ಸುರೇಶ್ ಕುಮಾರ್ 
ರಾಜ್ಯ

ರಾಜ್ಯಪಾಲರ ಭಾಷಣ ವಸಾಹತುಶಾಹಿ ಹ್ಯಾಂಗೊವರ್; ಮುಂದುವರೆಸುವ ಔಚಿತ್ಯದ ಬಗ್ಗೆ ಗಂಭೀರ ಚರ್ಚೆಯಾಗಲಿ: ಸುರೇಶ್‌ ಕುಮಾರ್‌

ಇದು ನನ್ನ ವಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು ಪಕ್ಷದ ಅಭಿಪ್ರಾಯವಲ್ಲ ಸ್ಪಷ್ಟಪಡಿಸಿದ ಮಾಜಿ ಸಚಿವರು, ರಾಜ್ಯಪಾಲರ ಭಾಷಣದ ಪದ್ಧತಿಯನ್ನು ಮರುಪರಿಶೀಲಿಸುವ ಅಗತ್ಯವಿದೆಯೇ? ಅದು ಇಂದು ಪ್ರಸ್ತುತವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ದೇಶಾದ್ಯಂತ ರಾಜ್ಯಪಾಲರು ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾಡುವ ವಾರ್ಷಿಕ ಭಾಷಣದ ಪದ್ಧತಿ ತನ್ನ ಮಹತ್ವ ಮತ್ತು ಪಾವಿತ್ರ್ಯವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಈ ಪದ್ಧತಿ ಮುಂದುವರಿಯಬೇಕೇ ಬೇಡವೇ ಎಂಬುದರ ಕುರಿತು ರಾಷ್ಟ್ರೀಯ ಚರ್ಚೆ ನಡೆಯಬೇಕು ಎಂದು ಹಿರಿಯ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಶುಕ್ರವಾರ ಹೇಳಿದ್ದಾರೆ.

ಇದು ನನ್ನ ವಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು ಪಕ್ಷದ ಅಭಿಪ್ರಾಯವಲ್ಲ ಸ್ಪಷ್ಟಪಡಿಸಿದ ಮಾಜಿ ಸಚಿವರು, "ರಾಜ್ಯಪಾಲರ ಭಾಷಣದ ಪದ್ಧತಿಯನ್ನು ಮರುಪರಿಶೀಲಿಸುವ ಅಗತ್ಯವಿದೆಯೇ? ಅದು ಇಂದು ಪ್ರಸ್ತುತವಾಗಿದೆಯೇ?" ಎಂದು ಪ್ರಶ್ನಿಸಿದ್ದಾರೆ.

ಇದನ್ನು "ರಾಜ ಅಥವಾ ರಾಣಿ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಯುಕೆಯ ವೆಸ್ಟ್‌ಮಿನಿಸ್ಟರ್ ವ್ಯವಸ್ಥೆಯಿಂದ ಅಳವಡಿಸಿಕೊಂಡ ವಸಾಹತುಶಾಹಿ ಹ್ಯಾಂಗೊವರ್" ಎಂದು ಸುರೇಶ್ ಕುಮಾರ್ ಕರೆದಿದ್ದಾರೆ. "ನಾವು ಇದನ್ನು ಸಂವಿಧಾನದ 87 ನೇ ವಿಧಿಯ ಅಡಿಯಲ್ಲಿ ಯಥಾರೀತಿಯಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ನಡೆದುಕೊಂಡು ಬಂದಿದೆ. ಸಂವಿಧಾನ ರಚನೆಯ ವೇಳೆ ಭವಿಷ್ಯದಲ್ಲಿ ಈ ರೀತಿಯ ಸಂಘರ್ಷ ನಡೆಯಬಹುದು ಎಂದು ಅಂದಾಜು ಇರಲಿಲ್ಲ. ಐಪಿಸಿ ತಯಾರಾದಾಗ ಹೇಗೆ ಸೈಬರ್‌ ಕ್ರೈಂ ಅಪರಾಧಗಳ ಕಲ್ಪನೆ ಇರಲಿಲ್ಲವೋ ಅದೇ ರೀತಿ ಸಂವಿಧಾನ ರಚನೆ ವೇಳೆ ರಾಜ್ಯಪಾಲರ ಭಾಷಣದ ಸಂಘರ್ಷದ ವಾತಾವರಣವೂ ಎದುರಾಗಿರಲಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಇದರ ಅಗತ್ಯ ಇದೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ ಎಂದರು.

ರಾಜ್ಯಪಾಲರು ನನ್ನ ಸರ್ಕಾರ ಎಂದು ಸಂಭೋಧಿಸಿ ಭಾಷಣ ಮಾಡುತ್ತಾರೆ. ಜನ ವಿಧಾನಸೌಧದ ಮುಂದಿನ ಅಂಬೇಡ್ಕರ್‌ ರಸ್ತೆಯಲ್ಲಿ ನಡೆದು ಹೋಗುವ ಸಾಮಾನ್ಯ ವ್ಯಕ್ತಿಗೆ ವಿಧಾನ ಸೌಧದ ಒಳಗೆ ನನ್ನ ಬಗ್ಗೆ ಚರ್ಚೆಯಾಗುತ್ತಿದೆಯೇ ? ಎಂಬ ಗೊಂದಲ ಕಾಡುತ್ತದೆ. ನಾವಿಲ್ಲಿ ಜನಸಾಮಾನ್ಯರ ಸಮಸ್ಯೆಗಳಾದ ಆರೋಗ್ಯ, ಶಿಕ್ಷಣದಂತಹ ವಿಚಾರಗಳನ್ನು ಚರ್ಚಿಸಿ ಪ್ರತಿಯೊಬ್ಬ ನಾಗರಿಕನಿಗೂ ಇದು ನನ್ನ ಸರ್ಕಾರ ಎಂಬ ಭಾವನೆ ಮೂಡಿಸುವ ಅಗತ್ಯ ಇದೆ ಎಂದು ಹೇಳಿದರು.

ರಾಜ್ಯಪಾಲರ ಭಾಷಣವನ್ನು ನಿಲ್ಲಿಸುವ ಅಗತ್ಯ ಇದೆ. ಅದಕ್ಕೆ ಕರ್ನಾಟಕ ರಾಜ್ಯದಿಂದಲೇ ಚರ್ಚೆಗಳು ಆರಂಭವಾಗಬೇಕು ಎಂದು ಸಲಹೆ ನೀಡಿದರು. ಸರ್ಕಾರ ರಾಜ್ಯಪಾಲರನ್ನು ಕರೆತಂದು ಭಾಷಣ ಮಾಡಿಸುತ್ತದೆ. ಸರ್ಕಾರ ಭಾಷಣ ಮಂಡನೆ ಮಾಡಿದರೇ, ವಿರೋಧ ಪಕ್ಷದವರು ಖಂಡನೆ ಮಾಡುತ್ತಾರೆ. ಈ ಮಂಡನೆ-ಖಂಡನೆಗಳ ನಡುವೆ ಅಗೌರವವಾಗುವುದು ರಾಜ್ಯಪಾಲರಿಗೆ ಎಂದು ಹೇಳಿದರು.

ರಾಜ್ಯಪಾಲರನ್ನು ಸದನಕ್ಕೆ ಆಹ್ವಾನಿಸಿ, ಸರ್ಕಾರದ ಸಾಧನೆಗಳನ್ನು ಓದುವಂತೆ ಮಾಡಿ, ನಂತರ ಅವರನ್ನು ಖಂಡಿಸುವುದು ಅಂತಿಮವಾಗಿ ರಾಜ್ಯಪಾಲರ ಕಚೇರಿಗೆ ಮಾಡಿದ ಅವಮಾನವಾಗುತ್ತದೆ ಎಂದು ಅವರು ವಿಷಾದಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸಾಂಪ್ರದಾಯಿಕ ರಾಜ್ಯಪಾಲರ ಭಾಷಣವನ್ನು ರದ್ದುಗೊಳಿಸಲು ಸಾಂವಿಧಾನಿಕ ತಿದ್ದುಪಡಿಯ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಅವರು ಗಮನಸೆಳೆದರು. ಬಿಹಾರ ಮತ್ತು ಜಾರ್ಖಂಡ್‌ನ ಮಾಜಿ ರಾಜ್ಯಪಾಲ ನ್ಯಾಯಮೂರ್ತಿ ಎಂ. ರಾಮ ಜೋಯಿಸ್ ಅವರು ರಾಜ್ಯಪಾಲರ ಭಾಷಣದ "ವಿಡಂಬನೆ"ಯನ್ನು ಕೊನೆಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸುರೇಶ್ ಕುಮಾರ್ ಸ್ಮರಿಸಿದರು

"ಕರ್ನಾಟಕದಿಂದ ಸೂಚನೆ ಪಡೆದು, ರಾಜ್ಯಪಾಲರು ಸರ್ಕಾರಗಳಿಗೆ ಏನು ಓದಬೇಕು ಎಂಬುದರ ಕುರಿತು ರಾಷ್ಟ್ರೀಯ ಚರ್ಚೆಯ ಅವಶ್ಯಕತೆಯಿದೆ. ಸಾಮಾನ್ಯವಾಗಿ, ಸಾಧನೆಗಳು ಮತ್ತು ಭವಿಷ್ಯದ ದೃಷ್ಟಿಕೋನವನ್ನು ಭಾಷಣದಲ್ಲಿ ಸೇರಿಸಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ರಾಜ್ಯಪಾಲರ ಭಾಷಣವು ರಾಜಕೀಯ ಮಹತ್ವವನ್ನು ಹೊಂದಿದೆ" ಎಂದು ಅವರು ಹೇಳಿದರು. ರಾಜ್ಯಪಾಲರು ಓದದ ಭಾಗವನ್ನು (ಎಂಜಿಎನ್‌ಆರ್‌ಇಜಿಎ ರದ್ದತಿ ಕುರಿತು), ಸರ್ಕಾರವು ತನ್ನ ಪತ್ರಿಕೆ ಜಾಹೀರಾತುಗಳ ಮೂಲಕ ಅದನ್ನು ಸಾಧಿಸಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ವಿಷಯವನ್ನು ಉಲ್ಲೇಖಿಸಿದ ಸುರೇಶ್ ಕುಮಾರ್, ಅಧಿಕಾರಶಾಹಿ ಅನಿಶ್ಚಿತತೆಯ ಸ್ಥಿತಿಯಲ್ಲಿದೆ. "ನವೆಂಬರ್, ಡಿಸೆಂಬರ್‌ನಲ್ಲಿ ಕ್ರಾಂತಿ ಸಂಭವಿಸುತ್ತದೆ ಎಂದು ಊಹಿಸಲಾಗಿತ್ತು ನಂತರಈ ಜನವರಿಗೆ ತಳ್ಳಲಾಯಿತು. ಹೀಗಾಗಿ ಅಧಿಕಾರಿಗಳು ಯಾರಿಗೆ ವರದಿ ಮಾಡಬೇಕೆಂದು ತಿಳಿಯದೆ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಅವ್ಯವಹಾರ ಒಳ್ಳೆಯದಲ್ಲ" ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಿರಿಯ ಸಹೋದರ ಡಿ.ಕೆ. ಸುರೇಶ್ ಮತ್ತು ಸಿಎಂ ಪುತ್ರ ಡಾ. ಯತೀಂದ್ರ ನಡುವೆ ಶ್ಯಾಡೋ ಬಾಕ್ಸಿಂಗ್ ಇರುವುದರಿಂದ ಸರ್ಕಾರವು ಒಳಜಗಳದಿಂದ ಹಾಳಾಗಿದೆ. ಇದು ತೆರಿಗೆ ರಹಿತ ಮನರಂಜನೆಯಂತಾಗಿದೆ, ರಾಜ್ಯದ ಜನರು ಇದರಿಂದ ಬೇಸತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈ ದೇಶದಲ್ಲಿ, ಕೆಲವು ಹೆಸರುಗಳು ಕೆಲವರಲ್ಲಿ ದ್ವೇಷವನ್ನು ಉಂಟುಮಾಡುತ್ತವೆ. ಬಿಜೆಪಿ ಅದಾನಿಗೆ ಶರಣಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ರಾಜ್ಯ ಸರ್ಕಾರ ಅದಾನಿ ಗ್ರೂಪ್‌ನ ACC ಸಿಮೆಂಟ್‌ಗೆ ಕೆಂಪು ಕಾರ್ಪೆಟ್ ಹಾಕಿದೆ ಎಂದು ಲೇವಡಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

40 ಕೋಟಿ ಯುವಕರು ದೇಶದ ನಿಜವಾದ ಶಕ್ತಿ, ಆದರೆ ನಿರುದ್ಯೋಗ ತಾಂಡವವಾಡುತ್ತಿದೆ: ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿ

Toxic Trailer: ನಾನು ಬರೋ ಸಮಯ ಬಂದಿದೆ ಎಂದ ಯಶ್, ನಾವೆಲ್ಲರೂ ಕಾಯುತ್ತಿದ್ದೇವೆ ಎಂದ ಶಿವಣ್ಣ!

UPI ಪಾವತಿಗಳಿಗೆ ಶುಲ್ಕ ವಿಧಿಸಲ್ಲ: ಯಾರಿಗೆ MDR ವಿಧಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿದ ಕೇಂದ್ರ ಸರ್ಕಾರ!

ಟೆಸ್ಟ್ ಪಂದ್ಯದ ಕೊನೆಯ ಓವರ್​ನಲ್ಲಿ 6, 6, 0, 6, 6 ಸಿಡಿಸಿದ ಗುರ್ನೂರ್ ಬ್ರಾರ್; ಗಂಭೀರ್ ಚಲ್ಲಾಳೆ, Video!

ಅಸಮಾಧಾನಿತ ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಆಫರ್; ಹೊಸ ದಾಳ ಉರುಳಿಸಿದ 'ದಳಪತಿ'