ಕಾಪ್ ಪಂಚಾಯತ್ (ಸಾಂಕೇತಿಕ ಚಿತ್ರ) 
ದೇಶ

ವರದಕ್ಷಿಣೆ ಪದ್ಧತಿ ನಿರ್ಮೂಲನೆ, ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಮಾಡರ್ನ್ ಕಾಪ್ ಪಂಚಾಯತ್!

ಸಂಪ್ರದಾಯದ ಹೆಸರಿನಲ್ಲಿ ಅಮಾನವೀಯ ಆದೇಶಗಳನ್ನು ನೀಡುವುದಕ್ಕೆ ಕಾಪ್ ಪಂಚಾಯತ್ ಗಳು ಪ್ರಸಿದ್ಧ.

ಚಂಡೀಗಢ: ಸಂಪ್ರದಾಯದ ಹೆಸರಿನಲ್ಲಿ ಅಮಾನವೀಯ ಆದೇಶಗಳನ್ನು ನೀಡುವುದಕ್ಕೆ ಕಾಪ್ ಪಂಚಾಯತ್ ಗಳು ಪ್ರಸಿದ್ಧ. ಆದರೆ ಬದಲಾವಣೆ ಪ್ರಕೃತಿ ನಿಯಮ ಎಂಬ ತತ್ವವನ್ನು ಇಲ್ಲೊಂದು ಕಾಪ್ ಪಂಚಾಯತ್ ಅರ್ಥಮಾಡಿಕೊಂಡಂತಿತನ್ನ ಆದೇಶ ನೀಡುವ ವಿಧಾನದಲ್ಲೂ ಬದಲಾವಣೆ ಮಾಡಿಕೊಂಡಿದೆ. 
ಚಂಡೀಗಢದ ಜಿಂದ್ ನಲ್ಲಿರುವ ಬುರ ಕಾಪ್ ಪಂಚಾಯತ್ ವರದಕ್ಷಿಣೆ ತೆಗೆದುಕೊಳ್ಳುವುದು, ಎರಡಕ್ಕಿಂತ ಮಕ್ಕಳನ್ನು ಹೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ. ವಿವಾಹ ಸಮಾರಂಭದಲ್ಲಿ ವಧುವಿನ ಕುಟುಂಬದಿಂದ ವರನ ಕುಟುಂಬದವರು 1 ರೂಪಾಯಿ ವರದಕ್ಷಿಣೆ ಪಡೆದುಕೊಳ್ಳಬೇಕು ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವಂತಿಲ್ಲ ಎಂದು ಕಾಪ್ ಪಂಚಾಯತ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.  
ವಿವಾಹಕ್ಕೂ ಮುನ್ನ ನಡೆಯುವ ವರನ ಮೆರವಣಿಗೆ ವೇಳೆ 21 ಕ್ಕಿಂತ ಹೆಚ್ಚು ಜನರಿದ್ದರೆ ವಧುವಿನ ಕುಟುಂಬಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ ಅದ್ದರಿಂದ 21 ಜನಕ್ಕಿಂತ ಹೆಚ್ಚು ಜನರಿರಬಾರದು ಎಂದು ಕಾಪ್ ಪಂಚಾಯತ್ ಆದೇಶ ನೀಡಿದೆ. ಕಾಪ್ ಪಂಚಾಯತ್ ನ ಆದೇಶ ಪಾಲಿಸುವ ದಂಪತಿಗಳಿಗೆ ಸನ್ಮಾನ ಮಾಡುವುದಕ್ಕೂ ಕಾಪ್ ಪಂಚಾಯತ್ ನ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT