ದೇಶ

ಪ. ಬಂಗಾಳದಲ್ಲಿ ಕೋಮು ವೈಷಮ್ಯಗಳೇನೂ ಇಲ್ಲ: ಮಮತಾ ಬ್ಯಾನರ್ಜಿ

Rashmi Kasaragodu
ಕೊಲ್ಕತ್ತಾ: ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ಕೋಮು ವೈಷಮ್ಯವಿಲ್ಲವೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನೇತಾರೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.  ಕೊಲ್ಕತ್ತಾದಲ್ಲಿ ನಡೆಯುತ್ತಿರುವ ಬಂಗಾಳ ಗ್ಲೋಬಲ್ ಬ್ಯುಸಿನೆಸ್ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವಿವಿಧತೆಯಲ್ಲಿ ಏಕತೆ ಇದೆ ಎಂದಿದ್ದಾರೆ.
ಅದೇ ವೇಳೆ ರಾಜ್ಯದಲ್ಲಿ ಮಾವೋಗಳ ಅಟ್ಟಹಾಸವೂ ಕಡಿಮೆಯಾಗಿದೆ. ಗಿರಿಪ್ರದೇಶಗಳಲ್ಲಿ ವಾಸಿಸುವ ಜನರೂ ಖುಷಿಯಿಂದಿದ್ದಾರೆ, ಇಲ್ಲಿ ಯಾವುದೇ ಸಂಘರ್ಷಗಳಿಲ್ಲ ಎಂದು ಮಮತಾ ಹೇಳಿದ್ದಾರೆ.
ಕಳೆದ ಭಾನುವಾರ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಒಂದು ಲಕ್ಷದಷ್ಟು ಪ್ರತಿಭಟನಾಕಾರರು  ಕಾಲಿಯಾಚಾಕ್‌ನಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಇನ್ನಿತರ ವಾಹನಗಳನ್ನು ನಾಶಗೈದಿದ್ದರು. ಈ ಗಲಭೆ ನಡೆದು 5 ದಿನಗಳ ನಂತರ ಮಮತಾ ಬ್ಯಾನರ್ಜಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
SCROLL FOR NEXT