ದತ್ತೂರಿ ಕಾಯಿ 
ರಾಜ್ಯ

ವಿಷಕಾರಿ ದತ್ತೂರಿ ಹಣ್ಣು ಮಾರಾಟ: ಅಮೆಜಾನ್, ಬಿಗ್ ಬಾಸ್ಕೆಟ್, ಸ್ವಿಗ್ಗಿ -Instamart ಪರವಾನಗಿ ಅಮಾನತಿಗೆ ಶಿಫಾರಸು!

ಅಮೆಜಾನ್ ಸೇರಿದಂತೆ ಹಲವು ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಲ್ಲಿ ದತ್ತೂರಿ ಹಣ್ಣು ಮತ್ತು ಬೀಜಗಳು ಮಾರಾಟವಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಕೆಲವೊಂದು ಕ್ರಮಗಳನ್ನು ಎಫ್‌ಡಿಎ ತೆಗೆದುಕೊಂಡಿದೆ.

ಬೆಂಗಳೂರು: ವಿಷಕಾರಿ ದತುರಾ (ಧಾತುರಾ) ಹಣ್ಣುಗಳು ಮತ್ತು ಬೀಜಗಳನ್ನು ಮಾನವ ಬಳಕೆಗಾಗಿ ತಮ್ಮ ವೇದಿಕೆಗಳಲ್ಲಿ ಪಟ್ಟಿ ಮಾಡಿ ಮಾರಾಟ ಮಾಡಿದ್ದಕ್ಕಾಗಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಅಮೆಜಾನ್, ಬಿಗ್ ಬಾಸ್ಕೆಟ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ.

ಆನ್​​ಲೈನ್ಗಳಲ್ಲೂ ತೀವ್ರ ವಿಷಯುಕ್ತ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಮಾರಾಟ ಮಾಡುವುದು ಕಂಡು ಬಂದಿದೆ. ಈ ಕಾರಣಕ್ಕೆ ಪ್ರಾಣಾಪಾಯ ಉಂಟುಮಾಡಬಲ್ಲ ತೀವ್ರ ವಿಷಯುಕ್ತ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿರುವುದನ್ನು ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.

ಅಮೆಜಾನ್ ಸೇರಿದಂತೆ ಹಲವು ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಲ್ಲಿ ದತ್ತೂರಿ ಹಣ್ಣು ಮತ್ತು ಬೀಜಗಳು ಮಾರಾಟವಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಕೆಲವೊಂದು ಕ್ರಮಗಳನ್ನು ಎಫ್‌ಡಿಎ ತೆಗೆದುಕೊಂಡಿದೆ.

FSSAI ಮತ್ತು FDA ನಿಯಮಗಳ ಅನುಮತಿಯಿಲ್ಲದೆ ಅಪಾಯಕಾರಿ ದತ್ತೂರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಆಯುಕ್ತರು ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಬೆನ್ನಲ್ಲೇ ಅಮೆಜಾನ್ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳ ಮುಂದೆ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿದ್ದಾರೆ.

ದತ್ತೂರಿ ಹಣ್ಣು ಹೆಚ್ಚು ವಿಷಕಾರಿಯಾಗಿದೆ ಮತ್ತು ಅದನ್ನು ಆಹಾರವಾಗಿ ಸೇವಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರದ ವಿಷಯ ತಜ್ಞ ಡಾ. ಎಂ.ಜೆ. ಪ್ರಭು ಮಾತನಾಡಿ ಸಂಸ್ಕೃತದಲ್ಲಿ ಕನಕ ಎಂದು ಕರೆಯಲ್ಪಡುವ ದತ್ತೂರಿ ಒಂದು ಭಾರತೀಯ ಔಷಧೀಯ ಸಸ್ಯವಾಗಿದೆ ಆದರೆ ಇದನ್ನು "ಎಂದಿಗೂ ಹಣ್ಣಾಗಿ ಮಾರಾಟ ಮಾಡುವುದಿಲ್ಲ" ಮತ್ತು ಅದನ್ನು ಸೇವಿಸಬಾರದು ಎಂದು ಹೇಳಿದರು.

ಸಸ್ಯವು ಅಟ್ರೋಪಿನ್ ಸೇರಿದಂತೆ ವಿಷಕಾರಿ ಸಂಯುಕ್ತಗಳನ್ನು ಹೊಂದಿರುತ್ತದೆ ಮತ್ತು ಅತಿಯಾದ ಸೇವನೆಯು ತೀವ್ರ ಮಾದಕತೆ, ಪ್ರಜ್ಞೆ ಕಳೆದುಕೊಳ್ಳುವುದು ಮತ್ತು ಮನೋರೋಗಕ್ಕೆ ಕಾರಣವಾಗಬಹುದು. "ವೈದ್ಯರು, ಔಷಧ ಕಂಪನಿಗಳು ಮತ್ತು ರೈತರು ಮಾತ್ರ ಇದಕ್ಕೆ ಅನುಮತಿ ಹೊಂದಿರಬೇಕು ಎಂದು ಡಾ. ಪ್ರಭು ಹೇಳಿದರು.

ಡಾ. ಪ್ರಭು ಅವರ ಪ್ರಕಾರ, ತೀವ್ರವಾದ ಆಸ್ತಮಾ ಮತ್ತು ಬ್ರಾಂಕೈಟಿಸ್ ಸೇರಿದಂತೆ ಕೆಲವು ಆಯುರ್ವೇದ ಸೂತ್ರೀಕರಣಗಳಲ್ಲಿ ದತ್ತೂರಿ ಬಳಸಲಾಗುತ್ತದೆ, ಆದರೆ ನಿರ್ದಿಷ್ಟ ತಯಾರಿಕೆಯಲ್ಲಿ ನಿಖರವಾದ ಪ್ರಮಾಣದಲ್ಲಿ, ತಜ್ಞರ ಮೇಲ್ವಿಚಾರಣೆಯಲ್ಲಿ ಮಾತ್ರ ಬಳಸಬೇಕು. ಧಾರ್ಮಿಕ ಉದ್ದೇಶಗಳಿಗಾಗಿ ಸರಬರಾಜು ಮಾಡಲಾದ ದತುರಾವು "ತಿನ್ನುವ ಹಣ್ಣು ಅಲ್ಲ" ಮತ್ತು ಅದನ್ನು ಔಷಧಿಯಾಗಿ ತೆಗೆದುಕೊಳ್ಳಬಾರದು ಎಂಬ ಸ್ಪಷ್ಟ ಎಚ್ಚರಿಕೆಯನ್ನು ಹೊಂದಿರಬೇಕು ಎಂದು ಅವರು ಹೇಳಿದರು.

ಸಾರ್ವಜನಿಕರಿಗೆ ಸೇವಿಸಲು ನಾವು ಅಂತಹ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಇರಿಸಲು ಎಂದಿಗೂ ಶಿಫಾರಸು ಮಾಡುವುದಿಲ್ಲ" ಎಂದು ಅವರು ಹೇಳಿದರು.

ದತ್ತೂರಿ ಅತ್ಯಂತ ವಿಷಕಾರಿ ಸಸ್ಯವಾಗಿದ್ದು, ಇದರ ಹಣ್ಣು ಅಥವಾ ಬೀಜಗಳನ್ನು ಸೇವಿಸಿದರೆ ಮನುಷ್ಯರಿಗೆ ತೀವ್ರ ಸ್ವರೂಪದ ನರಮಂಡಲದ ಹಾನಿ ಉಂಟಾಗುತ್ತದೆ ಹಾಗೂ ಪ್ರಾಣಾಪಾಯ (ಸಾವು) ಸಂಭವಿಸುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ.

ಇಂತಹ ಡೆಡ್ಲಿ ವಸ್ತುವನ್ನು ಯಾವುದೇ ವೈದ್ಯಕೀಯ ಪರೀಕ್ಷೆ ಅಥವಾ ಧೃಡೀಕರಣವಿಲ್ಲದೆ ಆನ್‌ಲೈನ್‌ನಲ್ಲಿ ಸುಲಭವಾಗಿ ತಲುಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ವ್ಯಕ್ತಿಯ ಜೀವನದ ಜೊತೆ ಆಟವಾಡಿದಂತಿದೆ" ಎಂದು ಡಾ. ಸ್ಮಿತಾ ಹೇಳಿದರು, ವಿಷಕಾರಿ ಸಸ್ಯ ವಸ್ತುಗಳ ಅನಿಯಂತ್ರಿತ ಲಭ್ಯತೆಯ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ಆಂತರಿಕ ಔಷಧದ ಪ್ರಮುಖ ಸಲಹೆಗಾರ ಡಾ. ಅರವಿಂದ ಎಸ್‌ಎನ್, ದತುರಾ ಹಣ್ಣು ಅಥವಾ ಬೀಜಗಳನ್ನು ಸೇವಿಸುವುದರಿಂದ ಮೆದುಳು, ಹೃದಯ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಆರಂಭಿಕ ಲಕ್ಷಣಗಳಲ್ಲಿ ಒಣ ಬಾಯಿ, ತೀವ್ರ ಬಾಯಾರಿಕೆ, ಹಿಗ್ಗಿದ ಕಣ್ಣುಗುಡ್ಡೆಗಳು, ಕಣ್ಣುಗಳು ಮಬ್ಬಾಗುವುದು, ಚರ್ಮ ಕೆಂಪಾಗುವುದು ಹಾಗೂ ಹೃದಯ ಬಡಿತ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ