ದೇಶ

ಅತ್ಯಾಚಾರ ಹತ್ತಿಕ್ಕುವಲ್ಲಿ ಭಾರತ ಸರ್ಕಾರ ವಿಫಲ:ಲ್ಯಾನ್ಸೆಟ್ ಪತ್ರಿಕೆ ಕಿಡಿ

Rashmi Kasaragodu
ನವದೆಹಲಿ: ಭಾರತಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಕೃತ್ಯಗಳು ಹಾಗೂ ಮಹಿಳೆಯರ ಮೇಲಿನ ಹಿಂಸೆಯನ್ನು ತಡೆಯಲು ಕೇಂದ್ರ ಸರ್ಕಾರವಿಫಲವಾಗಿದೆ ಎಂದು ಬ್ರಿಟನ್‍ನ ಗೌರವಾನ್ವಿತ ವೈದ್ಯಕೀಯ ಪತ್ರಿಕೆಯೊಂದು ದೂರಿದೆ. ಇದು ಕೇಂದ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿರುವ ಇನ್ನೊಂದು ಮುಖಭಂಗ. ವೈದ್ಯಕೀಯ ಪತ್ರಿಕೆ `ಲ್ಯಾನ್ಸೆಟ್'ನ ಮುಖ್ಯ ಸಂಪಾದಕ ರಿಚರ್ಡ್ ಹೋರ್ಟನ್, ಸುರಕ್ಷತೆಯ ವಿಚಾರದಿಂದ ಆರೋಗ್ಯದ ವಿಚಾರದವರೆಗೆ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಚಾರ ಪ್ರಸ್ತಾಪಿಸಿದ್ದು, ಮಹಿಳೆಯರ ಮತ್ತು ಯುವತಿಯ ಆರೋಗ್ಯವು ಅವರ ಮೇಲೆ ನಡೆಯುವ ಹಿಂಸೆಯನ್ನು   ನೇರವಾಗಿ ಆಧರಿಸಿದೆ ಎಂದಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಈ ಹಿಂಸಾಚಾರದ ಕುರಿತು ವಿಶೇಷ ಆವೃತ್ತಿಯೊಂದನ್ನು ಹೊರ ತರುವುದಾಗಿ ನುಡಿದಿದ್ದಾರೆ. ಅತ್ಯಾಚಾರ ಹಿಂಸೆಗಳು ವಾಸ್ತವವಾಗಿ ದೊಡ್ಡ ಮೊತ್ತದಲ್ಲಿವೆ. ಆದರೆ ಅದರ ಕುರಿತು ಮಾತನಾಡುವುದು ನಿಷಿದ್ಧ. ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿ ಈ ವಿಚಾರ ಮುಖ್ಯ. ಭಾರತದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳು ಸರ್ಕಾರಕ್ಕೆ ಎಚ್ಚರಿಕೆಯ ಪಾಠ. ಅದು ಮಹಿಳೆಯರ ಸುರಕ್ಷೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದಿದ್ದಾರೆ ಹೋರ್ಟನ್. ಕಳೆದ ವರ್ಷ ಮಹಿಳೆಯರ ಮೇಲಿನ ಹಿಂಸೆ ಬಗ್ಗೆ ವಿಶೇಷ ಸಂಚಿಕೆಯನ್ನು ಲ್ಯಾನ್ಸೆಟ್ ತಂದಿತ್ತು. ಅದರಲ್ಲಿ ಭಾರತವನ್ನು ಪ್ರಸ್ತಾವಿಸಿದ್ದು, ಈಗ ಮತ್ತೆ ಅದನ್ನು ಫಾಲೋಅಪ್  ಮಾಡುವ ಅಗತ್ಯವನ್ನು ಒತ್ತಿಹೇಳಿದ್ದಾರೆ.ಮಹಿಳೆಯರ ಮೇಲಿನ ಹಿಂಸೆ ತಡೆಯುವಲ್ಲಿ ಸಾಧನೆ ಮಾಡಿರುವ ಭಾರತದ ಕಾರ್ಯಕ್ರಮವೊಂದನ್ನು ಈ ಸಂಚಿಕೆ ಉಲ್ಲೇಖಿಸಿತ್ತು. ಮುಂಬೈ ಮತ್ತು ಗೋರಖ್‍ಪುರದಲ್ಲಿ ಗುಂಪು ತರಬೇತಿ, ಸಾಮಾಜಿಕಸಂವಹನ ಕಾರ್ಯಕ್ರಮಗಳ ಮೂಲಕ ಪುರುಷರ ಆಕ್ರಮಣಕಾರಿ ಪ್ರವೃತ್ತಿಯನ್ನು ಹತ್ತಿಕ್ಕುವಲ್ಲಿ ಮಹತ್ವದ ಯಶಸ್ಸು ಕಂಡ `ಯಾರೀದೋಸ್ತಿ' ಎಂಬ ಕಾರ್ಯಕ್ರಮವನ್ನು ಸಂಚಿಕೆ ಶ್ಲಾಘಿಸಿತ್ತು.
SCROLL FOR NEXT