ಲಕ್ಷ್ಮೀ ದುರ್ಗಾ, ನಾಗೇಂದ್ರ 
ರಾಜ್ಯ

ವಿಚಿತ್ರ ಘಟನೆ: ಮಗಳ ಸಂಬಳ, 40 ಲಕ್ಷ ವಧುದಕ್ಷಿಣೆಗೆ ಬೇಡಿಕೆ; ವಿರೋಧಿಸಿದ ಮಗಳಿಗೆ ಚೂರಿ ಇರಿದ ತಂದೆ!

ಮಗಳನ್ನು ಸಾಕಲು ನನ್ನ ಸರ್ವಸ್ವವನ್ನು ಅರ್ಪಿಸಿದ್ದೇನೆ. ಹೀಗಾಗಿ ಮಗಳನ್ನು ಮದುವೆಯಾಗಬೇಕಾದರೆ 40 ಲಕ್ಷ ರೂಪಾಯಿ ವದುದಕ್ಷಿಣೆ ಹಾಗೂ ಆಕೆಯ ಸಂಪಾದನೆಯನ್ನು ನನಗೆ ಕೊಡಬೇಕೆಂದು ತಂದೆಯೊಬ್ಬರು ಕೇಳಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.

ದೇವನಹಳ್ಳಿ: ಮಗಳನ್ನು ಸಾಕಲು ನನ್ನ ಸರ್ವಸ್ವವನ್ನು ಅರ್ಪಿಸಿದ್ದೇನೆ. ಹೀಗಾಗಿ ಮಗಳನ್ನು ಮದುವೆಯಾಗಬೇಕಾದರೆ 40 ಲಕ್ಷ ರೂಪಾಯಿ ವದುದಕ್ಷಿಣೆ ಹಾಗೂ ಆಕೆಯ ಸಂಪಾದನೆಯನ್ನು ನನಗೆ ಕೊಡಬೇಕೆಂದು ತಂದೆಯೊಬ್ಬರು ಕೇಳಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಗಳಿಗೆ ತಂದೆಯೇ ಚೂರಿ ಇರಿದಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ಮಗಳಿಗೆ ಮದುವೆ ಮಾಡಲು ತಂದೆ ನಿರ್ಧರಿಸಿದ್ದರು. ಅದರಂತೆ ಮದುವೆಗೆ ಗಂಡನ್ನು ನೋಡಿದ್ದರು. ನಾನು ಮಗಳು ಲಕ್ಷ್ಮೀದುರ್ಗಾಳನ್ನು ಕಷ್ಟಪಟ್ಟು ಓದಿಸಿದ್ದೇನೆ. ಮದುವೆಯಾಗಲು 40 ಲಕ್ಷ ವದುದಕ್ಷಿಣೆ ನೀಡಬೇಕು. ಅಲ್ಲದೆ ಮಗಳು ಕೆಲಸ ಮಾಡುತ್ತಿದ್ದು ಆಕೆಯ ತಿಂಗಳ ಸಂಬಳವನ್ನು ನನಗೆ ಕೊಡಬೇಕು ಎಂದು ತಂದೆ ನಾಗೇಂದ್ರ ಒತ್ತಾಯಿಸಿದ್ದರು. ಇದಕ್ಕೆ ಪತ್ನಿ ಹಾಗೂ ಮಗಳು ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದ ಕೋಪಗೊಂಡ ನಾಗೇಂದ್ರ ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿಗೆ ಬಂದು ಆಕೆಯ ಹೊಟ್ಟೆ, ಎದೆ, ಕುತ್ತಿಗೆಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ. ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಜುಲೈ 25ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ನಾಗೇಂದ್ರನನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Madras ನಿರ್ದೇಶಕ ಕಾಮಕೋಟಿ 'ಗೋಮೂತ್ರ ತಜ್ಞ': ಪ್ರಿಯಾಂಕಾ ಗಾಂಧಿ ಹೇಳಿಕೆ ಖಂಡಿಸಿ 200ಕ್ಕೂ ಹೆಚ್ಚು ಶಿಕ್ಷಣ ತಜ್ಞರಿಂದ ಪತ್ರ

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!

ಪಾಕ್ ಸೇನೆ ಇಸ್ರೇಲ್ ಗಿಂತಲೂ ಕೆಟ್ಟದು: ಮುನೀರ್ ಒಬ್ಬ 'Zalim'; ಕ್ಯಾಮರಾ ಮುಂದೆ ಒಂದೇ ಸಮನೆ ಕಣ್ಣೀರಿಟ್ಟ PoK ವ್ಯಕ್ತಿ! ಮನಕಲಕುವ Video

BJP ಸೇರಿ, ಇಲ್ಲದಿದ್ದರೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ: ಅಭಿಜೀತ್ ದೀಪ್ಕೆಗೆ 'ವಿಡಿಯೋ ಬೆದರಿಕೆ' ಬಿಚ್ಚಿಟ್ಟ ತಾಯಿ!

ಚೆನ್ನಮ್ಮ ಉತ್ತರ ಕ್ರಿಯಾದಿ: ಸಮಾಧಿ ಮುಂದೆ ಪತ್ನಿ ನೆನೆದು ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ