`ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನಕ್ಕೆ ಚಾಲನೆ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (ಕೃಪೆ : ಪಿಟಿಐ) 
ದೇಶ

ಹೆಣ್ಣು ಮಕ್ಕಳ ರಕ್ಷಣೆಗೆ ಭಿಕ್ಷೆ ಬೇಡಿದ ಪ್ರಧಾನಿ!

ಹೆಣ್ಣು ಮಕ್ಕಳ ಜೀವವನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಿ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿಯಾಗಿ ನಾನು ನಿಮ್ಮ ಮುಂದೆ ...

ನವದೆಹಲಿ: ಹೆಣ್ಣು ಮಕ್ಕಳ ಜೀವವನ್ನು ರಕ್ಷಿಸುವ ಕಾರ್ಯವನ್ನು ಕೈಗೊಳ್ಳಿ. ಈ ನಿಟ್ಟಿನಲ್ಲಿ ಭಾರತದ ಪ್ರಧಾನಿಯಾಗಿ ನಾನು ನಿಮ್ಮ ಮುಂದೆ  ಭಿಕ್ಷೆ ಬೇಡುತ್ತಿದ್ದೇನೆ.
ಇದು ಹರ್ಯಾಣ ದ ಪಾಣಿಪತ್‍ನಲ್ಲಿ `ಬೇಟಿ ಪಢಾವೋ; ಬೇಟಿ ಬಚಾವೋ' ಆಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಡಿದ ಮಾತು.
ಹೆಣ್ಣು ಭ್ರೂಣ ಹತ್ಯೆ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು.
ನಾವೀಗ 21ನೇ ಶತಮಾನದಲ್ಲಿದ್ದೇವೆ ಎಂದು ಹೇಳಲೇ ನಾಚಿಕೆಯಾಗುತ್ತದೆ. ಹೆಣ್ಣು ಶಿಶುವನ್ನು ಭ್ರೂಣದಲ್ಲೇ ಕೊಲ್ಲುವ ಮೂಲಕ 18ನೇ ಶತಮಾನದಲ್ಲಿರುವಂತೆ
ಕಾಣುತ್ತಿದ್ದೇವೆ. ನೆನಪಿರಲಿ ಹೆಣ್ಣು ಮಕ್ಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಪ್ರತಿಭಾನ್ವಿತರು. ನಿಮಗೆ ಸಾಕ್ಷಿ ಬೇಕಿದ್ದರೆ, ಅವರ ಪರೀಕ್ಷೆಯ ಫಲಿತಾಂಶವನ್ನೇ ಗಮನಿಸಿ.
ಜನ ತಮ್ಮ ಸೊಸೆ ಹೆಚ್ಚು ಓದಿರಬೇಕು ಎಂದು ಬಯಸುತ್ತಾರೆ. ಆದರೆ, ತಮ್ಮ ಮಗಳನ್ನೇಕೆ ಓದಿಸುವುದಿಲ್ಲ ಎಂದೂ ಪ್ರಶ್ನಿಸಿದರು.
ಹರಿಯಾಣದ ಸಮೀಪದಲ್ಲಿ ಕೊಳವೆ ಬಾವಿಗೆ ಪ್ರಿನ್ಸ್ ಎಂಬ ಬಾಲಕ ಬಿದ್ದಾಗ ಟಿವಿ ಮುಂದೆ ಕುಳಿತು ಕೋಟ್ಯಂತರ ಮಂದಿ ಪ್ರಾರ್ಥನೆ ಮಾಡುತ್ತೀರಿ. ಆದರೆ, ಪ್ರತಿದಿನ
ಸಾವಿರಾರು ಹೆಣ್ಣು ಭ್ರೂಣ ಹತ್ಯೆಯಾಗುತ್ತಿದೆ. ಈ ಬಗ್ಗೆ ಯಾರಾದರೂ  ಯೋಚಿಸಿದ್ದೀರಾ ಎಂದು ಕೇಳಿದರು.


ಹೆಣ್ಣುಮಕ್ಕಳಿಗೆ `ಸುಕನ್ಯಾ ಸಮೃದ್ಧಿ '

ಆಂದೋಲನದ ಉತ್ತೇಜನಕ್ಕಾಗಿ ಪ್ರಧಾನಿ ಮೋದಿ ಅವರು ಸಣ್ಣ ಹೂಡಿಕೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದಕ್ಕೆ ಶೇ. 9.1 ಬಡ್ಡಿ ನೀಡುವುದರ ಜತೆಗೆ ತೆರಿಗೆ ವಿನಾಯಿತಿಯನ್ನು ಪಡೆಯುವ ಸೌಲಭ್ಯ ನೀಡಲಾಗಿದೆ. ಇದಕ್ಕೆ `ಸುಕನ್ಯಾ ಸಮೃದ್ಧಿ ಖಾತೆ' ಎಂದು ಹೆಸರಿಡಲಾಗಿದೆ. ಹೆಣ್ಣು ಮಗು ಹುಟ್ಟಿದಾಗಿನಿಂದ 10 ವರ್ಷವಾಗುವುದರೊಳಗೆ ಯಾವಾಗ ಬೇಕಾದರೂ ಹಣವನ್ನೂ ಠೇವಣಿ ಇಡಬಹುದಾಗಿದೆ. ರು. 1000-ರು. 1.5 ಲಕ್ಷ ವರೆಗೆ ಠೇವಣಿ ಇಡಬಹುದು.

  •  ಯಾವುದೇ ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬೇಕಾದರೂ ಖಾತೆ ತೆರೆಯಬಹುದು.
  •  ಕುಟುಂಬದ ಉಳಿತಾಯದಲ್ಲಿ ಗಂಡು ಮಗುವಿನಂತೆ ಹೆಣ್ಣು ಮಗುವಿಗೂ ಸಮಪಾಲು ಸಿಗಬೇಕೆಂಬ ನಿಟ್ಟಿನಲ್ಲಿ ಈ ಯೋಜನೆ  ಜಾರಿ.
  • ಈ ಹೆಣ್ಣು ಮಗುವಿಗೆ 21 ವರ್ಷ ಆಗುವವರೆಗೆ ಹಣವನ್ನು ಪಡೆಯಲು ಸಾಧ್ಯವಿಲ್ಲ. ಇಲ್ಲವೇ ಆಕೆಗೆ 18 ವರ್ಷ ತುಂಬಿದ ಬಳಿಕ ವಿವಾಹ ಕಾರಣಕ್ಕೆ ಠೇವಣಿ ಹಿಂಪಡೆಯಬಹುದು.
  •  ಆಕೆಯ ಉನ್ನತ ಶಿಕ್ಷಣದ ಸಲುವಾಗಿ ಬಳಸುವ ಸಂದರ್ಭ ಬಂದರೆ, ಈ ಠೇವಣಿಯಲ್ಲಿ ಶೇ. 50ರಷ್ಟನ್ನು ಮಾತ್ರ ಪಡೆಯಬಹುದು.
  •  18 ವರ್ಷಕ್ಕಿಂತ ಮೊದಲು ಹೆಣ್ಣು ಮಗುವಿನ ವಿವಾಹ ಮಾಡುವುದನ್ನು ತಡೆಯವುದೂ ಇದರ ಹಿಂದಿನ ಉದ್ದೇಶ.
ಮಾಧುರಿಗೆ ಶ್ಲಾಘನೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT