ಉಪ್ಪು ಸೇವನೆ (ಸಂಗ್ರಹ ಚಿತ್ರ) 
ಜೀವನಶೈಲಿ

ಭಾರತೀಯರು ಅವಶ್ಯಕ್ಕಿಂತ ಹೆಚ್ಚು ಪ್ರಮಾಣದ ಉಪ್ಪು ಸೇವಿಸುತ್ತಾರೆ: ವರದಿ

ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉಪ್ಪು ಸೇವೆನೆ ಮಾಡುತ್ತಾರೆ ಮತ್ತು ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚು ಎಂದು ವರದಿಯೊಂದು ಹೇಳಿದೆ.

ನವದೆಹಲಿ: ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಉಪ್ಪು ಸೇವೆನೆ ಮಾಡುತ್ತಾರೆ ಮತ್ತು ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಸಮಸ್ಯೆ ಹೆಚ್ಚು ಎಂದು ವರದಿಯೊಂದು ಹೇಳಿದೆ.

ಆಸ್ಟ್ರೇಲಿಯಾ ಮೂಲದ ಜಾರ್ಜ್ ಇನ್ಸ್ ಟಿಟ್ಯೂಟ್ ಆಫ್ ಗ್ಲೋಬಲ್ ಹೆಲ್ತ್ ಸಂಸ್ಥೆ ರಕ್ತದೊತ್ತಡ ಕುರಿತಂತೆ ಸಂಶೋಧನೆ ನಡೆಸಿದ್ದು, ವರದಿಯಲ್ಲಿ ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಉಪ್ಪು ಸೇವನೆ ಮಾಡುತ್ತಾರೆ. ಹೀಗಾಗಿ  ಅವರಲ್ಲಿ ರಕ್ತದೊತ್ತಡ ಸಮಸ್ಯೆಗಳು ಹೆಚ್ಚು ಎಂದು ಹೇಳಿದೆ.

ಜಾರ್ಜ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ಪ್ರಕಾರ ಭಾರತೀಯರ ಅಗತ್ಯ ಪ್ರಮಾಣಕ್ಕಿಂತ ಶೇ.119ರಷ್ಟು ಹೆಚ್ಚು ಉಪ್ಪನ್ನು ಸೇವಿಸುತ್ತಾರೆ. ಇದರಿಂದಲೇ ಅವರಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಸಾಮಾನ್ಯ  ಎನ್ನುವಂತಾಗಿದೆ. ಕೇವಲ ಬಿಪಿ ಮಾತ್ರವಲ್ಲದೇ ಹೃದಯ ಸಂಬಂಧಿ ಸಮಸ್ಯೆಗಳಿಗೂ ಕಾರಣವಾಗುತ್ತದೆ. 2010-2013ರ ಅವಧಿಯೊಳಗೆ ಸತ್ತವರ ಪೈಕಿ ಶೇ.23ರಷ್ಟು ಮಂದಿ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ  ಸಮಸ್ಯೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಸಂಶೋಧನೆ ಹೇಳಿದೆ. ಕೇವಲ ಇದು ಮಾತ್ರವಲ್ಲದೇ 1986ರಿಂದ ಇತ್ತೀಚೆಗಿನ 2015ರವರೆಗೆ ನಡೆದ ವಿವಿಧ ಆರೋಗ್ಯ ಸಂಶೋಧನಾ ವರದಿಗಳು ಕೂಡ ಇದನ್ನೇ ಹೇಳಿದ್ದು,  ಭಾರತೀಯರು ಅಗತ್ಯ ಪ್ರಮಾಣಕ್ಕಿಂತ ಹೆಚ್ಚು ಉಪ್ಪು ಸೇವಿಸುತ್ತಾರೆ ಎಂದು ಹೇಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಹಾರಾಷ್ಟ್ರ ಮತ್ತು ಗುಜರಾತ್ ನ ನಗರ ಪ್ರದೇಶಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಉಪ್ಪುಸೇವನೆ ಮಾಡಲಾಗುತ್ತಿದ್ದು, ಉಳಿದ ರಾಜ್ಯಗಳ ನಗರ ಪ್ರದೇಶಗಳಲ್ಲಿ ಹೆಚ್ಚು  ಪ್ರಮಾಣದಲ್ಲಿ ಉಪ್ಪು ಸೇವನೆ ಮಾಡಲಾಗುತ್ತಿದೆ. ಭಾರತೀಯರ ಈ ಹೆಚ್ಚು ಉಪ್ಪು ಸೇವನೆ ಹವ್ಯಾಸದಿಂದಾಗಿ ಅವರಲ್ಲಿ ತಲೆತಿರುಗುವಿಕೆ, ತೆಳು ಚರ್ಮ, ಅತಿಯಾಗಿ ಬೆವರುವಿಕೆ, ಎದೆನೋವು, ಭುಜ ಮತ್ತು ಕೈಕಾಲುಗಳಲ್ಲಿ ನೋವು,  ಸ್ತಂಭನ, ವಾಕರಿಕೆ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿಯೊಬ್ಬ ಮನುಷ್ಯ ಪ್ರತಿನಿತ್ಯ 2 ರಿಂದ 5 ಗ್ರಾಂಗಳಷ್ಟು ಮಾತ್ರ ಉಪ್ಪು ಸೇವಿಸಿದರೆ ಸಾಕು ಎಂದು ಹೇಳಿದೆ. ಆದರೆ ಭಾರತೀಯ ಇದಕ್ಕಿಂತಲೂ ಶೇ,119ಪಟ್ಟು ಹೆಚ್ಚು ಪ್ರಮಾಣದಲ್ಲಿ ಅಂದರೆ  42.30 ಗ್ರಾಂಗಳಷ್ಟು ಉಪ್ಪು ಸೇವಿಸುತ್ತಾರೆ. ಇದೇ ಕಾರಣಕ್ಕೆ ಭಾರತೀಯರಲ್ಲಿ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಸಮಸ್ಯೆಗಳು ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಂತೆಯೇ ಭಾರತೀಯರಲ್ಲಿ ಬೇಳೆಕಾಳು, ಹಣ್ಣುಗಳು ಮತ್ತು ತರಕಾರಿಗಳನ್ನು ಕಡಿಮೆ ತಿನ್ನುವ ಹವ್ಯಾಸ ಹೊಂದಿದ್ದಾರೆ, ಸಂಸ್ಕರಿಸಿದ ಮತ್ತು ತ್ವರಿತ ಆಹಾರಗಳ ಬಳಕೆ ಕೂಡ ಕಡಿಮೆಯೇ. ಭಾರತೀಯರ ಡಯಟ್ ಪಟ್ಟಿಯಲ್ಲಿ ಉಪ್ಪು  ಖಂಡಿತವಾಗಿಯೂ ಇರುತ್ತದೆ ಎಂದು ಖ್ಯಾತ ಆಹಾರ ತಜ್ಞ ಮತ್ತು ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಕ್ಲೈರ್ ಜಾನ್ಸನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT