ದೇಶ

ನಾವು ರಾಷ್ಟ್ರೀಯವಾದಿಗಳು, ದೇಶ ವಿರೋಧಿ ಘೋಷಣೆ ಕೂಗುತ್ತಿದ್ದರೆ ಸುಮ್ಮನೆ ಕೂರುವವರಲ್ಲ: ಬಿಜೆಪಿ ಸಂಸದ

Manjula VN

ಅರಾ: ನಾವು ರಾಷ್ಟ್ರೀಯವಾದಿಗಳು, ದೇಶ ವಿರುದ್ಧ ಘೋಷಣೆ ಕೂಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಗಳು ನಾವಲ್ಲ ಎಂದು ಬಿಜೆಪಿ ಸಂಸದ ಆರ್.ಕೆ. ಸಿಂಗ್ ಅವರು ಸೋಮವಾರ ಹೇಳಿದ್ದಾರೆ. 

ಈ ಕುರಿತಂತೆ ಮಾತನಾಡಿರುವ ಅವರು, ನಾವು ರಾಷ್ಟ್ರೀಯವಾದಿಗಳಾಗಿದ್ದು, ಭಾರತ ದೇಶದ ವಿರುದ್ಧ ಘೋಷಣೆ ಕೂಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಗಳಲ್ಲ. ದೇಶದ ವಿರುದ್ಧ ಘೋಷಣೆ ಕೂಗಿದರೆ, ಆದು ಯಾರೇ ಆಗಲೀ ಅವರನ್ನು ಥಳಿಸುತ್ತೇವೆಂದು ಹೇಳಿದ್ದಾರೆ. 

ಭಾರತ ದೇಶವನ್ನು ತುಂಡು ತುಂಡಾಗಿಸುತ್ತೇವೆಂದು ದೇಶದ ವಿರುದ್ಧ ಘೋಷಣೆ ಕೂಗುತ್ತಿದ್ದರೂ ನಾವು ಸುಮ್ಮನೆ ಕುಳಿತುಕೊಳ್ಳುವ ಜನರಲ್ಲ. ನಾವು ರಾಷ್ಟ್ರೀಯವಾದಿಗಳು, ದೇಶದ ವಿರುದ್ಧ ಯಾರೇ ಆದರೂ ಘೋಷಣೆ ಕೂಗುತ್ತಿರುವುದು ಕಂಡು ಬಂದರೆ ಕೂಡಲೇ ಅವರನ್ನು ನಾವು ಥಳಿಸುತ್ತೇವೆಂದು ತಿಳಿಸಿದ್ದಾರೆ. 

ಇದೇ ವೇಳೆ ಉತ್ತರಪ್ರದೇಶ ರಾಜ್ಯ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಅವರು ಆಯ್ಕೆಯಾಗಿರುವ ಕುರಿತಂತೆ ಮಾತನಾಡಿರುವ ಅವರು, ಯೋಗಿ ಆದಿತ್ಯನಾಥ್ ಅವರು ಉತ್ತಮ ವ್ಯಕ್ತಿಯಾಗಿದ್ದು, ರಾಷ್ಟ್ರೀಯವಾದಿ ವ್ಯಕ್ತಿಯಾಗಿದ್ದಾರೆಂದು ಹೇಳಿದ್ದಾರೆ. 
SCROLL FOR NEXT