ಸಾಂದರ್ಭಿಕ ಚಿತ್ರ 
ದೇಶ

ತೂಕದ ಸಖಿಯರಿಗೆ ಇಲ್ಲ ಗಗನಕ್ಕೆ ಹಾರುವ ಸದವಕಾಶ!

ಗಗನಸಖಿಗಳೆಲ್ಲ ದುಃಖಿಗಳಾಗಿದ್ದಾರೆ, ಊಟ ತಿಂಡಿ ಬಿಟ್ಟು ಡಯೆಟ್ ಆರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲ...

ನವದೆಹಲಿ: ಗಗನಸಖಿಗಳೆಲ್ಲ ದುಃಖಿಗಳಾಗಿದ್ದಾರೆ, ಊಟ ತಿಂಡಿ ಬಿಟ್ಟು ಡಯೆಟ್ ಆರಂಭಿಸಿದ್ದಾರೆ. ತೂಕ ಇಳಿಸಿಕೊಳ್ಳಲು ಎಲ್ಲ ರೀತಿ ಸರ್ಕಸ್ ನಡೆಸುತ್ತಿದ್ದಾರೆ. ಇವರದ್ದು ಒಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿ ಕದನ!

ಇಷ್ಟೆಲ್ಲಾ ಕಸರತ್ತು ಮಾಡಬೇಕಾದ ಅವಶ್ಯಕತೆಯೇನು ಎಂದು ಕೇಳುತ್ತಿದ್ದೀರಾ? ಇವರು ತೂಕ ಇಳಿಸಿಕೊಳ್ಳದೇ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ.  ಹೌದು. ಏರ್‍ಇಂಡಿಯಾ ಸಂಸ್ಥೆಯು ಸ್ಥೂಲಕಾಯದ ಸಿಬ್ಬಂದಿಗೆ ಗೇಟ್‍ಪಾಸ್ ನೀಡಲು ರೆಡಿಯಾಗಿದೆ. ಗಗನಯಾತ್ರಿಗಳು ಸೇರಿದಂತೆ 125 ಮಂದಿಯನ್ನು ಕೆಲಸದಿಂದ ಕಿತ್ತುಹಾಕಲು ನಿರ್ಧರಿಸಿದೆ.

ಇದಕ್ಕೆ ಕಾರಣ, ಬೊಜ್ಜು/ಸ್ಥೂಲಕಾಯ. ತೆಳ್ಳಗೆ, ಬಳುಕುವ ಬಳ್ಳಿಯಂತೆ ಇರಬೇಕಾದ ಗಗನಸಖಿಯರು ತೂಕ ಹೆಚ್ಚಿಸಿಕೊಂಡು ಧಡೂತಿಗಳಾಗಿ ರುವುದು ಏರ್‍ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಕಳೆದ ವರ್ಷವೇ 600 ಸಿಬ್ಬಂದಿಗೆ ನಿಗದಿತ ಸಮಯದೊಳಗೆ ತೂಕ ಇಳಿಸಿಕೊಂಡು `ಶೇಪ್ ಅಪ್' ಆಗಬೇಕೆಂದು ಸ್ಪಷ್ಟ ಆದೇಶ ಹೊರಡಿಸಿತ್ತು.

ಅದರಂತೆ, ಯಾರು ಈಗ ತೆಳ್ಳಗಾಗಿದ್ದಾರೋ ಅವರನ್ನು ಉಳಿಸಿಕೊಂಡು, ಉಳಿದವರಲ್ಲಿ ಕೆಲವರಿಗೆ ಗ್ರೌಂಡ್ ಡ್ಯೂಟಿ ಕೊಟ್ಟು, ಮತ್ತೆ ಕೆಲವರಿಗೆ ಸ್ವಯಂ ನಿವೃತ್ತಿ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ. ಪ್ರತಿ 3 ತಿಂಗಳಿಗೊಮ್ಮೆ ವೈದ್ಯರು ಸಿಬ್ಬಂದಿಯ ಪರೀಕ್ಷೆ ನಡೆಸಿ, `ಫಿಟ್', `ಟೆಂಪರರಿ ಫಿಟ್' ಮತ್ತು `ಪರ್ಮನೆಂಟ್ ಅನ್‍ಫಿಟ್' ಎಂಬ ಸರ್ಟಿಫಿಕೇಟ್ ನೀಡುತ್ತಾರೆ.

ಜತೆಗೆ, ಅತಿಕಾ ಯ ಹೊಂದಿರುವವರಿಗೆ ಮತ್ತೆ ಪೂರ್ವದ ಸ್ಥಿತಿಗೆ ಬರಲು 3 ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅದೂ ಫೇಲ್ ಆಯಿತೆಂದರೆ, ಕೆಲಸಬಿಟ್ಟು ಮನೆಗೆ ಹೋಗುವುದೊಂದೇ ದಾರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು: ಡಿಎಂಕೆಗೆ SIR ಹೊಡೆತ: ಕರಡು ಮತದಾರರ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್!

ಬೇಡಿಕೆ ಈಡೇರಿದೆ, ನನ್ನ-ಸಿಎಂ ನಡುವೆ ಒಪ್ಪಂದವಾಗಿದೆ; ಹೈಕಮಾಂಡ್ ಅವರ ಪರ ಇರೋದ್ರಿಂದಲೇ ಅವರು ಸಿಎಂ: ಡಿ.ಕೆ ಶಿವಕುಮಾರ್

ಅಮಿತ್ ಶಾ 'ನಾಲಾಯಕ್ ಹೋಮ್ ಮಿನಿಸ್ಟರ್' ಎಂದ ಪ್ರಿಯಾಂಕ್ ಖರ್ಗೆ! ಕ್ಷಮೆಗೆ ಪಟ್ಟು, ಬಿಜೆಪಿ ಪ್ರತಿಭಟನೆ

ಕೋಲಾರದಲ್ಲಿ 'ಸರ್ಕಾರಿ ಜಾಗ ಕಬಳಿಕೆ' ಆರೋಪ: ಸದನದಲ್ಲಿ ಸಚಿವ ಕೃಷ್ಣ ಬೈರೇಗೌಡ ಕೊಟ್ಟ ಸ್ಪಷ್ಟನೆ ಏನು?

ವಿಧಾನಪರಿಷತ್: ವಿಪಕ್ಷಗಳ ಪ್ರತಿಭಟನೆ ನಡುವೆ 'ದ್ವೇಷ ಭಾಷಣ' ಮಸೂದೆಗೆ ಮೇಲ್ಮನೆ ಅಂಗೀಕಾರ!

SCROLL FOR NEXT