ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಸ್ವಯಂಘೋಷಿತ ದೇವ ಮಾನವ, ಮತ್ತಿಬ್ಬರಿಂದ ಆಂಧ್ರದ ಮಹಿಳೆಗೆ 2.5 ಕೋಟಿ ರೂ. ವಂಚನೆ!

ಈ ಸಂಬಂಧ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಿವಾಸಿ ಹಾಗೂ ಸಂತ್ರಸ್ತೆ ಎಂ. ಕುಮುದಾ ನೀಡಿದ ದೂರಿನ ಆಧಾರದ ಮೇಲೆ, ಸಿಸಿಬಿ (CCB) ಪೊಲೀಸರು ಬುಧವಾರ ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾ, ಶಂಕರ್ ಮತ್ತು ಭರತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ಬೆಂಗಳೂರು: ಸ್ವಯಂಘೋಷಿತ ದೇವಮಾನವ ಸೇರಿದಂತೆ ಮೂವರು ವ್ಯಕ್ತಿಗಳು ಆಂಧ್ರ ಪ್ರದೇಶದ ಮಹಿಳೆಯೊಬ್ಬರು ಸುಮಾರು 2.5 ಕೋಟಿ ರೂ. ವಂಚಿಸಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಈ ಸಂಬಂಧ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಿವಾಸಿ ಹಾಗೂ ಸಂತ್ರಸ್ತೆ ಎಂ. ಕುಮುದಾ ನೀಡಿದ ದೂರಿನ ಆಧಾರದ ಮೇಲೆ, ಸಿಸಿಬಿ (CCB) ಪೊಲೀಸರು ಬುಧವಾರ ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾ, ಶಂಕರ್ ಮತ್ತು ಭರತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.

ತಮ್ಮ ಪತಿ, ಅತ್ತೆ ಮತ್ತು ಭಾವನಿಗೆ ಸೇರಿದ ಚಾಮರಾಜಪೇಟೆಯ ಆಸ್ತಿಯನ್ನು ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಬಯಸಿದ್ದಾಗ, 2022ರಲ್ಲಿ ಸ್ನೇಹಿತರೊಬ್ಬರ ಮೂಲಕ ಭರತ್ ಮತ್ತು ಶಂಕರ್ ಅವರ ಪರಿಚಯವಾಯಿತು ಎಂದು ಕುಮುದಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದ ಶಂಕರ್ ಮತ್ತು ಭರತ್ ಆಗಾಗ್ಗೆ ಕುಮುದಾ ಅವರ ಮನೆಗೆ ಭೇಟಿ ನೀಡುತ್ತಿದ್ದರು. ನವೆಂಬರ್ 2023ರಲ್ಲಿ ಕುಮುದಾ ಅವರ ಮಗನಿಗೆ ಅಪಘಾತವಾಯಿತು. ಆಗ ಭರತ್, ಮನೆಯಲ್ಲಿನ "ನಕಾರಾತ್ಮಕ" ಶಕ್ತಿಯಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಿ, ಆಕೆಯ ಸಮಸ್ಯೆಗಳನ್ನು ಪರಿಹರಿಸಬಲ್ಲ ಸ್ವಯಂ ಘೋಷಿತ ದೇವಮಾನವ ಅಫ್ಸರ್ ಪಾಷಾ ಎಂಬುವವರನ್ನು ಪರಿಚಯಿಸಿದನು. ಅಫ್ಸರ್ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಆಕೆಯ ಬಳಿ 8 ಲಕ್ಷ ರೂ. ಪಡೆದಿದ್ದನು ಎಂದು ಆರೋಪಿಸಲಾಗಿದೆ.

ಮನೆ ಮಾರಾಟ ಮಾಡುವ ಅಥವಾ ಸಾಲಕ್ಕಾಗಿ ಬ್ಯಾಂಕ್‌ಗೆ ಹೋಗುವ ಕುರಿತು ಕುಮುದಾ ಚರ್ಚಿಸಿದಾಗ, ತಮಗೆ ಆರ್‌ಬಿಐ (RBI) ನಿಂದ 505 ಕೋಟಿ ರೂ. ಬರಬೇಕಿದೆ ಎಂದು ಅಫ್ಸರ್ ಹೇಳಿದನು. ಮನೆ ಮಾರಾಟ ಮಾಡಿ ತನಗೆ 2.5 ಕೋಟಿ ರೂ. ನೀಡಿದರೆ, ಆರ್‌ಬಿಐನಿಂದ ಹಣ ಬಂದ ನಂತರ ಆಕೆಗೆ 10 ಕೋಟಿ ರೂ. ಮರುಪಾವತಿಸುವುದಾಗಿ ಆತ ವಾಟ್ಸಾಪ್ ಸಂದೇಶಗಳ ಮೂಲಕ ತಿಳಿಸಿದ್ದನು ಎಂದು ಆರೋಪಿಸಲಾಗಿದೆ.

ಆರ್‌ಬಿಐ (RBI) ಕಳುಹಿಸಿದೆ ಎನ್ನಲಾದ, ತನ್ನ ಫೋಟೋದ ಪ್ರಮಾಣಪತ್ರವನ್ನು ನೋಡಿ ಅಫ್ಸರ್‌ನ ಮಾತನ್ನು ನಂಬಿದ ಕುಮುದಾ, ತಮ್ಮ ಮನೆಯನ್ನು 8.5 ಕೋಟಿ ರೂ.ಗೆ ಮಾರಾಟ ಮಾಡಿ, ಸುಮಾರು 2.5 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನವನ್ನು ಕಂತುಗಳ ರೂಪದಲ್ಲಿ ಆತನಿಗೆ ನೀಡಿದ್ದರು.

ಅಫ್ಸರ್ ನೀಡಿದ್ದ ಭರವಸೆಯಂತೆ ಹಣ ಹಿಂತಿರುಗಿಸದಿದ್ದಾಗ, ಅವರು ಶಂಕರ್ ಮತ್ತು ಭರತ್ ಅವರಿಗೆ ವಿಷಯ ತಿಳಿಸಿದರು. ಆದರೆ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಫ್ಸರ್ ಆಕೆಗೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತೆಂದು ಬೆದರಿಕೆ ಕೂಡ ಹಾಕಿದ್ದನು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಅಫ್ಸರ್, ಶಂಕರ್ ಮತ್ತು ಭರತ್ ಅವರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಕ್ಷಿಣ ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ವಲಸೆ ಕಾರ್ಮಿಕ ಸಾವು, ಮತ್ತೊಬ್ಬರಿಗೆ ಗಾಯ

ಮಂಡ್ಯ: ಕಾವೇರಿ ಹೋರಾಟಕ್ಕೆ ಸ್ಪಂದಿಸದೆ ರೈತರ ಕೆಂಗಣ್ಣಿಗೆ ಗುರಿಯಾದ ನಟಿ ರಾಗಿಣಿ ದ್ವಿವೇದಿ!

Ramayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!

ಇರಾನ್ ವಿದೇಶಾಂಗ ಸಚಿವ- ಎಸ್ ಜೈಶಂಕರ್ ಮಾತುಕತೆ: ಪ್ರಾದೇಶಿಕ ಸಮರದ ಬಗ್ಗೆ ಆತಂಕ, ಹಡಗುಗಳ ಮೇಲೆ ದಾಳಿ ನಡೆಸದಂತೆ ಒತ್ತಾಯ

ಆಗಸ್ಟ್ 1 ರಂದು ಪ್ರಧಾನ ಮಂತ್ರಿ ಮೋದಿ ಆಂಧ್ರಪ್ರದೇಶ ಮೈಸೂರಿಗೆ ಭೇಟಿ; ಅಭಿವೃದ್ಧಿ ಯೋಜನೆಗಳ ಉದ್ಘಾಟನೆ