ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈರಾ (ಕೃಪೆ: ಫೇಸ್ ಬುಕ್) 
ದೇಶ

ಡೇ ಕೇರ್ ಸೆಂಟರ್‌ನಲ್ಲಿ ತುಂಡಾಯ್ತು ಮೂರರ ಹರೆಯದ ಬಾಲಕಿಯ ಹೆಬ್ಬೆರಳು!

ದೆಹಲಿ ಸಮೀಪದ ಗುರ್‌ಗಾಂವ್‌ನಲ್ಲಿರುವ ಡೇ ಕೇರ್ ಸೆಂಟರ್‌ವೊಂದರಲ್ಲಿ ಮೂರರ ಹರೆಯದ ಮಗುವಿನ ಹೆಬ್ಬೆರಳು ತುಂಡಾದ ಘಟನೆ ಬಗ್ಗೆ ಮಗುವಿನ ಅಮ್ಮ...

ಗುರ್‌ಗಾಂವ್: ದೆಹಲಿ ಸಮೀಪದ ಗುರ್‌ಗಾಂವ್‌ನಲ್ಲಿರುವ ಡೇ ಕೇರ್ ಸೆಂಟರ್‌ವೊಂದರಲ್ಲಿ ಮೂರರ ಹರೆಯದ ಮಗುವಿನ ಹೆಬ್ಬೆರಳು ತುಂಡಾದ ಘಟನೆ ಬಗ್ಗೆ ಮಗುವಿನ ಅಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಆ ಪೋಸ್ಟ್ ಈಗ ವೈರಲ್ ಆಗಿದೆ.
ಏಪ್ರಿಲ್ 28ರಂದು ಈ ಘಟನೆ ನಡೆದಿದ್ದು, ಘಟನೆ ಬಗ್ಗೆ ಮಗುವಿನ ತಾಯಿ ಶಿವಾನಿ ಶರ್ಮಾ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ಈಗಾಗಲೇ 9,000ಕ್ಕಿಂತಲೂ ಹೆಚ್ಚು ಮಂದಿ ಈ ಪೋಸ್ಟ್‌ನ್ನು ಶೇರ್ ಮಾಡಿದ್ದಾರೆ. 
ಶಿವಾನಿ ಶರ್ಮಾ ಆಕೆಯ ಮಗಳು ಮೈರಾಳನ್ನು ಚೆರುಬ್ ಏಂಜಲ್ ಎಂಬ ಡೇ ಕೇರ್ ಸೆಂಟರ್‌ಗೆ ಬಿಟ್ಟು ಬಂದು ಅರ್ಧಗಂಟೆಯಾದಾಗ ಡೇ ಕೇರ್ ಸೆಂಟರ್ ನಿಂದ ಫೋನ್ ಬಂದಿತ್ತು. ಮಗಳ ಬಲಗೈ ಹೆಬ್ಬೆರಳಿಗೆ ತೀವ್ರಗಾಯವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಟೀಚರ್ ಹೇಳಿದ್ದರು. 
ಆಸ್ಪತ್ರೆಗೆ ಹೋದಾಗ ನನ್ನ ಮಗಳ ಹೆಬ್ಬೆರಳು ತುಂಡಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಡೇ ಕೇರ್ ಸೆಂಟರ್‌ನಲ್ಲಿದ್ದ ಇನ್ನೊಂದು ಮಗು ಬಾಗಿಲು ಹಾಕುವಾಗ ಬಾಗಿಲು ಸಂದಿಗೆ ಮೈರಾಳ ಬೆರಳು ಸಿಕ್ಕಿಹಾಕಿಕೊಂಡಿದೆ ಎಂದು ಡೇ ಕೇರ್ ಸೆಂಟರ್ ನವರು ಹೇಳಿರುವುದಾಗಿ ಶಿವಾನಿ ಶರ್ಮಾ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.
ನನ್ನ ಪಾಪುವನ್ನು ಆ ಅವಸ್ಥೆಯಲ್ಲಿ ನಾನು ಹೇಗೆ ನೋಡಲಿ? ಹೆಬ್ಬರಳಿನ ತುದಿ ತುಂಡಾಗಿದ್ದು, ಆ ಗಾಯವನ್ನು ಗುಣಪಡಿಸಬಹುದಷ್ಟೇ ಬೇರೇನು ಮಾಡಲು ಸಾಧ್ಯವಿಲ್ಲ ಎಂದು ಪ್ಲಾಸ್ಟಿಕ್ ಸರ್ಜನ್ ಹೇಳಿದ್ದಾರೆ. ಇನ್ನು ಮುಂದೆ ನನ್ನ ಮಗಳು ಜೀವನ ಪೂರ್ತಿ ತುಂಡಾದ ಹೆಬ್ಬರಳಿಟ್ಟುಕೊಂಡೇ ಬದುಕು ಸಾಗಿಸಬೇಕು. 
ಮೇ 1 ರಂದು ಡೇ ಕೇರ್ ಸೆಂಟರ್‌ನ ಮಾಲೀಕರು ಬಂದು ಕ್ಷಮೆಯಾಚಿಸಿ, ಮಗುವಿನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದರು. ಆದರೆ ಅನಂತರ ಅವರು ನಮ್ಮತ್ತ ತಿರುಗಿಯೂ ನೋಡಲಿಲ್ಲ.
ಮಗುವಿನ ಎರಡನೇ ಸರ್ಜರಿಯ ವೆಚ್ಚ ಭರಿಸುವಂತೆ ನಾವು ಕೇಳಿದಾಗ ಅವರು ನಮ್ಮ ಮಾತಿಗೆ ಪ್ರತಿಕ್ರಿಯಿಸಿಲ್ಲ. ಫೋನ್ ಮಾಡಿದರೆ ಉತ್ತರಿಸಲಿಲ್ಲ, ಅಷ್ಟೇ ಅಲ್ಲದ ಪೊಲೀಸರಿಗೆ ದೂರು ನೀಡುವುದಾಗಿ ಆಕೆ ಬೆದರಿಕೆಯನ್ನೊಡ್ಡಿದ್ದಾರೆ.
ಇವರೆಲ್ಲವೂ ಹೃದಯಹೀನರು, ಇವರಿಗೆ ಕಾನೂನು, ಸಮಾಜ ಅಷ್ಟೇ ಯಾಕೆ ದೇವರ ಮೇಲೂ ಭಯವಿಲ್ಲ.
ಆ ಪೋಸ್ಟ್ ಹಾಕಿದ ನಂತರ ಡೇ ಕೇರ್ ಮಾಲೀಕರು ಫೇಸ್‌ಬುಕ್ ನಿಂದ ತಮ್ಮ ಅಕೌಂಟ್‌ನ್ನು ಡಿಲೀಟ್ ಮಾಡಿದ್ದಾರೆ. ಆದಾಗ್ಯೂ, ಡೇ ಕೇರ್ ಸೆಂಟರ್ ಬಗ್ಗೆ ಹೆತ್ತವರು ಜಾಗೃತರಾಗಬೇಕೆಂದು ಶಿವಾನಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT