ಗ್ರೇಟರ್ ಬೆಂಗಳೂರು ಪ್ರಾಧಿಕಾರ Online Desk
ರಾಜ್ಯ

ಹೊಸ 'ಎ' ಖಾತಾ ಪಡೆಯಲು ರಿಯಾಯತಿ: ಅರ್ಜಿ ಸಲ್ಲಿಸಲು ಆಗಸ್ಟ್ 23 ರವರೆಗೆ ಗಡುವು ವಿಸ್ತರಣೆ

ಜಿಬಿಎ ಅಂದಾಜಿನ ಪ್ರಕಾರ ಸುಮಾರು ಐದು ಲಕ್ಷ ಆಸ್ತಿಗಳು ಹೊಸ ಎ-ಖಾತಾಗೆ ಅರ್ಹವಾಗಿವೆ, ಆದರೆ ಇಲ್ಲಿಯವರೆಗೆ ಸುಮಾರು 7,000 ಅರ್ಜಿಗಳು ಮಾತ್ರ ಬಂದಿವೆ. ಕಡಿಮೆಯಾದ ಶುಲ್ಕವು ಹೆಚ್ಚಿನ ಆಸ್ತಿ ಮಾಲೀಕರು ಮುಂದೆ ಬರಲು ಪ್ರೋತ್ಸಾಹಿಸುತ್ತದೆ.

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಹೊಸ ‘ಎ’ ಖಾತಾ ಪಡೆಯಲು ಅರ್ಜಿ ಸಲ್ಲಿಸುವ ಅರ್ಹ ಆಸ್ತಿಗಳಿಗೆ ವಿಧಿಸಲಾಗುತ್ತಿರುವ ಬೆಟರ್‌ಮೆಂಟ್ ಲೆವಿಯನ್ನು ಮಾರ್ಗಸೂಚಿ ಮೌಲ್ಯದ ಶೇ.5ರಿಂದ ಶೇ.2ಕ್ಕೆ ಇಳಿಸಿ ನೀಡಿರುವ ರಿಯಾಯಿತಿಯನ್ನು 2026ರ ಆಗಸ್ಟ್ 23ರವರೆಗೆ ಕರ್ನಾಟಕ ಸರ್ಕಾರ ವಿಸ್ತರಿಸಿದೆ.

ನಗರಾಭಿವೃದ್ಧಿ ಇಲಾಖೆ 2026ರ ಜುಲೈ 24ರಂದು ಹೊರಡಿಸಿರುವ ಪರಿಷ್ಕೃತ ಸರ್ಕಾರಿ ಆದೇಶದ ಪ್ರಕಾರ, ಏಕ ಗವಾಕ್ಷಿ ವ್ಯವಸ್ಥೆಯಡಿ ಹೊಸ ‘ಎ’ ಖಾತಾ ಪಡೆಯಲು ಸಲ್ಲಿಸುವ ಅರ್ಜಿಗಳಿಗೆ ಆಗಸ್ಟ್ 23ರವರೆಗೆ ಶೇ.2ರ ಬೆಟರ್‌ಮೆಂಟ್ ಲೆವಿ ಅನ್ವಯವಾಗಲಿದೆ. ಹಿಂದಿನ ಅಧಿಸೂಚನೆಯ ಇತರೆ ಎಲ್ಲಾ ಷರತ್ತುಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ, ‘ಬಿ’ ಖಾತಾದಿಂದ ‘ಎ’ ಖಾತಾಗೆ ಪರಿವರ್ತನೆಗೆ ಶೇ.2ರ ಲೆವಿ ವಿಧಿಸಲಾಗುತ್ತಿದ್ದರೆ, ಹೊಸ ‘ಎ’ ಖಾತಾ ಅರ್ಜಿಗಳಿಗೆ ಶೇ.5ರ ಲೆವಿ ವಿಧಿಸಲಾಗುತ್ತಿರುವುದರಿಂದ ಸಮಾನ ಪರಿಸ್ಥಿತಿಯಲ್ಲಿರುವ ಆಸ್ತಿ ಮಾಲೀಕರ ನಡುವೆ ಅಸಮಾನತೆ ಉಂಟಾಗಿದೆ ಎಂದು ನಿವಾಸಿಗಳ ಸಂಘಗಳು ಹಾಗೂ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿರುವುದಾಗಿ ತಿಳಿಸಿತ್ತು.

ಜಿಬಿಎ ಅಂದಾಜಿನ ಪ್ರಕಾರ ಸುಮಾರು ಐದು ಲಕ್ಷ ಆಸ್ತಿಗಳು ಹೊಸ ಎ-ಖಾತಾಗೆ ಅರ್ಹವಾಗಿವೆ, ಆದರೆ ಇಲ್ಲಿಯವರೆಗೆ ಸುಮಾರು 7,000 ಅರ್ಜಿಗಳು ಮಾತ್ರ ಬಂದಿವೆ. ಕಡಿಮೆಯಾದ ಶುಲ್ಕವು ಹೆಚ್ಚಿನ ಆಸ್ತಿ ಮಾಲೀಕರು ಮುಂದೆ ಬರಲು ಪ್ರೋತ್ಸಾಹಿಸುತ್ತದೆ.

ಜಿಬಿಎ ಅಡಿಯಲ್ಲಿನ ಐದು ಪುರಸಭೆಯ ನಿಗಮಗಳಿಗೆ ಆದಾಯ ಸಂಗ್ರಹವನ್ನು ಸುಧಾರಿಸುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಗಡುವನ್ನು ಮೀರಿ ರಿಯಾಯಿತಿ ನೀಡುವ ಅಧಿಕಾರಿಗಳು ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆಗಸ್ಟ್ 23ಕ್ಕೆ ಈ ರಿಯಾಯಿತಿ ಕೊನೆಗೊಳ್ಳಲಿದ್ದು, ಅರ್ಜಿದಾರರು ಆನಂತರ ಶೇ 5ರಷ್ಟು ಮೂಲ ಅಭಿವೃದ್ಧಿ ಶುಲ್ಕವನ್ನೇ ಪಾವತಿಸಬೇಕಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಾರದೊಳಗೆ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣ: ದೆಹಲಿಗೆ ತೆರಳುವ ಮುನ್ನ ಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ಕೇಂದ್ರಕ್ಕೆ ಅಗ್ನಿ ಪರೀಕ್ಷೆ: ಲೋಕಸಭೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಸೂದೆ ಮಂಡನೆ, ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳ ಸಜ್ಜು

ಆನೇಕಲ್‌ ಬಳಿ ಭಾರೀ ಅಗ್ನಿ ಅವಘಡ: ಕ್ಷಣಾರ್ಧದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು! Video

ರಾಜ್‌ಕುಮಾರ್ ರಸ್ತೆಯಲ್ಲಿ ಹೈಡ್ರಾಮಾ; ಮೊಬೈಲ್ ಅಂಗಡಿ ಸಿಬ್ಬಂದಿಗಳ ನಡುವೆ ಮಾರಾಮಾರಿ, 17 ಮಂದಿ ವಿರುದ್ಧ ಪ್ರಕರಣ, Video

ಅಕ್ರಮ ಪಾರ್ಕಿಂಗ್, ಬಹಿರಂಗ ಮೂತ್ರವಿಸರ್ಜನೆ; 'ಯೆಲ್ಲೋ ಸ್ಪಾಟ್' ಆದ ಶೇಷಾದ್ರಿ ರಸ್ತೆ?