ಯೋಗಿ ಆದಿತ್ಯನಾಥ್ 
ದೇಶ

ಉ.ಪ್ರ ಸರ್ಕಾರದ ಆದೇಶ ರದ್ದುಗೊಳಿಸಿದ ಅಲಹಾಬಾದ್ ಕೋರ್ಟ್: ವಕ್ಫ್ ಬೋರ್ಡ್ ಸದಸ್ಯರ ಮರುಸ್ಥಾಪನೆ

ಶಿಯಾ ವಕ್ಫ್ ಬೋರ್ಡ್ ನ ಸದಸ್ಯರನ್ನು ವಜಾಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲ್ಲಾಹಾಬಾದ್ ಕೋರ್ಟ್ ರದ್ದುಗೊಳಿಸಿದ್ದು, 6 ಶಿಯಾ ವಕ್ಫ್ ಬೋರ್ಡ್ ಸದಸ್ಯರ ಸ್ಥಾನಮಾನವನ್ನು...

ಲಖನೌ: ಶಿಯಾ ವಕ್ಫ್ ಬೋರ್ಡ್ ನ ಸದಸ್ಯರನ್ನು ವಜಾಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲಹಾಬಾದ್ ಕೋರ್ಟ್ ರದ್ದುಗೊಳಿಸಿದ್ದು, 6 ಶಿಯಾ ವಕ್ಫ್ ಬೋರ್ಡ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವಂತೆ ಆದೇಶ ನೀಡಿದೆ. 
ನ್ಯಾ. ರಂಜನ್ ರಾಯ್ ಹಾಗೂ ಎಸ್ಎ ಅಗ್ನಿಹೋತ್ರಿ ಅವರಿದ್ದ ರಜೆ ಪೀಠ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ವಿಚಾರಣೆ ನಡೆಸಲು ಅವಕಾಶ ನೀಡದೇ ಇರುವ ಆಧಾರದಲ್ಲಿ ರದ್ದುಗೊಳಿಸಿದ್ದು, ಸಧ್ಯಕ್ಕೆ 6 ವಕ್ಫ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಆದೇಶ ನೀಡಿದೆ. 
ಇದೇ ವೇಳೆ ವಕ್ಫ್ ಬೋರ್ಡ್ ಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮುಂದುವರೆಯುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ವಕ್ಫ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದ ಉತ್ತರ ಪ್ರದೇಶ ಸರ್ಕಾರ, ಅಕ್ರಮ ನಡೆದಿದ್ದ ವಕ್ಫ್ ಬೋರ್ಡ್ ಗಳನ್ನು ವಿಸರ್ಜನೆಗೊಳಿಸಿ, ಅಕ್ರಮದಲ್ಲಿ ಭಾಗಿಯಾಗಿದ್ದ ವಕ್ಫ್ ಸದಸ್ಯರನ್ನು ವಜಾಗೊಳಿಸಿ ಜೂ.16 ರಂದು ಆದೇಶ ಹೊರಡಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT