ಯೋಗಿ ಆದಿತ್ಯನಾಥ್ 
ದೇಶ

ಉ.ಪ್ರ ಸರ್ಕಾರದ ಆದೇಶ ರದ್ದುಗೊಳಿಸಿದ ಅಲಹಾಬಾದ್ ಕೋರ್ಟ್: ವಕ್ಫ್ ಬೋರ್ಡ್ ಸದಸ್ಯರ ಮರುಸ್ಥಾಪನೆ

ಶಿಯಾ ವಕ್ಫ್ ಬೋರ್ಡ್ ನ ಸದಸ್ಯರನ್ನು ವಜಾಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲ್ಲಾಹಾಬಾದ್ ಕೋರ್ಟ್ ರದ್ದುಗೊಳಿಸಿದ್ದು, 6 ಶಿಯಾ ವಕ್ಫ್ ಬೋರ್ಡ್ ಸದಸ್ಯರ ಸ್ಥಾನಮಾನವನ್ನು...

ಲಖನೌ: ಶಿಯಾ ವಕ್ಫ್ ಬೋರ್ಡ್ ನ ಸದಸ್ಯರನ್ನು ವಜಾಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲಹಾಬಾದ್ ಕೋರ್ಟ್ ರದ್ದುಗೊಳಿಸಿದ್ದು, 6 ಶಿಯಾ ವಕ್ಫ್ ಬೋರ್ಡ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವಂತೆ ಆದೇಶ ನೀಡಿದೆ. 
ನ್ಯಾ. ರಂಜನ್ ರಾಯ್ ಹಾಗೂ ಎಸ್ಎ ಅಗ್ನಿಹೋತ್ರಿ ಅವರಿದ್ದ ರಜೆ ಪೀಠ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ವಿಚಾರಣೆ ನಡೆಸಲು ಅವಕಾಶ ನೀಡದೇ ಇರುವ ಆಧಾರದಲ್ಲಿ ರದ್ದುಗೊಳಿಸಿದ್ದು, ಸಧ್ಯಕ್ಕೆ 6 ವಕ್ಫ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಆದೇಶ ನೀಡಿದೆ. 
ಇದೇ ವೇಳೆ ವಕ್ಫ್ ಬೋರ್ಡ್ ಗಳಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕವಾಗಿ ಮುಂದುವರೆಯುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ವಕ್ಫ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿದ್ದ ಉತ್ತರ ಪ್ರದೇಶ ಸರ್ಕಾರ, ಅಕ್ರಮ ನಡೆದಿದ್ದ ವಕ್ಫ್ ಬೋರ್ಡ್ ಗಳನ್ನು ವಿಸರ್ಜನೆಗೊಳಿಸಿ, ಅಕ್ರಮದಲ್ಲಿ ಭಾಗಿಯಾಗಿದ್ದ ವಕ್ಫ್ ಸದಸ್ಯರನ್ನು ವಜಾಗೊಳಿಸಿ ಜೂ.16 ರಂದು ಆದೇಶ ಹೊರಡಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT