ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ದೇಶ

ಅಫ್ಘಾನಿಸ್ತಾನದ ಮೇಲೆ ಅತೀ ದೊಡ್ಡ ಬಾಂಬ್ ದಾಳಿ: ಅಮೆರಿಕಾ ಕ್ರಮಕ್ಕೆ ಭಾರತೀಯ ನಾಯಕರ ಮೆಚ್ಚುಗೆ

ಆಫ್ಘಾನಿಸ್ತಾದನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗು ತಾಣಗಳ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕವನ್ನು ಭಾರತೀಯ ರಾಜಕೀಯ ನಾಯಕರು...

ನವದೆಹಲಿ: ಆಫ್ಘಾನಿಸ್ತಾದನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಅಡಗು ತಾಣಗಳ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ಅಮೆರಿಕವನ್ನು ಭಾರತೀಯ ರಾಜಕೀಯ ನಾಯಕರು ಕೊಂಡಾಡಿದ್ದಾರೆ. 
ಅಮೆರಿಕ ಸೇನೆ ನಿನ್ನೆ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ನಂಗರ್ಹಾರ್ ಪ್ರದೇಶದ ಮೇಲೆ ವಿಶ್ವದ 2ನೇ ಅತೀದೊಡ್ಡ ಬಾಂಬ್ ಮೊಅಬ್ ( ಮದರ್ ಆಫ್ ಆಲ್ ಬಾಂಬ್ಸ್) ದಾಳಿ ನಡೆಸಿತ್ತು. ಈ ವೇಳೆ ಹಲವು ಇಸಿಸ್ ಉಗ್ರರು ಸಾವನ್ನಪ್ಪಿದ್ದರು. 
ಇಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಕಠಿಣ ಕ್ರಮ ಕೈಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಭಾರತೀಯ ರಾಜಕೀಯ ನಾಯಕರು ಅಮೆರಿಕವನ್ನು ಹೊಗಳಿದ್ದಾರೆ. 
ಅಫ್ಘಾನಿಸ್ತಾನದ ಮೇಲೆ ಅತೀ ದೊಡ್ಡ ಬಾಂಬ್ ದಾಳಿ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಅಫ್ಘಾನಿಸ್ತಾನದ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮದರ್ ಆಫ್ ಆಲ್ ಬಾಂಬ್ ದಾಳಿ ಮಾಡಿರುವುದು ಅತ್ಯುತ್ತಮವಾಗಿದೆ. ಅಮೆರಿಕ, ಇಸ್ರೇಲ್, ಭಾರತ ಉಗ್ರರ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. 
ಇದೇ ರೀತಿ ಕಾಂಗ್ರೆಸ್ ನಾಯಕ ಮನೀಷ್ ತಿವಾರಿಯವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದನಾ ಸಂಘಟನೆಗಳ ಅಭಿವೃದ್ಧಿಗೆ ಅಂತ್ಯ ಹಾಡಲು ಮತ್ತಷ್ಟು ಕಠಿಣ ಕ್ರಮಗಳ ಅಗತ್ಯವಿದೆ. ಆಫ್ಘಾನಿಸ್ತಾನದ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಮೊಅಬ್ ದಾಳಿ ನಡೆಸಿದೆ ಎಂದರೆ, ಎಲ್ಇಟಿ, ಜೈಶ್-ಇ-ಮೊಹಮ್ಮದ್, ಜಮ್ಮತ್-ಉಲ್-ದವಾ ಉಗ್ರ ಸಂಘಟನೆಗಳ ನಡುವಿನ ವ್ಯತ್ಯಾಸವೇನಿದೆ? ಮುರಿದ್ಕೆ ಮೇಲೆ ಒಂದು ದಾಳಿ ಏಕೆ ಆಗಬಾರದು? ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT