ದೇಶ

ಸಂಸದರಿಗೆ ಸಿಕ್ಕ ಸ್ಪಂದನೆ ಆರದ ಸಿಗರೇಟು

Vishwanath S

ನವದೆಹಲಿ: ಅಂತೂ ಕರ್ನಾಟಕದ ತಂಬಾಕು ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ನೋವಿಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಕ್ಕಿದೆ.

ಬಿಡಿ ಸಿಗರೇಟು ಮಾರಾಟದ ಮೇಲೆ ನಿಷೇಧ ಹೇರಲು ಮುಂದಾಗಿದ್ದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಸದ್ಯದ ಮಟ್ಟಿಗೆ ತಡೆ ಹಿಡಿಯಲು ಮುಂದಾಗಿದೆ. ಕರ್ನಾಟಕದ ಸಂಸದರು ಕೊಟ್ಟ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ತತ್‌ಕ್ಷಣಕ್ಕೆ ಈ ನಿರ್ಧಾರವನ್ನು ತಡೆ ಹಿಡಿಯುವುದಾಗಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಮಂಗಳವಾರವಷ್ಟೇ ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಚಾಮರಾಜನಗರ ಸಂಸದ ಧ್ರುವನಾರಾಯಣ ಸೇರಿದಂತೆ ರಾಜ್ಯದ ಸಂಸದರು ವೆಂಕಯ್ಯ ನಾಯ್ಡು ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರನ್ನು ರಕ್ಷಿಸುವಂತೆ ಮನವಿ ಮಾಡಿದ್ದರು.

SCROLL FOR NEXT