ರಾಬರ್ಟ್ ವಾದ್ರಾ 
ದೇಶ

ಕೇಜ್ರಿವಾಲ್‌ ಸಮ-ಬೆಸ ನಿಯಮದಿಂದ ವಿವಿಐಪಿಗಳಿಗೆ ವಿನಾಯ್ತಿ, ಬರೀ 'ಬೂಟಾಟಿಕೆ': ವಾದ್ರಾ

ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಸರ್ಕಾರ ದೆಹಲಿಯಲ್ಲಿ ಜನವರಿ 1ರಿಂದ ಜಾರಿಗೆ ತರಲು ಮುಂದಾಗಿರುವ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ...

ನವದೆಹಲಿ: ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಸರ್ಕಾರ ದೆಹಲಿಯಲ್ಲಿ ಜನವರಿ 1ರಿಂದ ಜಾರಿಗೆ ತರಲು ಮುಂದಾಗಿರುವ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ವಿವಿಐಪಿಗಳಿಗೆ ವಿನಾಯ್ತಿ ನೀಡಿರುವುದನ್ನು ತೀವ್ರವಾಗಿ ಟೀಕಿಸಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅವರು, ಇದೊಂದು ದೊಡ್ಡ 'ಬೂಟಾಟಿಕೆ' ಎಂದಿದ್ದಾರೆ.
ಕೇಜ್ರಿವಾಲ್ ಸರ್ಕಾರದ ಸಮ-ಬೆಸ ಸಂಖ್ಯೆ ನಿಯಮದ ಬಗ್ಗೆ ತಮ್ಮ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿರುವ ವಾದ್ರಾ, ಸಮ ಬೆಸ ಮಾರ್ಗ! ಸಮಾನಾಂತರ ರಿಯಾಯಿತಿ ಪಟ್ಟಿ ಸಂಪೂರ್ಣ ಬೂಟಾಟಿಕೆ. ಕಾನೂನನ್ನು ಜನರ ಹಿತಾಸಕ್ತಿಯಲ್ಲಿ ಅನುಷ್ಠಾನಿಸಬೇಕು; ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕೇ ಹೊರತು ವಿಐಪಿಗಳಾಗುವುದಲ್ಲ ಎಂದು ಟೀಕಿಸಿದ್ದಾರೆ.
15  ದಿನಗಳ ಪ್ರಾಯೋಗಿಕ ಅವಧಿಗೆಂದು ಜನವರಿ 1ರಿಂದ ಜಾರಿಗೆ ಬರುತ್ತಿರುವ ಸಮ ಬೆಸ ಸಂಖ್ಯೆ ವಾಹನ ನಿಯಮದಡಿ ದೆಹಲಿ ಸರ್ಕಾರ ವಿನಾಯಿತಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆ ಪ್ರಕಾರ ಪ್ರಧಾನಿ, ಮುಖ್ಯಮಂತ್ರಿಗಳು, ರಾಷ್ಟ್ರಪತಿ, ವರಿಷ್ಠ ನ್ಯಾಯಮೂರ್ತಿಗಳು ಮುಂತಾದ ಗಣ್ಯಾತಿಗಣ್ಯರಿಗೆ ಈ ಸಾರಿಗೆ ನಿಯಮದಿಂದ ವಿನಾಯ್ತಿ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT