ಸಂಗ್ರಹ ಚಿತ್ರ 
ದೇಶ

ಸಲಿಂಗಕಾಮ ಪ್ರವೃತ್ತಿಯಷ್ಟೇ, ಶಾಶ್ವತವಲ್ಲ: ಶ್ರೀ ಶ್ರೀ ರವಿಶಂಕರ್

ಸಲಿಂಗಕಾಮ ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಹಾಗೂ ಖ್ಯಾತ ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.

ನವದೆಹಲಿ: ಸಲಿಂಗಕಾಮ ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಹಾಗೂ ಖ್ಯಾತ ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ. 
ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಅವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆ ಸಂಬಂಧ ದೆಹಲಿ ಜೆಎನ್ ಯು ವಿವಿಯಲ್ಲಿ ಆಯೋಜಿಸಲಾಗಿದ್ದ 13ನೇ ನೆಹರೂ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳೊಂದಿಗೆ ನಡೆಸಿದ ರವಿಶಂಕರ್ ಅವರು, ಸಲಿಂಗಕಾಮ ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ,, ಪರಿಸ್ಥಿತಿಗೆ ಅನುಗುಣವಾಗಿ ಅದು ಬದಲಾಗುತ್ತದೆ ಎಂದು ಹೇಳಿದ್ದಾರೆ.
ಸಲಿಂಗಕಾಮದ ಕುರಿತು ವಿದ್ಯಾರ್ಥಿಯೋರ್ವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಲಿಂಗಕಾಮಿಯಾಗಿರುವುದು ಪ್ರವೃತ್ತಿಯಷ್ಟೇ.. ಅದು ಶಾಶ್ವತವಲ್ಲ.. ಕಾಲಾನು ಕ್ರಮದಲ್ಲಿ ಅದು ಬದಲಾಗಬಹುದು. ಸಲಿಂಗ ಕಾಮ ಎನ್ನುವುದು  ಕಾಯಿಲೆ ಅಥವಾ ಮಾನಸಿಕ ರೋಗವಲ್ಲ.. ಅದು ಪ್ರವೃತ್ತಿಯಷ್ಟೇ..ಸಮಾಜ ಇದನ್ನು ಕೀಳಾಗಿ ಕಂಡಾಗ ನೀನು ಅದರ ವಿರುದ್ಧ ಎದ್ದು ನಿಲ್ಲಬೇಕು. ಆಗ ನಿನ್ನನ್ನು ಯಾರೂ ದೂಷಿಸುವುದಿಲ್ಲ.. ಆದರೆ ನೀನು ನಿನ್ನ ಪ್ರವೃತ್ತಿ ಬಗ್ಗೆ  ಬೇಸರಿಸಿಕೊಂಡರೆ ನಿನ್ನನ್ನು ಸಮಾಜದ ಯಾರೂ ಕೂಡ ಸಮಾಧಾನ ಪಡಿಸುವುದಿಲ್ಲ. 
ಪ್ರಸ್ತುತ ನಿನ್ನ ಪ್ರವೃತ್ತಿಯಾಗಿರುವ ಸಲಿಂಗಕಾಮ ಬದಲಾಗಬಹುದು. ಅದೇನೂ ಶಾಶ್ವತವಲ್ಲ. ಕಾಲಾನುಕ್ರಮದಲ್ಲಿ ಬಹುಶಃ ನಿನ್ನ ಪ್ರವೃತ್ತಿ ಬದಲಾಗಿ ಭಿನ್ನಲಿಂಗೀಯ ಕಾಮದತ್ತ ನೀನು ಮರಳಬಹುದು.ಅಂತೆಯೇ ಪ್ರಸ್ತುತ ಭಿನ್ನಿ  ಲಿಂಗೀಯ ಕಾಮದಲ್ಲಿರುವವರೂ ಕೂಡ ಮುಂದೆ ಸಲಿಂಗಿಕಾಮಿಗಳಾಗಬಹುದು ಎಂದು ರವಿಶಂಕರ್ ಹೇಳಿದ್ದಾರೆ.
ಇದೇ ವೇಳೆ ಅಯೋಧ್ಯೆ ರಾಮಮಂದಿರ ಕುರಿತು ಮಾತನಾಡಿದ ರವಿಶಂಕರ್ ಅವರು, ಶೀಘ್ರದಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ, ನವೆಂಬರ್ 16ರಂದು ಅವರನ್ನು ಭೇಟಿ  ಮಾಡಲು ತೆರಳುತ್ತಿದ್ದೇನೆ. ಭೇಟಿ ಹಿಂದೆ ಯಾವುದೇ ರಹಸ್ಯ ಅಜೆಂಡಾವಿಲ್ಲ..ಕೋಮುಸೌಹಾರ್ಧಾರ್ಥವಾಗಿಯೇ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT