ಸಂಗ್ರಹ ಚಿತ್ರ 
ರಾಜ್ಯ

BMTC ನೌಕರರಿಗೆ 11 ತಿಂಗಳ ಬದಲು 26 ತಿಂಗಳ ಹಿಂಬಾಕಿ ಪಾವತಿ: ಮುಂದೇನಾಯ್ತು?

ವೇತನ ಪರಿಷ್ಕರಣೆ ಹಿಂಬಾಕಿ ಪಾವತಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಡೇಟಾ ಎಂಟ್ರಿ ದೋಷದಿಂದಾಗಿ ಬಿಎಂಟಿಸಿ ಯಶವಂತಪುರ ಡಿಪೋ-26ರ ಸುಮಾರು 100 ನಿರ್ವಾಹಕರ ಖಾತೆಗೆ ಹೆಚ್ಚುವರಿ ವೇತನ ಜಮೆಯಾಗಿದೆ.

ಬೆಂಗಳೂರು: ಬಿಎಂಟಿಸಿ ನೌಕರರ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ ಬಿಡುಗಡೆ ಆಗಿದ್ದು, ಬಿಎಂಟಿಸಿಯ ಯಶವಂತಪುರ ಘಟಕದಲ್ಲಿ 100 ಸಿಬ್ಬಂದಿಗೆ ಮೊದಲ ಕಂತಿನ ರೂಪದಲ್ಲಿ 11 ತಿಂಗಳ ಹಿಂಬಾಕಿ ಬದಲು ಎಲ್ಲ 26 ತಿಂಗಳ ಹಿಂಬಾಕಿ ಪಾವತಿಯಾಗಿರುವುದಾಗಿ ತಿಳಿದುಬಂದಿದೆ.

ವೇತನ ಪರಿಷ್ಕರಣೆ ಹಿಂಬಾಕಿ ಪಾವತಿ ಪ್ರಕ್ರಿಯೆಯಲ್ಲಿ ಸಂಭವಿಸಿದ ಡೇಟಾ ಎಂಟ್ರಿ ದೋಷದಿಂದಾಗಿ ಬಿಎಂಟಿಸಿ ಯಶವಂತಪುರ ಡಿಪೋ-26ರ ಸುಮಾರು 100 ನಿರ್ವಾಹಕರ ಖಾತೆಗೆ ಹೆಚ್ಚುವರಿ ವೇತನ ಜಮೆಯಾಗಿದೆ.

ಸರ್ಕಾರ ಅನುಮೋದಿಸಿದ ವೇತನ ಪರಿಷ್ಕರಣೆ ಪ್ಯಾಕೇಜ್‌ನಡಿ 26 ತಿಂಗಳ ವೇತನ ಹಿಂಬಾಕಿಯ ಮೊದಲ 11 ತಿಂಗಳ ಕಂತು ಮಾತ್ರ ಪಾವತಿಸಬೇಕಿದ್ದರೂ, ತಪ್ಪಾಗಿ ಸಂಪೂರ್ಣ 26 ತಿಂಗಳ ಮೊತ್ತವೇ ಕೆಲವು ಸಿಬ್ಬಂದಿಗಳ ಖಾತೆಗೆ ಜಮೆಯಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವೇತನ ಪ್ರಕ್ರಿಯೆ ವೇಳೆ ಬಿಲ್ಲಿಂಗ್ ಕ್ಲರ್ಕ್ ತಪ್ಪಾಗಿ ಡೇಟಾ ನಮೂದಿಸಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚುವರಿ ಮೊತ್ತ ಜಮೆಯಾದ ವಿಷಯ ಖಾತೆಗೆ ಹಣ ವರ್ಗಾವಣೆಯಾದ ತಕ್ಷಣವೇ ಗಮನಕ್ಕೆ ಬಂದಿದ್ದು, ಡಿಪೋ ಅಧಿಕಾರಿಗಳು ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಇದೇ ವೇಳೆ 26 ತಿಂಗಳ ಸಂಪೂರ್ಣ ವೇತನ ಹಿಂಬಾಕಿ ನೌಕರರದ್ದೇ ಆಗಿದ್ದು, ರಸೀದಿ ಇಲ್ಲದೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಬಿಎಂಟಿಸಿ ತಳ್ಳಿಹಾಕಿದೆ.

ಹೆಚ್ಚುವರಿ ಹಣ ಪಡೆದ ನಿರ್ವಾಹಕರನ್ನು ಸಂಪರ್ಕಿಸಿ ಹೆಚ್ಚುವರಿ ಮೊತ್ತವನ್ನು ಮರಳಿ ಜಮೆ ಮಾಡುವಂತೆ ಸೂಚಿಸಲಾಗಿದೆ. ಚೌಡೇಶ್ವರಿ ದೇವಸ್ಥಾನ ಬಸ್ ನಿಲ್ದಾಣ ಕಚೇರಿಗೆ ಸಂಬಂಧಿಸಿದ ಅಧಿಕೃತ ಇಲಾಖಾ ಖಾತೆಗಳ ಮೂಲಕವೇ ಹಣ ಮರುಪಾವತಿ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿಯೊಂದು ವ್ಯವಹಾರಕ್ಕೂ ರಸೀದಿ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.

ಎಲ್ಲ ಮರುಪಾವತಿ ಪ್ರಕ್ರಿಯೆಗಳು ಅಧಿಕೃತ ಮೇಲ್ವಿಚಾರಣೆಯಲ್ಲೇ ಸರಿಯಾದ ದಾಖಲೆಗಳೊಂದಿಗೆ ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಈಗಾಗಲೇ 35 ಸಿಬ್ಬಂದಿಗಳಿಂದ ಹೆಚ್ಚುವರಿ ಮೊತ್ತ ವಾಪಸ್ ಪಡೆಯಲಾಗಿದ್ದು, ಸಂಬಂಧಿತ ಡಿಪೋ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ಹಣ ವಸೂಲಿ ಪ್ರಕ್ರಿಯೆಯೂ ಭಾನುವಾರ ಸಂಜೆ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಜಾಮೀನು ಸಾಮಾನ್ಯ ನಿಯಮ; ಜೈಲು ವಿನಾಯಿತಿ ತತ್ವ UAPA ಪ್ರಕರಣಗಳಿಗೂ ಅನ್ವಯ": ಉಗ್ರ ಆರೋಪಿಗೆ ಜಾಮೀನು ನೀಡಿದ 'ಸುಪ್ರೀಂ'

ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ: ದೇವರ ಹೆಸರಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿ.ಡಿ ಸತೀಶನ್‌ ಪ್ರಮಾಣವಚನ ಸ್ವೀಕಾರ..!

KSRTC-BMTC Strike: ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ‘ನೋ ವರ್ಕ್ ನೋ ಪೇ’ ನಿಯಮ ಜಾರಿಗೆ ಸರ್ಕಾರ ಮುಂದು, ಕಠಿಣ ಕ್ರಮದ​​ ಎಚ್ಚರಿಕೆ..!

ಪ್ರಧಾನಿ ಮೋದಿ, ಕೇಂದ್ರ ಸರ್ಕಾರಕ್ಕೆ ದೂರದೃಷ್ಟಿ ಕೊರತೆ: ಹಣದುಬ್ಬರ ಏರಿಕೆ- ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

'Lack Of Knowledge': ಪತ್ರಿಕಾ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಡಚ್ ಪ್ರಧಾನಿ ಹೇಳಿಕೆ ತಿರಸ್ಕರಿಸಿದ ಭಾರತ!

SCROLL FOR NEXT