು ಜನಸಂದಣಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಪ್ರಾಥಮಿಕವಾಗಿ ಹಾಗೆ ಕಾಣುತ್ತಿದೆ. ಏನೂ ಆಗಿಲ್ಲ ಎಂದು ನಾನು ಹೇಳುತ್ತಿಲ್ಲ. ವಿಚಾರಣೆಯು ಸತ್ಯಗಳನ್ನು ಹೊರತರುತ್ತದೆ ಎಂದರು.

ವಿಜಯೋತ್ಸವ ಮೆರವಣಿಗೆ ಗೊಂದಲ

ನಿನ್ನೆ ಬುಧವಾರ ಬೆಳಗ್ಗೆ 11:56 ಕ್ಕೆ ಬೆಂಗಳೂರು ಸಂಚಾರ ಪೊಲೀಸರು ಕ್ರೀಡಾಂಗಣದಲ್ಲಿ ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ ಆದರೆ ಅಭಿನಂದನಾ ಕಾರ್ಯಕ್ರಮ ಮಾತ್ರ ನಡೆಯಲಿದೆ ಎಂದು ಘೋಷಿಸಿದರು.

ಆದಾಗ್ಯೂ, ಮಧ್ಯಾಹ್ನ 3.14 ಕ್ಕೆ ಆರ್‌ಸಿಬಿ ತಂಡದ ಆಡಳಿತ ಮಂಡಳಿಯು ಸಂಜೆ 5 ಗಂಟೆಗೆ ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಘೋಷಿಸಿತು. ವಿಕ್ಟರಿ ಪೆರೇಡ್ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಚರಣೆಗಳು ನಡೆಯಲಿವೆ. ಎಲ್ಲರೂ ರೋಡ್ ಶೋ ನ್ನು ಶಾಂತಿಯುತವಾಗಿ ಆನಂದಿಸಲು ಪೊಲೀಸರು ಮತ್ತು ಇತರ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ನಾವು ಎಲ್ಲಾ ಅಭಿಮಾನಿಗಳನ್ನು ವಿನಂತಿಸುತ್ತೇವೆ. shop.royalchallengers.com ನಲ್ಲಿ ಉಚಿತ ಪಾಸ್‌ಗಳು (ಸೀಮಿತ ಪ್ರವೇಶ) ಲಭ್ಯವಿದೆ ಎಂದು ಅದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ಇದು ಅಭಿಮಾನಿಗಳನ್ನು ಮೆರವಣಿಗೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಗೊಂದಲಕ್ಕೀಡು ಮಾಡಿತು. ಯಾವುದೇ ವಿಜಯೋತ್ಸವದ ಪರೇಡ್ ನಡೆಯುವುದಿಲ್ಲ ಮತ್ತು ಟಿಕೆಟ್ ಹೊಂದಿರುವವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅವರಲ್ಲಿ ಹಲವರು ಪ್ರವೇಶ ಪಡೆಯಲು ಗೇಟ್‌ಗಳನ್ನು ಹಾರಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಟಿಕೆಟ್‌ಗಳನ್ನು ಹೊಂದಿದ್ದವರಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದ್ದರೂ, ಅನೇಕರು ಉಚಿತ ಪಾಸ್‌ಗಳು ಮತ್ತು ಟಿಕೆಟ್‌ಗಳನ್ನು ಹೊಂದಿರುವವರೊಂದಿಗೆ ನುಗ್ಗಲು ಪ್ರಯತ್ನಿಸಿದರು. ಪ್ರವೇಶ ಪಡೆಯುವ ಪ್ರಯತ್ನದಲ್ಲಿ, ಅವರಲ್ಲಿ ಕೆಲವರು ಪರಸ್ಪರ ತಳ್ಳಲು ಪ್ರಾರಂಭಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪೊಲೀಸರ ಪ್ರಕಾರ, ಸುಮಾರು 50 ಸಾವಿರ ಜನರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದರು, ನಂತರ ಆ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT