ದೇಶ

ಸುನಂದಾ ಪುಷ್ಕರ್ ಬಗ್ಗೆ ಮುಚ್ಚಿಡಲು ಏನೂ ಇಲ್ಲ: ಶಶಿ ತರೂರ್

Manjula VN
ತಿರುವನಂತಪುರ: ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ ಕುರಿತಂತೆ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮಂಗಳವಾರ ಹೇಳಿದ್ದಾರೆ. 
ಸುನಂದಾ ಪುಷ್ಕರ್ ಸಾವಿನ ರಹಸ್ಯವನ್ನು ಮುಚ್ಚಿಡುತ್ತಿದ್ದಾರೆಂಬ ಖಾಸಗಿ ವಾಹಿನಿಗಳ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಸುನಂದಾ ಬಗ್ಗೆ ಮುಚ್ಚಿಡುವಂತಹದ್ದು ಏನೂ ಇಲ್ಲ. ಮಾಧ್ಯಮದಲ್ಲಿ ಪ್ರಸಾರವಾಗಿರುವ ವರದಿಗಳನ್ನು ತಿರುಚಲಾಗಿದ್ದು, ಈ ಕುರಿತ ವರದಿಗಳಿಗೆ ಸಂಬಂಧಿಸಿ ಎಲ್ಲಾ ಸತ್ಯಗಳು ಪೊಲೀಸರಿಗೆ ತಿಳಿದಿದೆ ಎಂದು ಹೇಳಿದ್ದಾರೆ. 
ತಮ್ಮ ವಾಹಿನಿ ಬಗ್ಗೆ ಜನರ ಗಮನ ಸೆಳೆಯುವ ಉದ್ದೇಶ ಹೊಂದಿರುವ ವಾಹನಿಯೊಂದು ಈ ರೀತಿಯ ಕೆಲಸಗಳನ್ನು ಮಾಡುತ್ತಿದೆ. ಅವರಿಗೆ ಸತ್ಯದ ಬಗ್ಗೆ ಆಸಕ್ತಿಯಿಲ್ಲ. ವೈಯಕ್ತಿದ ದ್ವೇಷವನ್ನು ಈರೀತಿಯಾಗಿ ತೀರಿಸಿಕೊಳ್ಳುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೋಪ ಹಾಗೂ ಬೇಸರವಾಗುತ್ತಿದೆ. 
ಸುನಂದಾ ಬಗ್ಗೆ ಮುಚ್ಚಿಡಲು ಏನೂ ಇಲ್ಲ. ತನಿಖೆ ಕುರಿತಂತೆ ಪೊಲೀಸರಿಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿದ್ದೇನೆ. ಕಳೆದ 3 ವರ್ಷಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುನಂದಾ ಅವರನ್ನು ಕೊಲೆಯೇ ಎಂಬುದನ್ನು ಈವರೆಗೂ ಪತ್ತೆ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ. 
SCROLL FOR NEXT