ಗಾಯಕ ಅತೀಫ್ ಅಸ್ಲಂ 
ದೇಶ

ಶಿವಸೇನೆ ಆಕ್ಷೇಪ: ಪಾಕ್ ಗಾಯಕ ಅತೀಫ್‌ ಸಂಗೀತ ಕಾರ್ಯಕ್ರಮ ರದ್ದು

ಶಿವಸೇನೆಯ ತೀವ್ರ ವಿರೋಧದ ನಂತರ ಏಪ್ರಿಲ್ 25ರಂದು ಪುಣೆಯ ಹಡಪ್ಸರ್ನಲ್ಲಿ ನಡೆಯಬೇಕಿದ್ದ ಪಾಕಿಸ್ಥಾನದ ಗಾಯಕ ಅತೀಫ್‌ ಅಸ್ಲಂ...

ಪುಣೆ: ಶಿವಸೇನೆಯ ತೀವ್ರ ವಿರೋಧದ ನಂತರ ಏಪ್ರಿಲ್ 25ರಂದು ಪುಣೆಯ ಹಡಪ್ಸರ್ನಲ್ಲಿ ನಡೆಯಬೇಕಿದ್ದ ಪಾಕಿಸ್ಥಾನದ ಗಾಯಕ ಅತೀಫ್‌ ಅಸ್ಲಂ ಅವರ ನೇರ ಸಂಗೀತ ಕಾರ್ಯಕ್ರಮವನ್ನು ಅದನ್ನು ರದ್ದು ಮಾಡಲಾಗಿದೆ.

ನಮ್ಮ ರಾಷ್ಟ್ರಕ್ಕೆ ಮೊದಲು ಮಹತ್ವ ಕೋಡಬೇಕು ಎಂದು ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾ ಸಾಹೇಬ್‌ ಠಾಕ್ರೆ ಅವರು ಹೇಳುತ್ತಿದ್ದರು. ಆದ್ದರಿಂದ ಬಹಳ ವಿಚಾರ ಮಾಡಿ ಈ ನೇರ ಸಂಗೀತ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೇವೆ ಎಂದು ಕಾರ್ಯಕ್ರಮದ ಸಂಚಾಲಕರೆನಿಸಿದ ಸಂಜಯ್‌ ಸಾಠೆ ಅವರು ಹೇಳಿದ್ದಾರೆ.

ಸಂಗೀತ ಕಾರ್ಯಕ್ರಮವನ್ನು ಶಿವಸೇನೆಯು ವಿರೋಧಿಸಿದಲ್ಲದೆ ಇದನ್ನು ಪುಣೆಯಲ್ಲಿ ನಡೆಸಬಾರದೆಂದು ಬೆದರಿಕೆ ಒಡ್ಡಿತ್ತು. ಇದಕ್ಕೆ ಸಂಬಂಧಿಸಿದಂತೆ ಶಿವಸೇನೆಯ ನಾಯಕ ಮಹಾದೇವ್‌ ಬಾಬರ್‌ ಅವರು, ಹಿಂದಿನಿಂದಲು ಶಿವಸೇನೆಯು ಪಾಕಿಸ್ತಾನದ ಮತ್ತು ಅಲ್ಲಿಂದ ಬರುವ ಕಲಾವಿದರ ವಿರುದ್ಧವಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿ ನಮ್ಮ ಬೆನ್ನಿಗೆ ಚೂರಿ ಇರಿಯುತ್ತಾರೆ ಅಂತವರ ಕಾರ್ಯಕ್ರಮವನ್ನು ಹೇಗೆ ಬೆಂಬಲಿಸಬೇಕು ಎಂದಿದ್ದಾರೆ.

ಇದುವರೆಗೆ ಈ ಕಾರ್ಯಕ್ರಮದ ಒಂದು ಸಾವಿರಕ್ಕಿಂತ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಎಲ್ಲ ಟಿಕೆಟ್‌ಗಳ ದುಡ್ಡನ್ನು ಆಯಾ ಟಿಕೆಟುದಾರರಿಗೆ ಹಿಂದಿರುಗಿಸಲಾಗುವುದು ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT