ಮೆಟ್ರೋ ರೈಲಿನಲ್ಲಿ ಸಂಚರಿಸಿದ ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ 
ರಾಜ್ಯ

ಮೆಟ್ರೋ ಶುಲ್ಕ ಸಮಿತಿ ವರದಿಯೇನೂ ರಾಷ್ಟ್ರೀಯ ಭದ್ರತಾ ದಾಖಲೆಯಲ್ಲ, ಬಹಿರಂಗಪಡಿಸಿ: BMRCL ಗೆ ತೇಜಸ್ವಿ ಸೂರ್ಯ ಆಗ್ರಹ

ವರದಿಯನ್ನೇಕೆ ನೀವು ಸಾರ್ವಜನಿಕಗೊಳಿಸುತ್ತಿಲ್ಲ? ಏನನ್ನು ಮರೆ ಮಾಡಲು ಬಯಸುತ್ತಿದ್ದೀರಿ? ವರದಿಯನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎನ್ನುವುದಕ್ಕೆ ಅದೇನು ರಾಷ್ಟ್ರೀಯ ಭದ್ರತೆಗೆ ಕುರಿತ ದಾಖಲೆಗಳಲ್ಲ.

ಬೆಂಗಳೂರು: ಮೆಟ್ರೋ ಶುಲ್ಕ ಸಮಿತಿ ವರದಿಯೇನೂ ರಾಷ್ಟ್ರೀಯ ಭದ್ರತಾ ದಾಖಲೆಯಲ್ಲ. ವರದಿಯನ್ನು ಸಾರ್ವಜನಿಕಗೊಳಿಸಿ ಎಂದು ಬಿಎಂಆರ್‌ಸಿಎಲ್‌ಗೆ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಮೆಟ್ರೋ ವ್ಯವಸ್ಥೆಯನ್ನು ಮಾಸ್ಕೋ ಮೆಟ್ರೋಗೆ ಹೋಲಿಸಿ, ಅಲ್ಲಿನ ಕಾರ್ಯಾಚರಣೆಯ ದಕ್ಷತೆ, ವಿನ್ಯಾಸ ಮತ್ತು ಕೈಗೆಟುಕುವಿಕೆ ದರವನ್ನು ಎತ್ತಿ ತೋರಿಸಿದರು.

ಮಾಸ್ಕೋ ಮೆಟ್ರೋ 80-ಸೆಕೆಂಡ್ ಆವರ್ತನದಲ್ಲಿ ಚಲಿಸುತ್ತದೆ, ದಟ್ಟವಾದ ರೇಡಿಯಲ್ ಮಾರ್ಗಗಳಿಂದ ನಗರದಲ್ಲಿ ಚಲಿಸತ್ತದೆ. ಅಲ್ಲಿನ ಪ್ರತಿ ನಿಲ್ದಾಣವು ಕಲಾಕೃತಿಯಿಂದ ಕೂಡಿದೆ.ಸಾರ್ವಜನಿಕ ಸಾರಿಗೆಯು ಕ್ರಿಯಾತ್ಮಕವಾಗಿರುವುದಕ್ಕಿಂತ ಹೆಚ್ಚಾಗಿರಬೇಕು. ಅದು ಮಹತ್ವಾಕಾಂಕ್ಷೆ, ಸೌಂದರ್ಯಶಾಸ್ತ್ರ ಮತ್ತು ಪ್ರಯಾಣಿಕರ ಮೇಲಿನ ಗೌರವವನ್ನು ಪ್ರತಿಬಿಂಬಿಸಬೇಕು. ಆದರೆ, ಅದು ಬೆಂಗಳೂರಿನಲ್ಲಿ ಕಾಣೆಯಾಗಿದೆ ಎಂದು ಹೇಳಿದ್ದಾರೆ.

ಬಳಿಕ ದರ ನಿಗದಿ ಸಮಿತಿ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆಂದೂ ತಿಳಿಸಿದ್ದಾರೆ.

ವರದಿಯನ್ನೇಕೆ ನೀವು ಸಾರ್ವಜನಿಕಗೊಳಿಸುತ್ತಿಲ್ಲ? ಏನನ್ನು ಮರೆ ಮಾಡಲು ಬಯಸುತ್ತಿದ್ದೀರಿ? ವರದಿಯನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎನ್ನುವುದಕ್ಕೆ ಅದೇನು ರಾಷ್ಟ್ರೀಯ ಭದ್ರತೆಗೆ ಕುರಿತ ದಾಖಲೆಗಳಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಮೆಟ್ರೋ ಶುಲ್ಕ ಹೆಚ್ಚಳವನ್ನು ಟೀಕಿಸಿದ ಅವರು, ನಗರ ಚಲನಶೀಲತೆಗೆ ಸಾರ್ವಜನಿಕ ಸಾರಿಗೆಯು ಅಗ್ಗದ ಮತ್ತು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿರಬೇಕು. ನಾವು ಅದನ್ನು ಒತ್ತಾಯಿಸಬೇಕಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT