ತಲಾಕ್ ಸಂತ್ರಸ್ತೆ 
ದೇಶ

ಮುಸ್ಲಿಂ ಮಹಿಳೆಯರಿಗೆ ಇಂದು ಈದ್ ಗಿಂತ ಶ್ರೇಷ್ಠ ದಿನ: ತಲಾಕ್ ಸಂತ್ರಸ್ತೆ

ಸಂಸತ್ತಿನಲ್ಲಿ ತ್ರಿವಳಿ ತಲಾಕ್ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆ, ಆದರೆ ಮಸೂದೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧ ಕಾನೂನನ್ನು ಜಾರಿಗೆ ತರಲು .........

ನವದೆಹಲಿ: ಸಂಸತ್ತಿನಲ್ಲಿ ತ್ರಿವಳಿ ತಲಾಕ್ ಮಸೂದೆಯನ್ನು ಕಾಂಗ್ರೆಸ್ ಬೆಂಬಲಿಸಲಿದೆ, ಆದರೆ ಮಸೂದೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧ ಕಾನೂನನ್ನು ಜಾರಿಗೆ ತರಲು ತಮ್ಮ ಕೆಲವು ಸಲಹೆಗಳು ಇದೆ ಎಂದಿದೆ. ತ್ರಿವಳಿ ತಲಾಖ್ ವಿರುದ್ಧ ಪ್ರಸ್ತಾವಿತ ಮಸೂದೆಯು ಸಂತ್ರಸ್ತ ಮುಸ್ಲಿಂ ಮಹಿಳೆಯರಿಗೆ ಉತ್ತಮ ಪರಿಹಾರವನ್ನೊದಗಿಸುತ್ತದೆ.
ತ್ರಿವಳಿ ತಲಾಕ್ ಸಂತ್ರಸ್ತೆಯಾದ ಹುಮಾ ಖಯಾನಾತ್ ಎ ಎನ್ ಐ ಜತೆ ಮಾತನಾಡಿ ಮಸೂದೆಯು ಇನ್ನಷ್ಟು ಕಟ್ಟುನಿಟ್ಟಿನ ನಿಬಂಧನೆಗಳೊಡನೆ ಜಾರಿಯಾಗಬೇಕು ಎಂದರು
"ವಿಚ್ಛೇದಿತರಾದವರು ಮತ್ತು ವಿಚ್ಛೇದನದ ಬೆದರಿಕೆ ಎದುರಿಸುತ್ತಿರುವವರು ಈ ಕಾನೂನಿನಿಂದ ಪ್ರಯೋಜನ ಪಡೆದುಕೊಳ್ಳುತ್ತಾರೆ. ತ್ರಿವಳಿ ತಲಾಕ್ ವಿರುದ್ಧ ದೇಶದಲ್ಲಿ ಒಂದು ಕಾನೂನು ಅಗತ್ಯವಿದೆ.ಇದರಿಂದ ನಾವು ಒಂದಷ್ಟು ನೆಮ್ಮದಿ ಕಾಣಬಹುದು. ಕನಿಷ್ಟ ಮಹಿಳೆಯರಾರೂ ಇದನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ." ಅವರು ಹೇಳಿದರು/
ಫೈಜಾ ಖಾನ್ ತ್ರಿವಳಿ ತಲಾಕ್ ನ ಇನ್ನೊರ್ವ ಸಂತ್ರಸ್ತೆ  "ಪ್ರಧಾನಿ ನರೇಂದ್ರ ಮೋದಿ ಮತ್ತು  ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುಸ್ಲಿಂ ಮಹಿಳೆಯರಿಗಾಗಿ  ಪ್ರಾರಂಭಿಸಿದ ಕಾರ್ಯವಿಧಾನವು ಯಶಸ್ವಿಯಾಗಲಿದೆ ನಾವು ನಿಜವಾಗಿಯೂ ಸಂತೋಷಪಡುತ್ತೇವೆ ಈದ್ ಅಥವಾ ಬಕ್ರೀದ್ ಗಿಂತ ಮುಸ್ಲಿಂ ಮಹಿಳೆಯರ ಜೀವನದಲ್ಲಿ ಈ ದಿನ ಹೆಚ್ಚು ಮಹತ್ವದ್ದಾಗಿದೆ." ಎಂದರು. 
ತ್ರಿವಳಿ ತಾಲಾಖ್ ಅನ್ನು ಅಪರಾಧ ಎಂದು ಸಾರುವ ಮುಸ್ಲಿಂ ಮಹಿಳಾ ವಿವಾಹ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) 2017 ಮಸೂದೆ ಸಂಸತ್ತಿನಲ್ಲಿಇಂದು ಮಂಡನೆಯಾಗಿದೆ. ಇದರ ಪ್ರಕಾರ "ತನ್ನ ಹೆಂಡತಿಯ ಮೇಲೆ ವ್ಯಕ್ತಿಯೊಬ್ಬ ತಲಾಕ್ ಹೇಳುವುದಾದರೆ, ಮಾತನಾಡುವ ಅಥವಾ ಬರೆದಿರುವ ಅಥವಾ ವಿದ್ಯುನ್ಮಾನ ರೂಪದಲ್ಲಿ ಅಥವಾ ಬೇರೆ ಯಾವುದೇ ರೀತಿಯಲ್ಲಿ ಹೇಳುವುದು ನಿರರ್ಥಕ ಮತ್ತು ಕಾನೂನು ಬಾಹಿರ." ಎಂದಾಗಲಿದೆ.
ಈ ಮಸೂದೆಯ ವ್ಯಾಪ್ತಿಯಲ್ಲಿ ಬರುವ ಅಪರಾಧಗಳು ಪ್ರಕರಣಗಳು ಜಾಮೀನು ರಹಿತವಾಗಿರಲಿದೆ. ಜಮ್ಮು ಮತ್ತು ಕಾಶ್ಮಿ ಹೊರತುಪಡಿಸಿಬೆರೆಲ್ಲಾ ರಾಜ್ಯಗಳು ಈ ಮಸೂದೆ ವ್ಯಾಪ್ತಿಗೆ ಸೇರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

'Ground Ops ಗಾಗಿ ಭಾರತೀಯ ಸೇನೆ ಸಂಪೂರ್ಣ ಸಜ್ಜು: ಪಾಕ್ ಗೆ ವಾರ್ನಿಂಗ್ ನೀಡಿದ ಸೇನಾ ಮುಖ್ಯಸ್ಥ ದ್ವಿವೇದಿ!

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

SCROLL FOR NEXT