ನಾಥೂರಾಮ್ ಗೋಡ್ಸೆ 
ದೇಶ

ಗೋಡ್ಸೆ ನೇಣಿಗೇರಿದ ದಿನ ಬಲಿದಾನ ದಿನವಾಗಿ ಆಚರಿಸಲು ತೀರ್ಮಾನ

ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ನೇಣಿಗೇರಿಸಿದ ದಿನವನ್ನು ಬಲಿದಾನ ದಿನವಾಗಿ

ನವದೆಹಲಿ: ಮಹಾತ್ಮಾ ಗಾಂಧಿಯವರನ್ನು ಗುಂಡಿಕ್ಕಿ ಹತ್ಯೆಗೈದ ನಾಥೂರಾಮ್  ಗೋಡ್ಸೆಯನ್ನು ನೇಣಿಗೇರಿಸಿದ ದಿನವನ್ನು ಬಲಿದಾನ ದಿನವಾಗಿ ಆಚರಿಸಲು ಹಿಂದೂ ಮಹಾಸಭಾ ತೀರ್ಮಾನಿಸಿರುವುದಾಗಿ ಬಲ್ಲಮೂಲಗಳು ವರದಿ ಮಾಡಿವೆ. ಹಿಂದೂ ಮಹಾಸಭಾ ಕಳೆದ ವರ್ಷ ಗೋಡ್ಸೆಯ ಹೆಸರಲ್ಲಿ ದೇವಸ್ಥಾನ ನಿರ್ಮಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಈಗ ಗೋಡ್ಸೆ ನೇಣಿಗೇರಿದ ದಿನವನ್ನು ಬಲಿದಾನ ದಿನವಾಗಿ ಆಚರಿಸಲು ಸಭೆ ಚಿಂತನೆ ನಡೆಸಿದೆ.
ಗೋಡ್ಸೆಯನ್ನು ನೇಣಿಗೇರಿಸಿದ ದಿನವಾದ ನವೆಂಬರ್ 15 ರಂದು ದೇಶಾದ್ಯಂತ 120 ಕೇಂದ್ರಗಳಲ್ಲಿ ಬಲಿದಾನ ದಿನವಾಗಿ ಆಚರಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಚಂದ್ರ ಪ್ರಕಾಶ್ ಕೌಶಿಕ್ ಆದೇಶಿಸಿದ್ದಾರೆ. 1949 ನವೆಂಬರ್ 15ರಂದು ಅಂಬಾಲಾ ಜೈಲಿನಲ್ಲಿ ಗೋಡ್ಸೆಯನ್ನು ನೇಣಿಗೇರಿಸಿದ್ದರು.
ರಾಜಸ್ಥಾನ, ಮಹಾರಾಷ್ಟ್ರ ಮೊದಲಾದೆಡೆ  ಬಲಿದಾನ ದಿನವನ್ನಾಚರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬಂದಿದ್ದಾರೆ ಎಂದು ಕೌಶಿಕ್ ಹೇಳಿದ್ದಾರೆ. ಗಾಂಧಿಗಿಂತಲೂ ಹೆಚ್ಚು ದೇಶಪ್ರೇಮವಿದ್ದ ವ್ಯಕ್ತಿಯಾಗಿದ್ದರು ಗೋಡ್ಸೆ. ದೇಶದಲ್ಲಿನ ಬಹುತೇಕ ಮಂದಿಗೂ ಇದು ಗೊತ್ತಿದೆ. ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದು ಯಾಕೆ ಎಂದು ಜನರು ಚಿಂತಿಸಲು ಈ ಬಲಿದಾನವ ಪ್ರೇರೇಪಿಸುತ್ತದೆ. ಪ್ರಸ್ತುತ ದಿನಾಚರಣೆ ಉತ್ತರ ಪ್ರದೇಶದಲ್ಲಿ ಆರಂಭವಾಗಲಿದೆ. ಈ ದಿನ ಪ್ರಯುಕ್ತ ಗೋಡ್ಸೆಯ ತ್ಯಾಗಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೌಶಿಕ್ ಹೇಳಿದ್ದಾರೆ.
ಅದೇ ವೇಳೆ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಹಾಗೂ ನಾಥೂರಾಮ್ ಗೋಡ್ಸೆಯ ಹಿರಿಯ ಸಹೋದರನೂ ಆದ ಗೋಪಾಲ್ ಗೋಡ್ಸೆ ಬರೆದ ಗಾಂಧಿವಧ್ ಕ್ಯೂಂ (ನಾನ್ಯಾಕೆ ಗಾಂಧಿಯನ್ನು ಕೊಂದೆ? ) ಎಂಬ ಕೃತಿಯನ್ನು ಜನರಿಗೆ ವಿತರಣೆ ಮಾಡಲು ಹಿಂದೂ ಸಭಾ ಯೋಚಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

$34.2 Trillion GDP: 2038ರ ವೇಳೆಗೆ ಅಮೆರಿಕ ಹಿಂದಿಕ್ಕಿ, ಭಾರತ 2ನೇ ಅತಿದೊಡ್ಡ ಆರ್ಥಿಕತೆ- EY ವರದಿ

ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಮತ್ತೆ ಆರು ದಿನ ED ವಶಕ್ಕೆ

Ganesh Chaturthi ಎಫೆಕ್ಟ್; ಚಿನ್ನದ ಬೆಲೆ ಮತ್ತೆ ಏರಿಕೆ; ಇಂದಿನ ದರ ಪಟ್ಟಿ ಇಂತಿದೆ!

ಕೊಹಿಮಾ, ವಿಶಾಖಪಟ್ಟಣಂ, ಭುವನೇಶ್ವರ ಮಹಿಳೆಯರಿಗೆ ಸುರಕ್ಷಿತ ನಗರ; ಪಾಟ್ನಾ, ಜೈಪುರ ಅಸುರಕ್ಷಿತ!

SCROLL FOR NEXT