ಶಿವಸೇನೆ 
ದೇಶ

ಕಾಂಗ್ರೆಸ್ ನಾಯಕರು ಎರೆಹುಳುವಿನಂತೆ, ಆದರೂ ಹಾವಿನಂತೆ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ: ಶಿವಸೇನೆ

ಕಾಂಗ್ರೆಸ್ ನಾಯಕರು ಎರೆಹುಳುಗಳಂತೆ ಆದರೂ ನಾಗರ ಹಾವಿನ ರೀತಿಯಲ್ಲಿ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ ಎಂದು ಶಿವಸೇನೆ ಹೇಳಿದೆ.

ಮುಂಬೈ: ಶಿವಸೇನೆಯನ್ನು ನಾಗರ ಹಾವಿಗೆ ಹೋಲಿಸಿದ್ದ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೇ ಪಾಟೀಲ್ ಗೆ  ಶಿವಸೇನೆ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರು ಎರೆಹುಳುಗಳಂತೆ ಆದರೂ ನಾಗರ ಹಾವಿನ ರೀತಿಯಲ್ಲಿ ತಮ್ಮನ್ನು ಬಣ್ಣಿಸಿಕೊಳ್ಳುತ್ತಾರೆ ಎಂದು ಹೇಳಿದೆ.

ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಲೇಖನ ಬರೆದಿರುವ ಶಿವಸೇನೆ, ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೇ ಅವರ ನಾಯಕತ್ವವನ್ನು ಪ್ರಶ್ನಿಸಿರುವ ಶಿವಸೇನೆ, ರಾಧಾಕೃಷ್ಣ ವಿಖೇ ಹಾಗು ಅವರ ತಂದೆ ಬಾಳಾಸಾಹೇಬ್ ವಿಖೇ ಇಬ್ಬರು  ಕಾಂಗ್ರೆಸ್ ನಲ್ಲಿದ್ದಾಗ ನಾಶವಾಗುತ್ತಿದ್ದರು. ಅವಧಿಗೆ ಅಧಿಕಾರದ ಅನುಭವವಾಗಿದ್ದು ಶಿವಸೇನೆಗೆ ಸೇರಿದ ನಂತರವೇ ಎಂದು ಹೇಳಿದೆ. ಶಿವಸೇನೆ ವಿರುದ್ಧ ಇಂದು ಮಾತನಾಡುತ್ತಿರುವವರು ಒಂದು ವೇಳೆ ಶಿವಸೇನೆಗೆ ಸೇರದೆ ಇರುತ್ತಿದ್ದಿದ್ದರೆ ಜನರಿಗೆ ರಾಧಾಕೃಷ್ಣ ವಿಖೇ ಅವರ ಗ್ರಾಮವು ಪರಿಚಯವಿರುತ್ತಿರಲಿಲ್ಲ ಎಂದು ಹೇಳಿದೆ.

ರಾಧಾಕೃಷ್ಣ ವಿಖೇ ಹಾಗೂ ಅವರ ತಂದೆ ನಿರ್ದಿಷ್ಟ ಋತುಗಳಲ್ಲಿ ಹೊರಬರುವ ಎರೆಹುಳುಗಳಿದ್ದಂತೆ, ಅವರೆಂದಿಗೂ ನಾಗರಹಾವಂತೆ ಆಗಲು ಸಾಧ್ಯವಿಲ್ಲ ಎಂದು ಶಿವಸೇನೆ ಸಾಮ್ನಾ ಪತ್ರಿಕೆಯಲ್ಲಿ ಬರೆದಿದೆ. ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಾದ ರಾಧಾಕೃಷ್ಣ ವಿಖೇ, ಶಿವಸೇನೆ ನಾಗರಹಾವಿನಂತೆ ವಿಷವನ್ನು ಕಕ್ಕುವುದನ್ನು ಬಿಟ್ಟು ಬೇರೇನನ್ನೂ ಮಾಡಿಲ್ಲ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಬೆಂಗಳೂರು ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿದ ಬೃಹತ್ ಬಂಡೆ: ಲೋಕೋ ಪೈಲಟ್‌ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಮುಂಬೈ ಗಣೇಶೋತ್ಸವ ವೇಳೆ ದುರಂತ: ವಿದ್ಯುತ್ ತಗುಲಿ 8 ವರ್ಷದ ಬಾಲಕಿ ಸೇರಿ ಇಬ್ಬರ ಸಾವು!

‘ಮಹಿಳೆಯ ದೇಹವೇನು ಸಾರ್ವಜನಿಕ ಜಾಹಿರಾತು ಫಲಕವೇ?’; Katrina Kaif ಪರ ನಟಿ ಖುಷ್ಬೂ ಖಡಕ್ ಮಾತು!