ಬಿಎಸ್ಪಿ ನಾಯಕಿ ಮಾಯಾವತಿ 
ದೇಶ

ಮುಸ್ಲಿಂ ಮತದಾರರು ಬುದ್ದಿವಂತಿಕೆಯಿಂದ ಮತ ಹಾಕುವಂತೆ ಮಾಯಾವತಿ ಮನವಿ

ಬಿಜೆಪಿಯನ್ನು ಸೋಲಿಸಲು ಮುಸಲ್ಮಾನ ಮತದಾರರು ಸಮಾಜವಾದಿ ಪಕ್ಷಕ್ಕೆ ಬದಲಾಗಿ...

ಲಕ್ನೋ: ಬಿಜೆಪಿಯನ್ನು  ಸೋಲಿಸಲು ಮುಸಲ್ಮಾನ ಮತದಾರರು ಸಮಾಜವಾದಿ ಪಕ್ಷಕ್ಕೆ ಬದಲಾಗಿ ಬಹುಜನ ಸಮಾಜವಾದಿ ಪಕ್ಷಕ್ಕೆ ಮತ ನೀಡಬೇಕೆಂದು ನಾಯಕಿ ಮಾಯಾವತಿ ಮನವಿ ಮಾಡಿದ್ದಾರೆ.
ಲಕ್ನೋದಲ್ಲಿಂದು ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಲು ಎಸ್ಪಿಗೆ ಬದಲಾಗಿ ಬಿಎಸ್ಪಿಗೆ ಮತ ಚಲಾಯಿಸಬೇಕು. ಮುಸ್ಲಿಂ ಮತದಾರರು ಬುದ್ದಿವಂತಿಕೆಯಿಂದ ಮತ ಹಾಕುವಂತೆ ಮನವಿ ಮಾಡಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಅವರು, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ಧ ಭರವಸೆಯಲ್ಲಿ 4ನೇ ಒಂದು ಭಾಗದಷ್ಟು ಆಶ್ವಾಸನೆಗಳನ್ನು ಕೂಡ ಪೂರೈಸಿಲ್ಲ. ಪ್ರಧಾನಿ ಮೋದಿಯವರು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.ನೋಟುಗಳ ಚಲಾವಣೆ ಹಿಂತೆಗೆತ ಕ್ರಮವನ್ನು ಟೀಕಿಸಿದ ಅವರು, ಜನರು ಇದಕ್ಕೆ ಸರಿಯಾದ ಪ್ರತ್ಯುತ್ತರ ನೀಡುತ್ತಾರೆ.
ಬಿಹಾರಕ್ಕಿಂತ ಹೆಚ್ಚು ಅಪಜಯವನ್ನು ಉತ್ತರ ಪ್ರದೇಶದಲ್ಲಿ ಜನರು ಕಾಣುತ್ತಾರೆ ಎಂದು ಅವರು ಹರಿಹಾಯ್ದರು.ಮೀಸಲಾತಿ ಕುರಿತು ಆರ್ಎಸ್ಎಸ್ ವಕ್ತಾರ ಮೋಹನ್ ವೈದ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಕುರಿತು ಪಕ್ಷದ ವಿರೋಧಿ ಭಾವನೆ ಈಗ ಜನತೆಗೆ ಗೊತ್ತಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT