ಸಂಗ್ರಹ ಚಿತ್ರ 
ದೇಶ

ಇನ್ನು ಮುಂದೆ ಎಲ್ಲೆಂದರಲ್ಲಿ ಕಾಂಡೋಮ್, ನ್ಯಾಪ್ಕಿನ್ ಎಸೆಯುವಂತಿಲ್ಲ!

ಇನ್ನು ಮುಂದೆ ನಾಗರಿಕರು ಎಲ್ಲೆಂದರಲ್ಲಿ ನ್ಯಾಪ್ಕಿನ್, ಕಾಂಡೋಮ್ ಮತ್ತು ಟ್ಯಾಂಪರ್ಸ್ ಗಳನ್ನು ಎಸೆಯುವಂತಿಲ್ಲ. ಏಕೆಂದರೆ ತ್ಯಾಜ್ಯ ವಿಲೇವಾರಿಯಲ್ಲಿ...

ನವದೆಹಲಿ: ಇನ್ನು ಮುಂದೆ ನಾಗರಿಕರು ಎಲ್ಲೆಂದರಲ್ಲಿ ನ್ಯಾಪ್ಕಿನ್, ಕಾಂಡೋಮ್ ಮತ್ತು ಟ್ಯಾಂಪರ್ಸ್ ಗಳನ್ನು ಎಸೆಯುವಂತಿಲ್ಲ. ಏಕೆಂದರೆ ತ್ಯಾಜ್ಯ ವಿಲೇವಾರಿಯಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದ್ದು, ಇದರಲ್ಲಿ 'ಸ್ಯಾನಿಟರಿ ವೇಸ್ಟ್' ಬಗ್ಗೆ ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ.

ಹೊಸ ನಿಯಮದಲ್ಲಿ ಡೈಪರ್ಸ್, ನ್ಯಾಪ್ಕಿನ್ಸ್, ಟ್ಯಾಂಪರ್ಸ್, ಸ್ಯಾನಿಟರಿ ಟವೆಲ್ಸ್ ಮತ್ತು ಕಾಂಡೋಮ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಬಗ್ಗೆ ವಿವರಿಸಲಾಗಿದೆ. 'ತ್ಯಾಜ್ಯ ಉತ್ಪಾದಕರ ಕರ್ತವ್ಯಗಳು' ಎಂಬ ಸೆಕ್ಷನ್ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿಲಾಗಿದೆ.

ನಾಗರಿಕರು 'ಸ್ಯಾನಿಟರಿ ವೇಸ್ಟ್‌ಗಳನ್ನು ಬಳಸಿದ ಕೂಡಲೇ ದಿನಪತ್ರಿಕೆ ಅಥವಾ ಇತರೆ ಜೈವಿಕವಾಗಿ ಕರಗುವಂಥ ಉತ್ಪನ್ನಗಳಲ್ಲಿ ಸುತ್ತಿ, ಒಣ ತ್ಯಾಜ್ಯಗಳನ್ನು ಇರಿಸುವಂತಹ ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಹಾಕಬೇಕು' ಎಂದು ಹೊಸ ನಿಯಮದಲ್ಲಿ ವಿವರಿಸಲಾಗಿದೆ.

ಒಣ ತ್ಯಾಜ್ಯಗಳನ್ನು ರಸ್ತೆ, ಖಾಲಿ ಜಾಗ, ಚರಂಡಿ ಅಥವಾ ನೀರು ಇರುವ ಜಾಗದಲ್ಲಿ ಎಸೆಯುವಂತಿಲ್ಲ ಎಂದು ಒಣ ತ್ಯಾಜ್ಯ ವಿಲೇವಾರಿ ಕಾನೂನಿನಲ್ಲಿ ಹೇಳಲಾಗಿದೆ.
ಎಲ್ಲಾ ರೀತಿಯ ಕಸ ವಿಲೇವಾರಿಯ ಜವಾಬ್ದಾರಿಯನ್ನೂ ನಗರಾಡಳಿತಕ್ಕೆ ವಹಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಕಾರ್ಯಕ್ರಮಗಳನ್ನು ಹಾಗೂ ನಿಯಮಗಳನ್ನು ಮಾಡಿಕೊಳ್ಳಬಹುದಾಗಿದೆ. ಆದರೆ, ಇನ್ನು ಮುಂದೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಮನ ಬಂದಂತೆ ಎಸೆಯುವಂತಹ ಸ್ಯಾನಿಟರಿ ಕಡಿವಾಣ ಹಾಕಲೇಬೇಕು ಎಂದು ಹೊಸ ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT