ಕಾಪ್ ಪಂಚಾಯತ್ (ಸಾಂಕೇತಿಕ ಚಿತ್ರ) 
ದೇಶ

ವರದಕ್ಷಿಣೆ ಪದ್ಧತಿ ನಿರ್ಮೂಲನೆ, ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಮಾಡರ್ನ್ ಕಾಪ್ ಪಂಚಾಯತ್!

ಸಂಪ್ರದಾಯದ ಹೆಸರಿನಲ್ಲಿ ಅಮಾನವೀಯ ಆದೇಶಗಳನ್ನು ನೀಡುವುದಕ್ಕೆ ಕಾಪ್ ಪಂಚಾಯತ್ ಗಳು ಪ್ರಸಿದ್ಧ.

ಚಂಡೀಗಢ: ಸಂಪ್ರದಾಯದ ಹೆಸರಿನಲ್ಲಿ ಅಮಾನವೀಯ ಆದೇಶಗಳನ್ನು ನೀಡುವುದಕ್ಕೆ ಕಾಪ್ ಪಂಚಾಯತ್ ಗಳು ಪ್ರಸಿದ್ಧ. ಆದರೆ ಬದಲಾವಣೆ ಪ್ರಕೃತಿ ನಿಯಮ ಎಂಬ ತತ್ವವನ್ನು ಇಲ್ಲೊಂದು ಕಾಪ್ ಪಂಚಾಯತ್ ಅರ್ಥಮಾಡಿಕೊಂಡಂತಿತನ್ನ ಆದೇಶ ನೀಡುವ ವಿಧಾನದಲ್ಲೂ ಬದಲಾವಣೆ ಮಾಡಿಕೊಂಡಿದೆ. 
ಚಂಡೀಗಢದ ಜಿಂದ್ ನಲ್ಲಿರುವ ಬುರ ಕಾಪ್ ಪಂಚಾಯತ್ ವರದಕ್ಷಿಣೆ ತೆಗೆದುಕೊಳ್ಳುವುದು, ಎರಡಕ್ಕಿಂತ ಮಕ್ಕಳನ್ನು ಹೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ವಿವಾಹ ಸಮಾರಂಭದಲ್ಲಿ ವಧುವಿನ ಕುಟುಂಬದಿಂದ ವರನ ಕುಟುಂಬದವರು 1 ರೂಪಾಯಿ ವರದಕ್ಷಿಣೆ ಪಡೆದುಕೊಳ್ಳಬೇಕು ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವಂತಿಲ್ಲ ಎಂದು ಕಾಪ್ ಪಂಚಾಯತ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.  
ವಿವಾಹಕ್ಕೂ ಮುನ್ನ ನಡೆಯುವ ವರನ ಮೆರವಣಿಗೆ ವೇಳೆ 21 ಕ್ಕಿಂತ ಹೆಚ್ಚು ಜನರಿದ್ದರೆ ವಧುವಿನ ಕುಟುಂಬಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ ಅದ್ದರಿಂದ 21 ಜನಕ್ಕಿಂತ ಹೆಚ್ಚು ಜನರಿರಬಾರದು ಎಂದು ಕಾಪ್ ಪಂಚಾಯತ್ ಆದೇಶ ನೀಡಿದೆ. ಕಾಪ್ ಪಂಚಾಯತ್ ನ ಆದೇಶ ಪಾಲಿಸುವ ದಂಪತಿಗಳಿಗೆ ಸನ್ಮಾನ ಮಾಡುವುದಕ್ಕೂ ಕಾಪ್ ಪಂಚಾಯತ್ ನ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT