ಮೊದಲ ಬಾರಿಗೆ ಕೈಗೊಂಡಿರುವ ವಿಶಿಷ್ಟ ಉಪಕ್ರಮದಲ್ಲಿ, ಶಿವಮೊಗ್ಗ ಕೇಂದ್ರ ಕಾರಾಗೃಹವು ಘನ ತ್ಯಾಜ್ಯ ನಿರ್ವಹಣಾ ಜಾಗೃತಿ ಅಭಿಯಾನಕ್ಕಾಗಿ ಕೈದಿಗಳಿಗೆ ಜಿಂಗಲ್‌ಗಳನ್ನು ರಚಿಸಿ ಹಾಡಲು ಅವಕಾಶ ಕಲ್ಪಿಸಿದೆ. 
ರಾಜ್ಯ

ಕೈದಿಗಳ ಬಾಯಲ್ಲಿ ಸ್ವಚ್ಛತೆಯ ಹಾಡು: ಶಿವಮೊಗ್ಗ ಕಾರಾಗೃಹ ಜೈಲುಹಕ್ಕಿಗಳಿಂದ ನೂತನ ಪ್ರಯೋಗ

ಈ ಹಾಡಿನ ವಿಶೇಷವೆಂದರೆ, ನಗರದ ಕಸ ಸಂಗ್ರಹಿಸುವ ವಾಹನಗಳಲ್ಲಿ ಕೇಳಿಬರುವ ಈ ಜಿಂಗಲ್‌ಗಳಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳೇ ಧ್ವನಿ ನೀಡಿದ್ದಾರೆ. ಕಸ ಸಂಗ್ರಹ ವಾಹನಗಳಿಗೆ ಹೊಸ ಸಂಗೀತದ ಸ್ಪರ್ಶ ನೀಡುವ ಉದ್ದೇಶದಿಂದ, ಜೈಲು ಕೈದಿಗಳೇ ಹಾಡುಗಳನ್ನು ರಚಿಸಿ ಹಾಡಿದ್ದಾರೆ.

ಶಿವಮೊಗ್ಗ: "ಬನ್ನಿರಣ್ಣ, ಬನ್ನಿರಕ್ಕ, ಬಾರೋ ತಮ್ಮ, ಬಾರೋ ಅಕ್ಕ, ಕಸ ವಿಲೇವಾರಿ ಗಾಡಿ ಬಂದೈತೆ, ನಿಮ್ಮ ಮನೆ ಮುಂದೆ ನಿಂತೈತೆ..." ಎಂಬ ಹಾಡು ಜೂನ್ 11ರಿಂದ ಪ್ರತಿದಿನ ಬೆಳಗ್ಗೆ ಶಿವಮೊಗ್ಗ ನಗರದಲ್ಲಿ ಕೇಳಿಬರುತ್ತಿದೆ.

ಈ ಹಾಡಿನ ವಿಶೇಷವೆಂದರೆ, ನಗರದ ಕಸ ಸಂಗ್ರಹಿಸುವ ವಾಹನಗಳಲ್ಲಿ ಕೇಳಿಬರುವ ಈ ಜಿಂಗಲ್‌ಗಳಿಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಗಳೇ ಧ್ವನಿ ನೀಡಿದ್ದಾರೆ. ಕಸ ಸಂಗ್ರಹ ವಾಹನಗಳಿಗೆ ಹೊಸ ಸಂಗೀತದ ಸ್ಪರ್ಶ ನೀಡುವ ಉದ್ದೇಶದಿಂದ, ಜೈಲು ಕೈದಿಗಳೇ ಹಾಡುಗಳನ್ನು ರಚಿಸಿ ಹಾಡಿದ್ದಾರೆ.

ವಿಶಿಷ್ಟ ಪ್ರಯತ್ನವಾಗಿ, ಶಿವಮೊಗ್ಗ ಕೇಂದ್ರ ಕಾರಾಗೃಹವು ಘನ ತ್ಯಾಜ್ಯ ನಿರ್ವಹಣಾ ಜಾಗೃತಿ ಅಭಿಯಾನಕ್ಕಾಗಿ ಕೈದಿಗಳಿಗೆ ಜಿಂಗಲ್‌ಗಳನ್ನು ರಚಿಸಿ ಹಾಡಲು ಅವಕಾಶ ಕಲ್ಪಿಸಿದೆ. ಕುಂದಾಪುರ ಮೂಲದ ಕೈದಿ ಚಂದ್ರ ಹೆಮ್ಮಾಡಿ ಆರು ಹಾಡುಗಳನ್ನು ರಚಿಸಿದ್ದು, ಅವರೊಂದಿಗೆ ಇನ್ನೂ ಐವರು ಕೈದಿಗಳು ಅವುಗಳನ್ನು ಹಾಡಿದ್ದಾರೆ. ಕೈದಿಗಳಲ್ಲಿದ್ದ ಈ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು ಮುಖ್ಯ ಕಾರಾಗೃಹ ಅಧೀಕ್ಷಕ ಪಿ. ರಂಗನಾಥ್.

ಕಳೆದ ತಿಂಗಳು ಭದ್ರಾವತಿ ಆಕಾಶವಾಣಿಯಲ್ಲಿ ಪ್ರತಿ ಭಾನುವಾರ ಸಂಜೆ 4ರಿಂದ 5ರವರೆಗೆ ಪ್ರಸಾರವಾದ 'ಜೈಲು ಹಕ್ಕಿಗಳ ಗಾನಸುಧೆ' ಕಾರ್ಯಕ್ರಮದಲ್ಲಿ ಜೈಲಿನ ಕೈದಿಗಳು ಜನಪದ ಗೀತೆಗಳು, ಭಾವಗೀತೆಗಳು ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಿದ್ದರು. ಚಿತ್ರಗೀತೆಗಳನ್ನು ಮಾತ್ರ ಕಾರ್ಯಕ್ರಮದಲ್ಲಿ ಸೇರಿಸಲಾಗಿರಲಿಲ್ಲ.

ಈ ಉಪಕ್ರಮದಿಂದ ನಮ್ಮ ಬರವಣಿಗೆ ಮತ್ತು ಗಾಯನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ದೊರೆಯಿತು. ನಾವು ರಚಿಸಿದ ಹಾಡುಗಳು ಸ್ವಚ್ಛತೆ, ಕಸದ ವಿಂಗಡಣೆ ಹಾಗೂ ತ್ಯಾಜ್ಯ ನಿರ್ವಹಣೆಯ ಮಹತ್ವವನ್ನು ಜನರಿಗೆ ತಿಳಿಸುತ್ತವೆ. ಜೈಲಿನ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಲೀಲಾ ಅವರು ಆಕಾಶವಾಣಿ ಕಾರ್ಯಕ್ರಮದ ಅವಧಿಯಲ್ಲೂ, ಕಸ ಸಂಗ್ರಹ ವಾಹನಗಳಿಗಾಗಿ ಹಾಡುಗಳ ಧ್ವನಿಮುದ್ರಣದಲ್ಲೂ ನಮಗೆ ಮಾರ್ಗದರ್ಶನ ನೀಡಿದರು ಎಂದು ಚಂದ್ರ ಹೆಮ್ಮಾಡಿ ಹೇಳಿದರು.

ಹೆಮ್ಮಾಡಿ ಅವರ ಹಾಡುಗಳು ಮನೆಗಳಲ್ಲಿ ಕಸ ಸಂಗ್ರಹ, ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸುವುದು, ತ್ಯಾಜ್ಯ ಮರುಬಳಕೆ, ಮನೆಯಲ್ಲೇ ಸಾವಯವ ಗೊಬ್ಬರ ತಯಾರಿಸುವುದು ಹಾಗೂ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಮಹತ್ವವನ್ನು ಜನರಿಗೆ ತಿಳಿಸುತ್ತವೆ. ನಗರವನ್ನು ಸ್ವಚ್ಛವಾಗಿಡುವ ಅಗತ್ಯವನ್ನೂ ಹಾಡುಗಳು ಒತ್ತಿ ಹೇಳುತ್ತವೆ.

ದಾವಣಗೆರೆ ಮೂಲದ ಮತ್ತೊಬ್ಬ ಕೈದಿ ದಾದಾಪೀರ್ ರಚಿಸಿರುವ ಹಾಡು ವಿಶೇಷ ಗಮನ ಸೆಳೆಯುತ್ತದೆ. ಸ್ವಚ್ಛತೆಯೇ ಸೇವೆಯು ಎಂದ ಗಾಂಧಿ ತಾತನ, ಸ್ವಚ್ಛತೆಯೇ ಮಂತ್ರ ಸ್ವಚ್ಛ ಭಾರತ ಅಭಿಯಾನ ಎಂದು ಆರಂಭವಾಗುವ ಈ ಹಾಡು, ವೈಜ್ಞಾನಿಕವಲ್ಲದ ರೀತಿಯಲ್ಲಿ ಕಸ ವಿಲೇವಾರಿ ಮಾಡುವುದು ಅಪರಾಧ ಎಂಬುದನ್ನು ಕನಸಿನಲ್ಲೂ ಮರೆಯಬಾರದು ಎಂದು ನಾಗರಿಕರಿಗೆ ಸಂದೇಶ ನೀಡುತ್ತದೆ. ಮಾಲ್ನಾಡಿನ ಹೆಬ್ಬಾಗಿಲಾದ ಶಿವಮೊಗ್ಗವನ್ನು ರಾಜ್ಯದ ಅತ್ಯಂತ ಸ್ವಚ್ಛ ಜಿಲ್ಲೆಯನ್ನಾಗಿ ರೂಪಿಸಲು ಹಾಗೂ ಎಲ್ಲ ರೀತಿಯ ಮಾಲಿನ್ಯದಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅದು ಕರೆ ನೀಡುತ್ತದೆ.

ಮುಖ್ಯ ಕಾರಾಗೃಹ ಅಧೀಕ್ಷಕ ಪಿ. ರಂಗನಾಥ್ , ಅಪರಾಧಗಳಿಂದ ಗುರುತಿಸಲ್ಪಟ್ಟಿದ್ದ ಈ ಕೈದಿಗಳು ಈಗ ತಮ್ಮ ಪ್ರತಿಭೆ ಮತ್ತು ಕೌಶಲ್ಯದ ಮೂಲಕ ಹೊಸ ಗುರುತನ್ನು ಪಡೆದುಕೊಂಡಿದ್ದಾರೆ. ಅವರ ಭಾವನೆ ಮತ್ತು ಪ್ರತಿಭೆಗೆ ಬೆಂಬಲ ನೀಡುವ ಪ್ರಯತ್ನ ಇದಾಗಿದೆ. ಸುಮಾರು 20 ಮಂದಿ ಕೈದಿಗಳಿಗೆ ಹಾಡುವ ಆಸಕ್ತಿ ಇತ್ತು. ಆದರೆ ಅವರಲ್ಲಿ ಯಾರೂ ಸಂಗೀತ ತರಗತಿಗಳಿಗೆ ಹೋಗಿರಲಿಲ್ಲ. ಒಬ್ಬ ಕೈದಿ ಮಾತ್ರ ಸಂಗೀತ ಕಲಿತಿದ್ದನು. ಉಳಿದವರು ಅವನನ್ನು ಅನುಸರಿಸಿ ಅಭ್ಯಾಸ ಮಾಡಿದರು. ಇಂತಹ ಚಟುವಟಿಕೆಗಳು ಅವರನ್ನು ಸದಾ ತೊಡಗಿಸಿಕೊಂಡಿರುತ್ತವೆ ಹಾಗೂ ಹೊಸದನ್ನು ಕಲಿಯಲು ನೆರವಾಗುತ್ತವೆ ಎಂದು ಹೇಳಿದರು.

ದಾದಾಪೀರ್ ಅವರ ಪ್ರಕಾರ, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗಳನ್ನು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 'ಜೈಲು ಹಕ್ಕಿಗಳ ಗಾನಸುಧೆಯಂತಹ ಸಹಪಠ್ಯ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ.

ಹಿಂದೆ ಜೈಲು ಎಂದರೆ ಕೊಲೆಗಾರರು, ಕಳ್ಳರು ಮತ್ತು ಅಪರಾಧಿಗಳಿರುವ ಸ್ಥಳ ಎಂಬ ಕಲ್ಪನೆ ಜನರಲ್ಲಿ ಇತ್ತು. ಆದರೆ ಈಗ ಇಂತಹ ಉಪಕ್ರಮಗಳಿಂದ ಜೈಲು ಒಂದು 'ತಿದ್ದುಪಡಿ ಸಂಸ್ಥೆ'ಯಾಗಿ ರೂಪುಗೊಳ್ಳುತ್ತಿದೆ. 'ಸ್ವಚ್ಛತೆಯೇ ದೇವರ ಸಮೀಪ' ಎಂಬ ಮಾತಿನಂತೆ, ನಮಗೂ ಸ್ವಚ್ಛತೆಯ ಮಹತ್ವ ತಿಳಿದಿದೆ. ಈ ಹಾಡುಗಳನ್ನು ಹಾಡುವ ಅವಕಾಶ ದೊರೆತಿರುವುದನ್ನು ನಾನು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಒಂದೇ ಶಾಟ್‌ನಲ್ಲಿ ಇರಾನ್‌ನ ಎಲ್ಲಾ ನಾಯಕರು ಖತಂ ಆಗುತ್ತಿದ್ದರು"... ಆದರೆ, ಅಮೆರಿಕಾ ಸುಮ್ಮನಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್..!

Venezuelaದಲ್ಲಿ ಮರಣ ಮೃದಂಗ: ಅವಳಿ ಭೂಕಂಪಕ್ಕೆ 2,954 ಮಂದಿ ಬಲಿ, ಸಾವಿರಾರು ಕುಟುಂಬಗಳು ಬೀದಿಗೆ..!

'Boss ಯಾರು ಬಾಸ್ ಅಂತ ನೆತನ್ಯಾಹುಗೆ ಚೆನ್ನಾಗಿ ಗೊತ್ತಿದೆ'; ಇಸ್ರೇಲ್ ಪ್ರಧಾನಿಗೆ ಟ್ರಂಪ್ ಖಡಕ್ ಸಂದೇಶ, ಆಪ್ತರಿಂದಲೂ 'ಬಿಬಿ' ವಿರುದ್ಧ ಅಸಮಾಧಾನ..!

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ