ಅಸಾದುದ್ದೀನ್‌ ಒವೈಸಿ 
ದೇಶ

ಕಾನೂನಾತ್ಮಕವಾಗಿ ಒವೈಸಿಯ ಶಿರಚ್ಛೇದ ಮಾಡಿ: ಶಿವಸೇನೆ

ಅಸಾದುದ್ದೀನ್‌ ಒವೈಸಿಯ ಭಾರತೀಯ ಪೌರತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದ ಶಿವಸೇನೆ, ಈಗ ಕಾನೂನಾತ್ಮಕವಾಗಿ ಅಸಾವುದ್ದೀನ್ ಒವೈಸಿಯ ಶಿರಚ್ಛೇಧ ಮಾಡಿ ಎಂದು ಹೇಳಿದೆ.

ಮುಂಬೈ: ಅಸಾದುದ್ದೀನ್‌ ಒವೈಸಿಯ ಭಾರತೀಯ ಪೌರತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದ ಶಿವಸೇನೆ, ಕಾನೂನಾತ್ಮಕವಾಗಿ ಅಸಾವುದ್ದೀನ್ ಒವೈಸಿಯ ಶಿರಚ್ಛೇಧ ಮಾಡಿ ಎಂದು ಹೇಳಿದೆ.

ಭಾರತ್ ಮಾತಾ ಕಿ ಜೈ ಎಂದು ಹೇಳಲು ನಿರಾಕರಿಸಿದ್ದ ಅಸಾವುದ್ದೀನ್ ಒವೈಸಿ ಅವರ ಶಿರಚ್ಛೇಧ ಏಕೆ ಮಾಡಬಾರದು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ. ಒವೈಸಿ ಹೇಳಿಕೆ ನಡುವೆಯೂ ಆತನ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕೆ ಸಾಮ್ನಾದ ಸಂಪಾದಕೀಯದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನೂ ಟೀಕಿಸಿರುವ ಶಿವಸೇನೆ, ಒಂದೆಡೆ ಸಿಂಧುದುರ್ಗ್ ನಲ್ಲಿ ಪ್ರತಿಭಟನಾ ನಿರತ ಶಾಸಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸುತ್ತಾರೆ. ಇನ್ನೊಂದೆಡೆ ರಾಷ್ಟ್ರದ್ರೋಹಕರ ಹೇಳಿಕೆ ನೀಡಿದ ಒವೈಸಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂದ ಒವೈಸಿ ಅಂಥವರೇ ಸ್ಪೂರ್ತಿಯಾಗಿರುವುದರಿಂದ ಈ ದೇಶದ ಮುಸ್ಲಿಮರ ಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಶಿಅವಸೇನೆ ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT