ಹೆದ್ದಾರಿಯಲ್ಲಿ ಸರಣಿ ಅಪಘಾತದಿಂದ ರೊಚ್ಚಿಗೆದ್ದ ಪ್ರಯಾಣಿಕರು 
ರಾಜ್ಯ

ನೆಲಮಂಗಲ ಬಳಿ ಸರಣಿ ಅಪಘಾತ; KSRTC ಚಾಲಕನಿಗೆ ಥಳಿತ! ಹೆದ್ದಾರಿಯಲ್ಲಿ ಕೆಲಕಾಲ ಸಾಲುಗಟ್ಟಿ ನಿಂತ ವಾಹನಗಳು!

ಈ ವೇಳೆ ಚಾಲಕ ಮತ್ತು ಉಳಿದ ವಾಹನಗಳ ಚಾಲಕರು, ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದ್ದು, ಬಸ್ ಚಾಲಕನಿಗೆ ಥಳಿಸಿದ್ದಾರೆ.

ನೆಲ ಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ- ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸರಣಿ ಅಪಘಾತ ಸಂಭವಿಸಿದೆ.

ಹಾಸನದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ KSRTC ಪುಷ್ಪಕ್‌ ಪ್ಲಸ್‌ ಇವಿ ಬಸ್‌ ಓವರ್ ಟೇಕ್ ಮಾಡಲು ಹೋಗಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದು ಕಾರಿನ ಹಿಂಭಾಗ ನಜ್ಜುಗುಜ್ಜಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಈ ವೇಳೆ ಚಾಲಕ ಮತ್ತು ಉಳಿದ ವಾಹನಗಳ ಚಾಲಕರು, ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದ್ದು, ಬಸ್ ಚಾಲಕನಿಗೆ ಥಳಿಸಿದ್ದಾರೆ.

ಸಾಮಾನ್ಯವಾಗಿ ಭಾನುವಾರ ಊರಿನಿಂದ ಬೆಂಗಳೂರಿಗೆ ಬರುವ ವಾಹನಗಳ ಸಂಖ್ಯೆ ಈ ಹೆದ್ದಾರಿಯಲ್ಲಿ ಜಾಸ್ತಿ ಇರುತ್ತದೆ. ಹೀಗಾಗಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇಂದು ಕೂಡಾ ಸರಣಿ ಅಪಘಾತ ನಡೆದಿದೆ.

ಚಾಲಕ ಮತ್ತು ಸವಾರರ ಮಧ್ಯೆ ಜಗಳ ನಡೆದ ಪರಿಣಾಮ ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಕಿಲೋಮೀಟರ್‌ಗಟ್ಟಲ್ಲೇ ವಾಹನಗಳ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಅಮೆರಿಕದ ಪಡೆಗಳು ಇಲ್ಲಿಗೆ ಬಂದರೆ ಆಕ್ರಮಣಕಾರಿ ದಾಳಿಗೆ ನಾವು ಸಿದ್ಧ; ಇರಾನ್ ಸಂಸತ್ತಿನ ಸ್ಪೀಕರ್ ಎಚ್ಚರಿಕೆ!

ಬೆಂಗಳೂರು: ಸ್ನೇಹಿತೆ ಜೊತೆ ಸೆಕ್ಸ್ ಮಾಡುವಂತೆ ಪತ್ನಿಯಿಂದ ಪತಿಗೆ ಒತ್ತಾಯ, ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ!

ಅಸ್ಸಾಂ ಚುನಾವಣೆಗೂ 'ಐದು ಗ್ಯಾರಂಟಿ'ಗಳನ್ನು ಘೋಷಿಸಿದ ಕಾಂಗ್ರೆಸ್!

ಕೇರಳದಲ್ಲಿ ಪ್ರಧಾನಿ ಮೋದಿ ರ್ಯಾಲಿ: ದಿಢೀರ್ ಕಾಣಿಸಿಕೊಂಡ ಹೊಗೆ, ಕೆಲಕಾಲ ಆತಂಕ ಸೃಷ್ಟಿ!

ಮೀನುಗಾರಿಕೆಯಲ್ಲಿ ಯಶಸ್ವಿ! ಕನ್ನಡಿಗನ ಯಶೋಗಾಥೆಗೆ 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ ಪ್ರಶಂಸೆ!

SCROLL FOR NEXT