ಮಾರ್ಗಮಧ್ಯದಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ರಷ್ಯಾದ ಪಾನಮತ್ತ ಪ್ರಯಾಣಿಕ!
ನವದೆಹಲಿ: ರಷ್ಯಾದ ಪಾನಮತ್ತ ಪ್ರಯಾಣಿಕನೋರ್ವ ಮಾರ್ಗ ಮಧ್ಯದಲ್ಲಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ.
ವಿಮಾನದಲ್ಲಿದ್ದ ಪಾನಮತ್ತ ಪ್ರಯಾಣಿಕನನ್ನು ನಿಯಂತ್ರಿಸಲು ವಿಮಾನದ ಪೈಲಟ್ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ನ ಸಿಬ್ಬಂದಿಗಳ ಸಹಾಯ ಪಡೆದಿದ್ದು, ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಸಿಐಎಸ್ಎಫ್ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಾಸ್ಕೋದಿಂದ ನವದೆಹಲಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನದ ಬಾಗಿಲು ತೆಗೆಯಲು ಯತ್ನಿಸಿದ ಪ್ರಯಾಣಿಕನ ವರ್ತನೆಯಿಂದ ಕೆಲಕಾಲ ಉಳಿದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಮೇ.22 ರಂದು ಈ ಘಟನೆ ನಡೆದಿದೆ.
ಭಾರತ-ರಷ್ಯಾಗಳಲ್ಲಿ ವಿಮಾನದಲ್ಲಿ ಕೇವಲ 30 ಎಂಜಿ ಗಳಷ್ಟು ಮದ್ಯ ಸೇವೆನಗೆ ಅನುಮತಿ ನೀಡಲಾಗಿದೆ. ಆದರೆ ಬಂಧಿತ ಪಾನಮತ್ತ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಆತನ ರಕ್ತದಲ್ಲಿನ ಮದ್ಯದ ಪ್ರಮಾಣ 56.7/100 ಎಂಎಲ್ ಗಳಿತ್ತು ಎಂದು ತಿಳಿದುಬಂದಿದೆ. ಪಾನಮತ್ತ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos