ದೇಶ

"ಕುಲಭೂಷಣ್ ಜಾದವ್ ಶೂ ತೆಗೆದು ಪಾಕ್ ಪ್ರಧಾನಿ ಮೇಲೆ ಎಸೆದವರಿಗೆ 20 ಲಕ್ಷ ಬಹುಮಾನ"!

Srinivasamurthy VN

ಹೈದರಾಬಾದ್: ಭಾರತದ ಕುಲಭೂಷಣ್ ಜಾದವ್ ಅವರ ಶೂ ತೆಗೆದುಕೊಂಡು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಎಸೆದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಮೌಲಾನಾ ಅತಿಫ್ ಖಾದ್ರಿ ಹೇಳಿದ್ದಾರೆ.

ಈ ಹಿಂದೆ ಗಾಯಕ ಸೋನು ನಿಗಮ್ ವಿರುದ್ಧ ಫತ್ವಾ ಹೊರಡಿಸಿ ಸುದ್ದಿಗೆ ಗ್ರಾಸವಾಗಿದ್ದ ಮೌಲಾನಾ ಅತಿಫ್ ಖಾದ್ರಿ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಪಾಕಿಸ್ತಾನದ ವಶದಲ್ಲಿರುವ ಭಾರತೀಯ ಕುಲಭೂಷಣ್ ಜಾದವ್ ಅವರ ಶೂ  ತೆಗೆದುಕೊಂಡು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ  ಕುತ್ತಿಗೆಗೆ ಹೊಡೆದವರನ್ನು ದೇಶಾದ್ಯಂತ ಮೆರವಣಿಗೆ ಮಾಡಿ ಅವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಹೇಳಿದ್ದಾರೆ.

ಈ ಹಿಂದೆ ಗಾಯಕ ಸೋನು ನಿಗಮ್ ಅವರ ಟ್ವೀಟ್ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮೌಲಾನಾ ಅತಿಫ್ ಖಾದ್ರಿ ಸೋನು ನಿಗಮ್ ಅವರ ಕೇಶ ಮುಂಡನೆ ಮಾಡಿದವರಿಗೆ 10 ಲಕ್ಷ ರು.ಬಹುಮಾನ ನೀಡುವುದಾಗಿ  ಘೋಷಣೆ ಮಾಡಿದ್ದರು. ಆ ಮೂಲಕ ಗಾಯಕನ ವಿರುದ್ಧ ಸಮರ ಸಾರಿದ್ದರುಯ ಈ ಹೇಳಿಕೆ ಬೆನ್ನಲ್ಲೇ ಗಾಯಕ ಸೋನು ನಿಗಮ್ ತಮ್ಮ ಕೇಶ ಮುಂಡನೆ ಮಾಡಿಸಿಕೊಂಡು ಬಹಿರಂಗ ಸವಾಲೆಸೆದಿದ್ದರು.

SCROLL FOR NEXT