ಆತ್ಮಹತ್ಯೆಗೆ ಶರಣಾದ ಯುವತಿ ರೇಖಾ (ಚಿತ್ರಕೃಪೆ: ಐಬಿಎನ್) 
ದೇಶ

ಶೌಚಾಲಯ ಕಟ್ಟಿಸಲಿಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ

ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಹೆತ್ತವರನ್ನು ಒತ್ತಾಯಿಸಿ, ಅದರಲ್ಲಿ ವಿಫವಾದ 17 ವಷ೯ದ ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತೆಲಂಗಾಣದ ನಲ್ಗೊಂಡಾ ಜಿಲ್ಲೆಯಲ್ಲಿ ನಡೆದಿದೆ...

ನಲ್ಗೊಂಡಾ: ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಹೆತ್ತವರನ್ನು ಒತ್ತಾಯಿಸಿ, ಅದರಲ್ಲಿ ವಿಫವಾದ 17 ವಷ೯ದ  ವಿದ್ಯಾರ್ಥಿನಿಯೊಬ್ಬಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತೆಲಂಗಾಣದ ನಲ್ಗೊಂಡಾ  ಜಿಲ್ಲೆಯಲ್ಲಿ ನಡೆದಿದೆ.

ನಲ್ಗೊಂಡಾ ಜಿಲ್ಲೆಯ ಜೂನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿರುವ ಕೇದಪಾರ್ತಿ ರೇಖಾ ಎಂಬುವವರು ಹೆತ್ತವರ ಜತೆ  ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸುತ್ತಿದ್ದರು. ಕೂಲಿ ಕೆಲಸಕ್ಕೆ ತೆರಳುವ ಪೋಷಕರು ನಿರ್ಮಾಣ ವೆಚ್ಚಭರಿಸಲು  ಅಸಮರ್ಥರಾಗಿದ್ದರು. ಗೋಣಿಚೀಲ ಇತರೆ ತಾತ್ಕಾಲಿಕ ವ್ಯವಸ್ಥೆಯ ಟಾಯ್ಲೆಟ್ ಬಳಸುವುದಕ್ಕೆ ರೇಖಾಗೆ ಮುಜುಗರ  ಉಂಟಾಗುತ್ತಿತ್ತು. ಈ ಹಿನ್ನಲೆಯಲ್ಲಿ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು.

ಬಡಕುಟುಂಬದ ಅವರಿಗೆ ಅದು ಊಹಿಸಲೂ ಅಸಾಧ್ಯವಾಗಿತ್ತು. ಅಂತಿಮವಾಗಿ ಹೆತ್ತವರನ್ನು ಒಲಿಸುವಲ್ಲಿ ವಿಫಲವಾದ್ದರಿಂದ  ರೇಖಾ ಬೇಸರಗೊ೦ಡು ಆಕೆ ಸೋಮವಾರ ಪಾಲಕರು ಕೂಲಿ ಕೆಲಸಕ್ಕೆ೦ದು ತೆರಳಿದ ಬಳಿಕ ಬೆ೦ಕಿಹಚ್ಚಿಕೊ೦ಡು ಆತ್ಮಹತ್ಯೆ  ಮಾಡಿಕೊ೦ಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜತೆಗೆ ಕಿಡಿಗೇಡಿಗಳ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ  ಆತ್ಮಹತ್ಯೆಗೆ ಶರಣಾಗಿದ್ದಾಳೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿ ಕೆ.ರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ತಮಿಳುನಾಡು ಜನತೆಗೆ CM ವಿಜಯ್ ಬಂಪರ್‌ ಗಿಫ್ಟ್;‌ ಸರ್ಕಾರಿ ನೌಕರರಿಗೆ 3ನೇ ಮಗುವಿಗೂ 1 ವರ್ಷ ಮಾತೃತ್ವ ರಜೆ; ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ!