ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ಗುರೂಜಿ 
ದೇಶ

ಪುರುಷ ಮತ್ತು ಮಹಿಳೆ, ಇಬ್ಬರಿಗೂ ಶನಿ ಶಿಲೆ ಸ್ಪರ್ಶ ಅವಕಾಶ ಬೇಡ: ರವಿಶಂಕರ್ ಗುರೂಜಿ

ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಾಲಯ ಸಂಬಂಧ ಎದ್ದಿರುವ ವಿವಾದಕ್ಕೆ ನನ್ನ ಬಳಿ ಒಂದು ಪರಿಹಾರವಿದೆ ಎಂದು ಹೇಳಿರುವ ಆರ್ಟ್ ಆಫ್...

ಪುಣೆ: ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಾಲಯ ಸಂಬಂಧ ಎದ್ದಿರುವ ವಿವಾದಕ್ಕೆ ನನ್ನ ಬಳಿ ಒಂದು ಪರಿಹಾರವಿದೆ ಎಂದು ಹೇಳಿರುವ ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ರವಿಶಂಕರ್ ಗುರೂಜಿ, ಪುರುಷರಿಗೂ ಶನಿ ಶಿಲೆ ಸ್ಪರ್ಶ ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ಪುರುಷ ಮತ್ತು ಮಹಿಳೆ, ಇಬ್ಬರಿಗೂ ಶನಿ ಶಿಲೆ ಸ್ಪರ್ಶ ಅವಕಾಶ ನೀಡಬಾರುದು. ದೂರ ನಿಂತು ಇಬ್ಬರು ದರ್ಶನ ಪಡೆಯಲಿ ಎಂದು ಅವರು ಹೇಳಿದ್ದಾರೆ. 
ತಿರುಪತಿ ಶ್ರೀನಿವಾಸ ಮತ್ತು ಕಾಶಿ ವಿಶ್ವನಾಥ ದೇವಸ್ಥಾನಗಳಲ್ಲಿ ಇದೇ ರೀತಿ ಮಾಡಲಾಗುತ್ತಿದೆ. ಪುರುಷ ಮತ್ತು ಮಹಿಳೆಯರು ಇಬ್ಬರೂ ದೂರದಿಂದಲೇ ದರ್ಶನ ಪಡೆಯುತ್ತಾರೆ. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಬಹುದು ಎಂದು ಅವರು ತಿಳಿಸಿದ್ದಾರೆ. 
ದೇವಸ್ಥಾನದ ಆಡಳಿತ ಮಂಡಳಿ ರವಿಶಂಕರ್ ಅವರ ಸಲಹೆಗೆ ಒಪ್ಪಿಗೆ ಸೂಚಿಸಿದೆ. ಆದರೆ ಇದಕ್ಕೆ ಮಹಿಳಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. 
ಶನಿ ಶಿಲೆ ಸ್ಪರ್ಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿ ಎಂದು ಹೋರಾಟ ನಡೆಸುತ್ತಿರುವ ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿ, ಶನಿ ದೇವಾಲಯದ ಪೂಜಾರಿಗಳಾಗಿ ಮಹಿಳೆಯರಿಗೆ ಅವಕಾಶ ನೀಡಿ ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ; ಜು.2 ರಂದು ಪ್ರಧಾನಿ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ

ಗಡಿ ವಿವಾದ ಬಗೆಹರಿಸಲು ಭಾರತದೊಂದಿಗೆ ರಾಜತಾಂತ್ರಿಕ ಮಾತುಕತೆಗೆ ಸಿದ್ಧ- ನೇಪಾಳ ವಿದೇಶಾಂಗ ಸಚಿವ ಖನಾಲ್

ಬಿಜೆಪಿಗೆ ಬೆಂಬಲ ಅಥವಾ ಕಾಂಗ್ರೆಸ್ ಜತೆ ಎನ್‌ಸಿಪಿ(ಎಸ್‌ಪಿ) ವಿಲೀನ ಕುರಿತು ಶರದ್ ಪವಾರ್ ಚರ್ಚೆ; ಸುಪ್ರಿಯಾ ಸುಳೆಗೆ ಮಹತ್ವದ ಹುದ್ದೆ?

ಕನ್ನಡ ಚಿತ್ರರಂಗದ ಉಳಿವಿಗಾಗಿ ‘ಸರ್ಕಾರಿ OTT ಆರಂಭಿಸಿ’: CM ಶಿವಕುಮಾರ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ

ಭಾರತ - ಪಾಕಿಸ್ತಾನದ 100ಕ್ಕೂ ಹೆಚ್ಚು ರಾಜಕಾರಣಿಗಳು, ಮಾಜಿ ರಾಜತಾಂತ್ರಿಕರಿಂದ ಮೋದಿ, ಷರೀಫ್‌ಗೆ ಪತ್ರ; ಇಲ್ಲಿದೆ ಕಾರಣ...