ಕಾರಿನ ಬಾನೆಟ್ ಮೇಲೆ ನೇತಾಡುತ್ತಿದ್ದರೂ 400 ಮೀಟರ್ ಎಳೆದೊಯ್ದ ಆರ್​ಟಿಐ ಕಾರ್ಯಕರ್ತ 
ರಾಜ್ಯ

ಮೈಸೂರು: ಕಾರಿನ ಬಾನೆಟ್ ಮೇಲೆ ನೇತಾಡುತ್ತಿದ್ದರೂ 400 ಮೀಟರ್ ಎಳೆದೊಯ್ದ ಆರ್​ಟಿಐ ಕಾರ್ಯಕರ್ತನ ಬಂಧನ; ಶಾಕಿಂಗ್ Video

ಕುವೆಂಪು ನಗರದಲ್ಲಿ ಧನಂಜಯ ಎಂಬುವವರು ಕಾರಿನ ಬಾನೆಟ್ ಮೇಲೆ ನೇತಾಡುತ್ತಿದ್ದರೂ ಕಾರು ನಿಲ್ಲಿಸದೇ ಚಾಲನೆ ಮಾಡಿದ ಆರೋಪದ ಮೇಲೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು: ಮೈಸೂರಿನಲ್ಲಿ ಹಣಕಾಸು ವಿಚಾರಕ್ಕೆ ಆರಂಭವಾದ ಗಲಾಟೆ ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದ್ದು, ವ್ಯಕ್ತಿಯೊಬ್ಬ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಕುವೆಂಪು ನಗರದಲ್ಲಿ ಧನಂಜಯ ಎಂಬುವವರು ಕಾರಿನ ಬಾನೆಟ್ ಮೇಲೆ ನೇತಾಡುತ್ತಿದ್ದರೂ ಕಾರು ನಿಲ್ಲಿಸದೇ ಚಾಲನೆ ಮಾಡಿದ ಆರೋಪದ ಮೇಲೆ ಆರ್​ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಗಂಗರಾಜು ಅವರು, ಸಬ್ ರಿಜಿಸ್ಟ್ರಾರ್ ಕಚೇರಿ ಬಳಿಯಿಂದ ಕುವೆಂಪುನಗರ ಪೊಲೀಸ್ ಠಾಣೆವರೆಗೆ ಕಾರಿನ ಬಾನೆಟ್ ಮೇಲೆಯೇ ಎಳೆದೊಯ್ದಿದ್ದಾರೆ ಎಂದು ದೂರಿನಲ್ಲಿ ಧನಂಜಯ ಆರೋಪಿಸಿದ್ದಾರೆ.

ಧನಂಜಯ್ ಬಾನೆಟ್‌ಗೆ ಅಂಟಿಕೊಂಡು ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ಸುಮಾರು 400 ಮೀಟರ್‌ಗಳಷ್ಟು ಎಳೆದೊಯ್ದರು. ಇದು ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿತ್ತು.

ಸುಮಾರು 1 ಕಿಮೀವರೆಗೆ ಚಾಲನೆ ಮಾಡಿದ ಬಳಿಕ ಗಂಗರಾಜು ಅವರು ಕೊನೆಗೆ ಕುವೆಂಪು ನಗರ ಪೊಲೀಸ್ ಠಾಣೆ ಮುಂದೆ ಕಾರು ನಿಲ್ಲಿಸಿದ್ದಾರೆ. ಕೊಟ್ಟ ಹಣ ಕೇಳಿದ್ದಕ್ಕೆ ಗಂಗರಾಜು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಧನಂಜಯ್​ ಅವರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂದ ಕುವೆಂಪು ನಗರ ಠಾಣೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗಂಗರಾಜು ಅವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಂಜಾಬ್‌ನಲ್ಲಿ ಪೆಟ್ರೋಲ್ ಪಂಪ್‌ಗಳು ಖಾಲಿ ಖಾಲಿ: ಇಂಧನ ಪೂರೈಕೆ ಹೆಚ್ಚಿಸಲು ಡೀಲರ್‌ಗಳ ಆಗ್ರಹ; ರಾಜ್ಯಕ್ಕೂ ಕಾದಿದೆಯಾ ಡ್ರೈ ಡೇ?

'Cockroach is Back': ನಿರ್ಬಂಧ ಬೆನ್ನಲ್ಲೇ ಮತ್ತೊಂದು x ಅಕೌಂಟ್ ಆರಂಭ! Insta ಸ್ಥಗಿತಕ್ಕೆ ಪ್ರಯತ್ನ- ದೀಪ್ಕೆ ಆರೋಪ

ಸರಯು ನದಿಯಲ್ಲಿ ಅತ್ತೆ ಅಂತ್ಯಕ್ರಿಯೆ ವೇಳೆ ವ್ಯಕ್ತಿಯ ಎಳೆದೊಯ್ದ ಮೊಸಳೆ, ದೇಹ ಛಿದ್ರ, ಸ್ಥಳೀಯರ ಆಕ್ರೋಶ Video

ರಾಜಕೀಯ ಪಕ್ಷ ಬದಲಾವಣೆ ಕುರಿತ ಟೀಕೆ ‘ಮಾನಹಾನಿಕರವಲ್ಲ’: Raghav Chadhaಗೆ ದೆಹಲಿ ಹೈಕೋರ್ಟ್!

ಸೌತ್ ನಲ್ಲಿ KVN ಹೊಸ ಕ್ರಾಂತಿ! ಚಿರಂಜೀವಿಯ 158ನೇ ಸಿನಿಮಾ ನಿರ್ಮಾಣ, ಕ್ಲ್ಯಾಪ್ ಮಾಡಿದ DCM ಪವನ್ ಕಲ್ಯಾಣ್!

SCROLL FOR NEXT