ಸಾಂದರ್ಭಿಕ ಚಿತ್ರ 
ದೇಶ

ಕಾಲ್ ಡ್ರಾಪ್: 10 ಕೋಟಿ ಪರಿಹಾರಕ್ಕೆ ಟ್ರಾಯ್ ಶಿಫಾರಸ್ಸು

ಮೊಬೈಲ್ ಕರೆ ಸಂಪರ್ಕ ಕಡಿತಗೊಂಡರೆ ಹಾಗೂ ನಿಯಮಗಳಿಗೆ ಬದ್ಧರಾಗದ ಟೆಲಿಕಾಂ ಕಂಪನಿಗಳಿಗೆ 10 ಕೋಟಿ ರೂ.ವರೆಗೂ ದಂಡ ವಿಧಿಸುವ ಅವಕಾಶ ನೀಡುವಂತೆ

ನವದೆಹಲಿ: ಮೊಬೈಲ್ ಕರೆ ಸಂಪರ್ಕ ಕಡಿತಗೊಂಡರೆ ಹಾಗೂ ನಿಯಮಗಳಿಗೆ ಬದ್ಧರಾಗದ ಟೆಲಿಕಾಂ ಕಂಪನಿಗಳಿಗೆ 10 ಕೋಟಿ ರೂ.ವರೆಗೂ ದಂಡ ವಿಧಿಸುವ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮನವಿ ಮಾಡಿದೆ.

ಜೊತೆಗೆ ಟ್ರಾಯ್ ನಿಗದಿಪಡಿಸಿರುವ ನಿಯಮಾವಳಿಗಳಿಗೆ ಬದ್ಧರಾಗದ ಟೆಲಿಕಾಂ ಕಂಪನಿಗಳ ಅಧಿಕಾರಿಗಳಿಗೆ ಎರಡು ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲೂ ಅವಕಾಶ ನೀಡುವಂತೆ ಕೋರಲಾಗಿದೆ. ಇತ್ತೀಚೆಗಷ್ಟೇ ಪ್ರತಿ ಕಾಲ್ ಡ್ರಾಪ್​ಗೂ ಗ್ರಾಹಕರಿಗೆ ಪರಿಹಾರ ನೀಡುವ ಸಂಬಂಧ ಟ್ರಾಯ್ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ 1997ರ ಟ್ರಾಯ್ ಕಾಯ್ದೆಗೆ ವಿವಿಧ ತಿದ್ದುಪಡಿಗಳನ್ನು ಮಾಡುವಂತೆ ಟೆಲಿಕಾಂ ಸಚಿವಾಲಯಕ್ಕೆ ಮನವಿ ಮಾಡಿದೆ.

ಗ್ರಾಹಕರ ಹಿತಾಸಕ್ತಿ ಕಾಯುವುದು, ದೂರು ಪರಿಹಾರ ಮಾಡುವುದು ಹಾಗೂ ನಿಯಮಾವಳಿಗಳು ಮತ್ತು ಆದೇಶಗಳನ್ನು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸಬಹುದು ಎಂದು ಟ್ರಾಯ್ ಸಮರ್ಥಿಸಿಕೊಂಡಿದೆ. ಟ್ರಾಯ್ ಶಿಫಾರಸು ತಲುಪಿರುವುದನ್ನು ಟೆಲಿಕಾಂ ಸಚಿವಾಲಯವೂ ಖಚಿತಪಡಿಸಿದೆ. 1997ರ ಟ್ರಾಯ್ ಕಾಯ್ದೆಯ 29ನೇ ಸೆಕ್ಷನ್ ತಿದ್ದುಪಡಿ ಮಾಡುವುದರ ಜತೆಗೆ 29ಎ, 29ಬಿ ಹಾಗೂ 29 ಸಿ ವಿಭಾಗವನ್ನೂ ಸೇರಿಸಬೇಕು ಎಂದು ಆಗ್ರಹಿಸಿದೆ. 29ನೇ ಸೆಕ್ಷನ್​ನಲ್ಲಿ ದಂಡದ ವಿಚಾರವನ್ನು ನಮೂದಿಸಲಾಗಿದೆ.

ನೆಟ್ ನ್ಯೂಟ್ರಾಲಿಟಿ ವಿಚಾರ ಭಾರಿ ಚರ್ಚೆಗೊಳಗಾದಾಗ ಟ್ರಾಯ್ ಮಹತ್ವದ ನಿರ್ಧಾರ ಕೈಗೊಂಡಿತ್ತು. ಎಲ್ಲ ರೀತಿಯ ಡೇಟಾ ಬಳಕೆಗಳಿಗೂ ಸಮಾನ ಶುಲ್ಕ ನಿಗದಿಪಡಿಸುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ, ಮಹತ್ವದ ಆದೇಶ ಹೊರಡಿಸಿತ್ತು. ಇದರಿಂದ ಫೇಸ್​ಬುಕ್​ನ ಫ್ರೀ ಬೇಸಿಕ್ಸ್ ಹಾಗೂ ಏರ್​ಟೆಲ್ ಜೀರೋ ಯೋಜನೆಗಳನ್ನು ಟ್ರಾಯ್ ಸ್ಥಗಿತಗೊಳಿಸಿತ್ತು.

ಕೆಲವು ವೆಬ್​ಸೈಟ್​ಗಳು ಅಥವಾ ಅಪ್ಲಿಕೇಶನ್​ಗಳ ತಯಾರಕರ ಜತೆ ಟೆಲಿಕಾಂ ಕಂಪನಿಗಳು ಒಪ್ಪಂದ ಮಾಡಿಕೊಂಡು ಅವುಗಳಷ್ಟನ್ನೇ ಉಚಿತವಾಗಿ, ಡೇಟಾ ಶುಲ್ಕವಿಲ್ಲದೇ ನೀಡುವ ವ್ಯವಸ್ಥೆಯನ್ನು ಫ್ರೀ ಬೇಸಿಕ್ಸ್ ಹಾಗೂ ಏರ್​ಟೆಲ್ ಜೀರೋ ಯೋಜನೆಯಲ್ಲಿ ರೂಪಿಸಲಾಗಿತ್ತು. ಈಗ, ಉಚಿತ ಇಂಟರ್​ನೆಟ್ ಒದಗಿಸುವ ವ್ಯವಸ್ಥೆಯ ಬಗ್ಗೆ ಪ್ರಸ್ತಾವನೆಯನ್ನೂ ಟ್ರಾಯ್ ರೂಪಿಸಿದ್ದು, ಸಾರ್ವಜನಿಕ ಅಭಿಪ್ರಾಯ ಆಹ್ವಾನಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT