ಕರ್ನಾಟಕ ವಿಧಾನಸಭೆ 
ರಾಜ್ಯ

'ರಾಜ್ಯದ ಶೇ.30ರಷ್ಟು ಶಾಸಕರು ಭ್ರಷ್ಟರು, ಮುಖ್ಯಮಂತ್ರಿ ಕೇಳಿದರೆ ಅವರ ಪಟ್ಟಿಯನ್ನು ನೀಡಲು ನಾನು ಸಿದ್ಧ': ಹೀಗೆಂದು ಹೇಳಿದ್ದು ಯಾರು?

ಚಿತ್ರದುರ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ರಾಜ್ಯದಾದ್ಯಂತ ಗುತ್ತಿಗೆದಾರರಿಗೆ ಪಾವತಿಸಬೇಕಿರುವ 37,000 ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳಿ, ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಚಿತ್ರದುರ್ಗ: ರಾಜ್ಯದ ಶೇಕಡಾ 30ರಷ್ಟು ಚುನಾಯಿತ ಪ್ರತಿನಿಧಿಗಳು ಭ್ರಷ್ಟರಾಗಿದ್ದಾರೆ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಳಿದರೆ ಭ್ರಷ್ಟರ ಹೆಸರಿನ ಪಟ್ಟಿಯನ್ನು ನೀಡಲು ಸಿದ್ಧರಾಗಿದ್ದೇವೆ ಎಂದು ಕೂಡ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ರಾಜ್ಯದಾದ್ಯಂತ ಗುತ್ತಿಗೆದಾರರಿಗೆ ಪಾವತಿಸಬೇಕಿರುವ 37,000 ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳಿ, ತಕ್ಷಣವೇ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ರಾಜ್ಯದ 30 ಶೇಕಡಾ ಚುನಾಯಿತ ಪ್ರತಿನಿಧಿಗಳು ಭ್ರಷ್ಟರು. ಮುಖ್ಯಮಂತ್ರಿ ಕೇಳಿದರೆ ಅವರ ಹೆಸರಿನ ಪಟ್ಟಿಯನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದು ಮಂಜುನಾಥ್ ಹೇಳಿದರು.

ಗುತ್ತಿಗೆದಾರರ ಸಂಘದ ಬಾಕಿ ಪಾವತಿ ಸಮಸ್ಯೆಯನ್ನು ಹಲವು ಸಭೆಗಳು ನಡೆದಿದ್ದರೂ ಮುಖ್ಯಮಂತ್ರಿ ಪರಿಹರಿಸಿಲ್ಲ ಎಂದು ಟೀಕಿಸಿದರು.

ರಾಜ್ಯದ ಗುತ್ತಿಗೆದಾರರಿಗೆ 37,000 ಕೋಟಿ ರೂಪಾಯಿ ಬಾಕಿಯಿದೆ. ಇದನ್ನು ಹಿಂದಿನ ಸರ್ಕಾರ ಪಾವತಿ ಮಾಡದೆ ಬಾಕಿ ಉಳಿಸಿದೆ ಎಂದು ಸಿದ್ದರಾಮಯ್ಯ ಹೇಳಬಾರದು. ಸರ್ಕಾರ ಎಂದರೆ ಎಲ್ಲರೂ ಹೊಣೆಗಾರರು. ಮುಖ್ಯಮಂತ್ರಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು. ಈಗಾಗಲೇ ಅನೇಕ ಸಭೆಗಳು ನಡೆದಿವೆ. ಆದರೆ ಯಾವುದೇ ಫಲಿತಾಂಶ ಇಲ್ಲ ಎಂದು ಹೇಳಿದರು.

ಭಾರೀ ಪ್ರತಿಭಟನೆ ಎಚ್ಚರಿಕೆ ನೀಡಿದ ಮಂಜುನಾಥ್, ಮಾರ್ಚ್ 6ರಂದು ರಾಜ್ಯದ 35,000 ಗುತ್ತಿಗೆದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಘೋಷಿಸಿದರು.

ಜಲ್ ಜೀವನ ಮಿಷನ್ (JJM) ಕಾಮಗಾರಿಗಳ ವಿಳಂಬದ ವಿಷಯದಲ್ಲಿಯೂ ಆತಂಕ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

“JJM ಕಾಮಗಾರಿಗಳೂ ವಿಳಂಬವಾಗುತ್ತಿವೆ. ಸರ್ಕಾರ ಕೇಂದ್ರದೊಂದಿಗೆ ಮಾತನಾಡಿ ಹಣ ಬಿಡುಗಡೆ ಮಾಡಬೇಕು ಎಂದು ಹೇಳಿದರು. ಈ ಆರೋಪಗಳು, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಜಾತಿ, ಆಡಳಿತ, ಭ್ರಷ್ಟಾಚಾರ ಮತ್ತು ಹಣಕಾಸು ನಿರ್ವಹಣೆ, ನಾಯಕತ್ವ ಬದಲಾವಣೆ ಕುರಿತು ರಾಜಕೀಯದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಹೊರಬಿದ್ದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡಿನಲ್ಲಿ SIR: ಅಂತಿಮ ಪಟ್ಟಿ ಬಿಡುಗಡೆ; 74 ಲಕ್ಷ ಮತದಾರರ ಹೆಸರು ಡಿಲೀಟ್

ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!

ನಿಮ್ಮ ಜಿಮ್‌ಗೆ ಸೇರುತ್ತೇನೆ: ಟ್ರೈನರ್ ‘ಮೊಹಮ್ಮದ್ ದೀಪಕ್‌’ ಭೇಟಿಯಾದ ರಾಹುಲ್ ಗಾಂಧಿ

ಬಾಂಗ್ಲಾದೇಶ ಮುಳುಗಿಸುವ ಯೋಜನೆ, ಅಸ್ಥಿರತೆ ಸೃಷ್ಟಿಗೆ ಯತ್ನಿಸಿದ್ದ ನೊಬೆಲ್ ಯೂನಸ್: ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ ಬಹಿರಂಗ!

Ranji Trophy final: ಚೊಚ್ಚಲ ಬಾರಿ ಫೈನಲ್‌ಗೆ ಕಾಲಿಟ್ಟಿರುವ ಕಾಶ್ಮೀರ ಬಲಿಷ್ಠ ಕರ್ನಾಟಕದ ವಿರುದ್ಧ ಗೆಲ್ಲಲು ಪವಾಡವೇ ಮಾಡಬೇಕಿದೆ!

SCROLL FOR NEXT