(ಸಂಗ್ರಹ ಚಿತ್ರ) 
ದೇಶ

ದಾದ್ರಿ ದಾಳಿಗೆ ಅಖ್ಲಾಕ್ ಮಗನಿಗಿದ್ದ ಹಿಂದೂ ಹುಡುಗಿಯೊಂದಿಗಿನ ಪ್ರೇಮವೇ ಕಾರಣ: ಎಬಿವಿಪಿ

ಗೋಮಾಂಸ ಸೇವನೆ ಶಂಕೆಯಿಂದಾಗಿ ಉತ್ತರ ಪ್ರದೇಶದ ದಾದ್ರಿಯ ಬಿಸಡಾಗಾಂವ್ ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಹಾಗೂ ಮನೆಗೆ ನುಗ್ಗಿ ದಾಳಿ ಮಾಡಿದ ಪ್ರಕರಣಕ್ಕೆ ಪ್ರಮುಖ ಕಾರಣ ಹತ್ಯೆಯಾದ ವ್ಯಕ್ತಿ ಅಖ್ಲಾಕ್ ಮಗನಿಗಿದ್ದ ಪ್ರೇಮ ವ್ಯವಹಾರವೇ ಕಾರಣ ಎಂದು ಅಖಿಲ...

ಲಖನೌ: ಗೋಮಾಂಸ ಸೇವನೆ ಶಂಕೆಯಿಂದಾಗಿ ಉತ್ತರ ಪ್ರದೇಶದ ದಾದ್ರಿಯ ಬಿಸಡಾಗಾಂವ್ ನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದು ಹಾಗೂ ಮನೆಗೆ ನುಗ್ಗಿ ದಾಳಿ ಮಾಡಿದ ಪ್ರಕರಣಕ್ಕೆ ಪ್ರಮುಖ ಕಾರಣ ಹತ್ಯೆಯಾದ ವ್ಯಕ್ತಿ ಅಖ್ಲಾಕ್ ಮಗನಿಗಿದ್ದ ಪ್ರೇಮ ವ್ಯವಹಾರವೇ ಕಾರಣ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸೋಮವಾರ ಹೇಳಿಕೊಂಡಿದೆ.

ಈ ಕುರಿತಂತೆ ಖಾಸಗಿ ಪತ್ರಿಕೆಯೊಂದರಲ್ಲಿ ಮಾತನಾಡಿರುವ ಎಬಿವಿಪಿಯ ಅವಧ್ ವಲಯದ ಸಂಘಟನಾ ಕಾರ್ಯದರ್ಶಿ ಸತ್ಯ ಭಾನ್ ಅವರು, ದಾದ್ರಿಯ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣವು ಗೋಮಾಂಸ ಸೇವನೆ ವದಂತಿಗೆ ಸಂಬಂಧಿಸಿದ್ದಲ್ಲ. ದಾದ್ರಿ ಪ್ರಕರಣಕ್ಕೆ ಅಖ್ಲಾಕ್ ನ ಇಬ್ಬರು ಮಕ್ಕಳಲ್ಲಿ ಒಬ್ಬನಿಗೆ ಹಿಂದೂ ಯುವತಿಯೊಂದಿಗಿದ್ದ ಪ್ರೇಮ ವ್ಯವಹಾರವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೆ ಖಾಸಗಿ ಪತ್ರಿಕೆಯ ವರದಿಯಲ್ಲಿ ಅಖ್ಲಾಕ್ ಮಕ್ಕಳಲ್ಲಿ ಒಬ್ಬನಿಗೆ ಸ್ಧಳೀಯ ಹಿಂದೂ ಯುವತಿಯೊಂದಿಗೆ ಪ್ರೇಮವಿರುವ ಕುರಿತಂತೆ ಉತ್ತರ ಪ್ರದೇಶದ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿ ಅವರ ಕುಟುಂಬದ ಮೇಲೆಯೂ ದಾಳಿ ನಡೆದಿದೆ ಎಂದು ಸತ್ಯಭಾನ್ ಹೇಳಿರುವುದಾಗಿ ಹೇಳಿಕೊಂಡಿದೆ.

ದಾದ್ರಿ ಪ್ರಕರಣವನ್ನು ವಿವಿಧ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದಾಗಿ ಪ್ರಕರಣವನ್ನು ಗೋಮಾಂಸ ಸೇವನೆ ಶಂಕೆಗೆ ಬದಲಾಯಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಕ್ಕಾಗಿ ಅಜಂಖಾನ್ ಅವರು ವಿಶ್ವಸಂಸ್ಥೆಗೆ ಪತ್ರ ಬರೆಯುತ್ತೇನೆಂದು ಹೇಳಿರುವುದು ಭಾರತದ ಘನತೆಗೆ ಧಕ್ಕೆಯುಂಟು ಮಾಡುತ್ತದೆ. ಈ ವಿಷಯವನ್ನು ಸಮಾವೇಶದಲ್ಲಿ ಸ್ಪಷ್ಟಪಡಿಸಲಾಗುತ್ತದೆ.

ದಾದ್ರಿ ಪ್ರಕರಣವು ಇದೀಗ ಓಲೈಕೆ ರಾಜಕಾರಣದ ಒಂದು ಭಾಗವಾಗಿಬಿಟ್ಟಿದೆ. ಸಂತ್ರಸ್ತರು ಒಂದು ನಿರ್ಧಿಷ್ಟ ಸಮುದಾಯಕ್ಕೆ ಸೇರಿದವರಾದುದರಿಂದ ಉತ್ತರ ಪ್ರದೇಶ ಸರ್ಕಾರ ಅವರಿಗೆ ಬೃಹತ್ ಮೊತ್ತದ ಪರಿಹಾರವನ್ನು ಘೋಷಿಸಿದೆ.

ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ರಾಜ್ಯ ಮಟ್ಟದ ಸಮಾವೇಶವೊಂದಕ್ಕೆ ಸೀತಾಪುರ್ ನಲ್ಲಿ ಸಿದ್ಧತೆ ನಡೆಯುತ್ತಿದೆ. ನವೆಂಬರ್ 1 ರಿಂದ 3ರವರೆಗೆ ಈ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಎಬಿವಿಪಿಯು ದಾದ್ರಿ ಪ್ರಕರಣಕ್ಕೆ ಪ್ರಮುಖ ಕಾರಣ, ಕೋಮು ಸೌಹಾರ್ದತೆ, ಮಹಿಳಾ ರಕ್ಷಣೆ, ಶಿಕ್ಷಣದ ವಾಣಿಜ್ಯೀಕರಣ, ವಿದ್ಯಾರ್ಥಿ ಸಂಘ ಚುನಾವಣೆ, ಭಯೋತ್ಪಾದನೆ ಮತ್ತು ನಿರುದ್ಯೋಗದಂತಹ ವಿವಿಧ ವಿಷಯಗಳನ್ನು ಸಮಾವೇಶದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel