ಸಂಗ್ರಹ ಚಿತ್ರ 
ದೇಶ

1962ರ ಯುದ್ಧದಿಂದ ಸಾಕಷ್ಟು ಪಾಠ ಕಲಿತಿದ್ದೇವೆ, ಚೀನಿ ಪಡೆಗಳ ಎದುರಿಸಲು ಸೇನೆ ಸಮರ್ಥವಾಗಿದೆ: ಅರುಣ್ ಜೇಟ್ಲಿ

1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ಇಲ್ಲಿ ಕಲಿತ ಪಾಠದಿಂದಲೇ 1965 ಮತ್ತು 1971ರ ಯುದ್ಧವನ್ನು ಸಮರ್ಥವಾಗಿಯೇ ಎದುರಿಸಿ ಗೆದ್ದು ತೋರಿಸಿದ್ದೇವೆ. ಈಗ ಚೀನೀ ಪಡೆಗಳನ್ನು ಎದುರಿಸಲೂ ಕೂಡ ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ: 1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದೆ. ಇಲ್ಲಿ ಕಲಿತ ಪಾಠದಿಂದಲೇ 1965 ಮತ್ತು 1971ರ ಯುದ್ಧವನ್ನು ಸಮರ್ಥವಾಗಿಯೇ ಎದುರಿಸಿ ಗೆದ್ದು ತೋರಿಸಿದ್ದೇವೆ. ಈಗ  ಚೀನೀ ಪಡೆಗಳನ್ನು ಎದುರಿಸಲೂ  ಕೂಡ ಭಾರತೀಯ ಸೇನೆ ಸಮರ್ಥವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಭಾರತ ಮತ್ತು ಚೀನಾ ದೇಶಗಳ ನಡುವಿನ ಶೀತಲ ಸಮರಕ್ಕೆ ಕಾರಣವಾಗಿರುವ ಡೊಕ್ಲಾಂ ಗಡಿ ವಿವಾದ ಸಂಬಂಧ ಚೀನಾ ಪತ್ರಿಕೆಗಳ ಕದನೋತ್ಸಾಹದ ಬರವಣಿಗೆಗಳ ಹಿನ್ನಲೆಯಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಇಲಾಖೆಯ  ಹೊಣೆಗಾರಿಕೆ ಹೊತ್ತಿರುವ ಅರುಣ್ ಜೇಟ್ಲಿ ಅವರು, 1962ರ ಯುದ್ಧದಿಂದ ಭಾರತ ಸಾಕಷ್ಟು ಪಾಠ ಕಲಿತಿದ್ದು, ಪ್ರಸ್ತುತ ನಮ್ಮ ಸೇನೆ ಯಾವುದೇ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿದೆ. ನಮ್ಮ ಸೇನಾ ಪಡೆ ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದಿದ್ದು, ಚೀನಾ ಸೈನಿಕರ ದಾಳಿಯನ್ನು ಸಮರ್ಥವಾಗಿ ನಿಭಾಯಿಸಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ "ಕ್ವಿಟ್‌ ಇಂಡಿಯಾ ಚಳವಳಿಗೆ 75 ವರ್ಷದ ಸ್ಮರಣೆ'' ವೇದಿಕೆಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ ಅವರು, "1962ರಲ್ಲಿ ಆದ ತಪ್ಪುಗಳೇ ನಾವು ಎಚ್ಚೆತ್ತುಕೊಳ್ಳುವಂತೆ ಮಾಡಿದವು. ಹೀಗಾಗಿಯೇ ನಾವು  ಸೇನೆಯನ್ನು ಪೂರ್ಣ ಪ್ರಮಾಣದ ಸಾಮರ್ಥ್ಯ ಹೊಂದುವಂತೆ ಮಾಡಿದೆವು. ಈ ಮೂಲಕ 1965 ಮತ್ತು 1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧಗಳಲ್ಲಿ ಗೆದ್ದು ತೋರಿಸಿದೆವು ಎಂದು ಹೇಳಿದರು, ಅಂತೆಯೇ 1948ರಲ್ಲಿ  ಪಾಕಿಸ್ತಾನ ವಶಕ್ಕೆ ಪಡೆದ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದ ಸುಪರ್ದಿಗೆ ತೆಗೆದುಕೊಳ್ಳಲು ದೇಶದ ಜನ ಬಯಸುತ್ತಿದ್ದಾರೆ. ಗಡಿಯಾಚೆಯ ಕೆಲವರು ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಆಗಾಗ  ಬೆದರಿಕೆಯೊಡ್ಡುತ್ತಲೇ ಇದ್ದಾರೆ. ಇವರನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಸಂಪೂರ್ಣವಾಗಿ ಭಾರತ ಸೇನೆಗೆ ಇದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರವನ್ನು ನಾವು ಮರೆತಿದ್ದೇವೆ ಎಂದು ಅವರು ಭಾವಿಸಿದ್ದಾರೆ. ಆದರೆ ಆ ಪ್ರದೇಶ ಭಾರತದ್ದೇ ಎಂಬುದು ಅವರಿಗೆ ನೆನಪಿರಬೇಕು ಎಂದು ಜೇಟ್ಲಿ ಪರೋಕ್ಷವಾಗಿ ಚೀನಾ ಮತ್ತು ಪಾಕಿಸ್ತಾನಕ್ಕೆ  ತಿವಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT