ಮೋದಿ ಮತ್ತು ಅರುಣ್ ಜೈಟ್ಲಿ 
ದೇಶ

ಹೋಳಿಯಂದು ಮೋದಿ ಪೋಸ್ಟರ್‌ಗೆ ಮೊಟ್ಟೆ, ಕಪ್ಪುಶಾಯಿ: 150 ಮಂದಿ ವಿರುದ್ದ ಎಫ್‌ಐಆರ್

ಇತ್ತೀಚೆಗೆ ನಡೆದ ಹೋಳಿಯಂದು ಉದ್ಯಮಿ, ಚಿನ್ನದ ವರ್ತಕರ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿಯ ಪೋಸ್ಟರ್ ಗೆ ಕಪ್ಪು ಶಾಯಿ ಹಚ್ಚಿ

ಮೀರತ್:  ಇತ್ತೀಚೆಗೆ ನಡೆದ ಹೋಳಿಯಂದು ಉದ್ಯಮಿ, ಚಿನ್ನದ ವರ್ತಕರ ಮೆರವಣಿಗೆಯಲ್ಲಿ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿಯ ಪೋಸ್ಟರ್ ಗೆ ಕಪ್ಪು ಶಾಯಿ ಹಚ್ಚಿ ಮೊಟ್ಟೆಗಳನ್ನು ಎಸೆದಿದ್ದ 150 ಜನರ ವಿರುದ್ದ ಎಫ್‌ಐಆರ್ ದಾಖಲಾಗಿದೆ.

ಮೀರತ್ ನ ಉದ್ಯಮಿ ಮುಖಂಡ ರಾಜ್‌ಕುಮಾರ್ ಭಾರದ್ವಾಜ್, ಮೀರತ್ ಬುಲಿಯನ್ ವರ್ತಕರ ಸಂಘದ ಸರ್ವೇಶ್ ಕುಮಾರ್ ಸರಫ್ ಮತ್ತು ಮೂವರು ಸೇರಿದಂತೆ ಐಪಿಸಿ ಸೆಕ್ಷನ್ 147,341 ಮತ್ತು 505 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ , ಇನ್ನು ಉಳಿದ 145 ಜನರ ಹೆಸರು ತಿಳಿದು ಬಂದಿಲ್ಲ.

ಮಾರ್ಚ್ 23 ರಂದು ಹೋಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಗಳು ಮತ್ತು ಉದ್ಯಮಿಗಳ ತಂಡವು ಮೋದಿ ಹಾಗೂ ಅರುಣ್ ಜೇಟ್ಲಿಯವರಿದ್ದ ಪೋಸ್ಟರ್ ಗೆ ಕಪ್ಪುಶಾಯಿ ಹಚ್ಚಿದ್ದರು, ಜೊತೆಗೆ ಮೊಟ್ಟೆಯನ್ನೂ ಒಗೆದಿದ್ದರೆಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

ಆದರೆ, ಆರೋಪವನ್ನು ನಿರಾಕರಿಸಿರುವ ವರ್ತಕರ ಸಂಘ, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ, ಘಟನೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ ಎಂದು ಆಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT